ಆ.31 ರಂದು ಸುನೀಲ್ ಬೋಸ್ ಹುಟ್ಟುಹಬ್ಬ : ಟಿ.ನರಸೀಪುರದಲ್ಲಿ ಬೃಹತ್ ಉದ್ಯೋಗ ಮೇಳ

ಚಾಮರಾಜನಗರ: ಸಮಾಜ ಕಲ್ಯಾಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪರವರ ಸುಪುತ್ರ ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್ ಅವರ ೪೧ ನೇ ವ? ಹುಟ್ಟುಹಬ್ಬದ ಪ್ರಯುಕ್ತ ಆ.೩೧ ರಂದು ಟಿ.ನರಸೀಪುರದಲ್ಲಿ ಬೃಹತ್ ಉದ್ಯೋಗಮೇಳ ಅಯೋಜಿಸಲಾಗಿದೆ ಎಂದು ಡಾ. ಎಚ್.ಸಿ. ಮಹದೇವಪ್ಪ ಅಭಿಮಾನಿ ಬಳಗದ ಸಂಚಾಲಕ ಡಾ. ಮಹೇಶ್ ಸೋಸಲೆ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ ಅವರು ಪುತ್ರರಾದ ಸುನೀಲ್ ಬೋಸ್ ಅವರು ತಂದೆಯವರೊಂದಿಗೆ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಅವರ ಹುಟ್ಟುಹಬ್ಬವನ್ನು ಸಮಾಜಮುಖಿಯಾಗಿ ಅಚರಣೆ ಮಾಡುವ ಸಲುವಾಗಿ ೨ ಸಾವಿರಕ್ಕು ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಲಾಗುತ್ತದೆ.

ಆ. ೩೧ ರಂದು ತಿ. ನರಸೀಪುರ ಪಟ್ಟಣದ ಎಪಿಎಂಸಿ ಅವರಣದಲ್ಲಿ ಬೆಳಗ್ಗೆ ೧೦ ಗಂಟೆಗೆ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ನೂರಕ್ಕು ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಎಸ್‌ಎಸ್‌ಎಲ್‌ಸಿ., ಪಿಯುಸಿ, ಐಟಿಐ, ಡಿಪ್ಲೋಮೋ, ಇಂಜಿನಿಯರಿಂಗ್, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವವರರಿಗೆ ಪ್ರತಿಷ್ಠಿತ ಕಂಪನಿಗಳನ್ನು ಉದ್ಯೋಗವನ್ನು ಕೊಡಿಸಲಾಗುತ್ತದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರವನ್ನೊಳಗೊಂಡಂತೆ ಕಾರ್ಯಕ್ರಮ ಇದಾಗಿದೆ. ಚಾ.ನಗರ ಹಾಗೂ ಮೈಸೂರು ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಹೇಶ್ ಮನವಿ ಮಾಡಿದರು.

ಹಿರಿಯ ನಾಯಕರಾದ ಡಾ. ಎಚ್.ಸಿ. ಮಹದೇವಪ್ಪ ಅವರು ಬಗ್ಗೆ ಮಾತನಾಡುವ ನೈತಿಕತೆ ಮೂಡ್ನಾಕೂಡು ಪ್ರಕಾಶ್ ಅವರಿಗಿಲ್ಲ. ದಲಿತ ಚಳವಳಿ ಹಾಗೂ ದಲಿತರ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಮಹದೇವಪ್ಪ ಅವರ ಸೇವೆ ಬಗ್ಗೆ ಅರಿವಿನ ಕೊರತೆಯಿಂದ ಇಂತ ಹೇಳಿಕೆ ನೀಡಿದ್ದಾರೆ. ಅವರನ್ನು ಅಧುನಿಕ ಶಕುನಿಗೆ ಹೋಲಿಕೆ ಮಾಡಿರುವ ಪ್ರಕಾಶ್ ಬಿಜೆಪಿಯಲ್ಲಿದ್ದುಕೊಂಡು ಅಧುನಿಕ ಭಸ್ಮಾರರಾಗಿದ್ದಾರೆ. ಇನ್ನಾದರು ವಾಸ್ತಂಶವನ್ನು ತಿಳಿದುಕೊಂಡು ಮಾತನಾಡಲಿ ಎಂದು ಡಾ. ಮಹೇಶ್ ಸೋಸಲೆ ಟೀಕೆ ಮಾಡಿದರು.

ಗೋಷ್ಠಿಯಲ್ಲಿ ಬಳಗದ ಡಾ. ಗುರುಮೂರ್ತಿ ಕೊಳ್ಳೇಗಾಲ, ಶಿವಶಂಕರ್ ಬಂಡಹಳ್ಳಿ, ರೋಹನ್ ಹೊಂಗನೂರು, ಜೋಗಿ ಮಹೇಶ್ ಆಶೋಕಪುರಂ, ಅರುಣ್‌ಗುಂಡ್ಲುಪೇಟೆ, ದಿಲೀಪ್ ಮುಡಿಗುಂಡ ಇದ್ದರು.

Leave a Reply

Your email address will not be published. Required fields are marked *