ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ ಸಹಾಯಧನ : ಅರ್ಜಿ ಆಹ್ವಾನ

ಚಾಮರಾಜನಗರ: ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿ?ನ್ ಯೋಜನೆಯಡಿ ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ ಎಲ್ಲ ವರ್ಗದ ರೈತರಿಗೂ ಶೇ.೫೦ರ? ಸಹಾಯಧನ ನೀಡಲಾಗುತ್ತದೆ.

ಘಟಕದಿಂದ ಈರುಳ್ಳಿಯನ್ನು ೨-೩ ತಿಂಗಳಿನವರೆಗೆ ಸಂಸ್ಕರಿಸಬಹುದು. ಯಾವುದೇ ನ?ವಿಲ್ಲದೇ ಸಾಧ್ಯವಾದ? ಕಾಲ ಗೆಡ್ಡೆಗಳನ್ನು ಕಾಪಾಡಿಕೊಳ್ಳಲು ಮತ್ತು ದೂರದ ಮಾರುಕಟ್ಟೆಗೆ ಹೆಚ್ಚು ನ?ವಿಲ್ಲದೇ ವ?ವಿಡೀ ಸಾಗಿಸಲು, ಮಾರುಕಟ್ಟೆ ಮಾಡಲು ಈರುಳ್ಳಿ ಶೇಖರಣಾ ಘಟಕವು ಪ್ರಮುಖವಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಹೆಚ್ಚು ನ?ವನ್ನು ತಪ್ಪಿಸಲು ಹಾಗೂ ಅನುಕೂಲವಾಗಲು ಸಹಾಯಧನ ನೀಡಲಾಗುತ್ತಿದೆ.
ಇಲಾಖೆಯ ಮಾರ್ಗಸೂಚಿಯಂತೆ ಈರುಳ್ಳಿ ಶೇಖರಣಾ ಘಟಕವು ೧೨ ಮೀಟರ್ ಉದ್ದ ಘಿ ೩.೬೦ ಮೀ ಅಗಲ x ೧.೮೦ ಮೀ (ಬದಿಯ ಎತ್ತರ) ಘಿ ೨.೧೦ ಮೀ (ಮಧ್ಯದ ಎತ್ತರ) ಇದ್ದು, ೯೦ ಘ.ಮೀ ಒಳಾಂಗಣ ಸಾಮರ್ಥ್ಯವನ್ನು ಹೊಂದಿರಬೇಕು.

ಕನಿ? ೦.೪೦ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆದಿರಬೇಕು. ಆಸಕ್ತ ರೈತರು ಅರ್ಜಿ ನಮೂನೆ, ಎರಡು ಭಾವಚಿತ್ರ, ಪ್ರಸ್ತುತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಗಣಕೀಕೃತ ಬೆಳೆ ದೃಢೀಕರಣ ಪತ್ರ, ಪರಿಶಿ? ಜಾತಿ, ಪಂಗಡದ ರೈತರಾಗಿದಲ್ಲಿ ಆರ್.ಡಿ ಸಂಖ್ಯೆಯುಳ್ಳ ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಈ ಕೂಡಲೇ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಕಾರ್ಯದೇಶ ಪಡೆದ ನಂತರ ಕಾಮಗಾರಿ ಪ್ರಾರಂಭಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *