ಉದ್ದೇಶಿತ ಅರುಂಧತಿ ಕ್ರೆಡಿಟ್‌ಕೋ ಅಪರೇಟಿವ್ ಸೂಸೈಟಿ ಡಿಸೆಂಬರ್‌ನಲ್ಲಿ ಉದ್ಘಾಟನೆ : ಅರಕಲವಾಡಿ ಜವರಯ್ಯ

ಚಾಮರಾಜನಗರ: ಆದಿಜಾಂಬವ ಸಮುದಾಯದ ಹಿತದೃಷ್ಠಿಯಿಂದ ಸ್ಥಾಪಿಸಲಾಗುತ್ತಿರುವ ಉದ್ದೇಶಿತ ಅರುಂಧತಿ ಕ್ರೆಡಿಟ್‌ಕೋ ಅಪರೇಟಿವ್ ಸೂಸೈಟಿಯು ಡಿಸೆಂಬರ್‌ನಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು  ಸೊಸೈಟಿಯ ಮುಖ್ಯ ಪ್ರವರ್ತಕ ಜವರಯ್ಯ ಅರಕಲವಾಡಿ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ಉದ್ದೇಶಿತ ಅರುಂಧತಿ ಕ್ರೆಡಿಟ್‌ಕೋ ಅಪರೇಟಿವ್ ಸೂಸೈಟಿಯ ಷೇರು ಸಂಗ್ರಹದಾರರ ಸಭೆಯಲ್ಲಿ ಅವರು ಮಾತನಾಡಿ, ಸೊಸೈಟಿ ಸ್ಥಾಪನೆಗೆ 750 ಷೇರುದಾರರ ಗುರಿಯಿದ್ದು, 876 ಷೇರುದಾರರನ್ನು ಮಾಡಿಕೊಂಡಿದ್ದು, ಈಗಾಗಲೇ ಸೊಸೈಟಿಯನ್ನು ಗುರಿಯನ್ನು ತಲುಪಿದ್ದೇವೆ. ಸಹಕಾರ ಸಂಘಗಳ ಇಲಾಖೆಯ ಉಪನಿಬಂಧಕರ ನಿಯಮಾವಳಿ ಪ್ರಕಾರ ಸೊಸೈಟಿಯ ಜಿಲ್ಲೆಯ ಪರ್ವತಕರು ಅವರವರ ಗುರಿಯನ್ನು ಪೂರೈಸಿದ್ದು ನೊಂದವಣಿಗೆ ಸಿದ್ದರಾಗಿದ್ದು ನವೆಂಬರ್ ಕೊನೆವಾರದಲ್ಲಿ ನೋಂದಣಿ ಮಾಡಿಸಿ ಡಿಸೆಂಬರ್ ಮೊದಲ ವಾರದಲ್ಲಿ ಸೊಸೈಟಿಯನ್ನು ಅಧಿಕೃತವಾಗಿ ಉದ್ಘಾಟಿನೆ ಮಾಡಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು ಮಾತನಾಡಿ, ಸಮುದಾಯದಿಂದ ಸೊಸೈಟಿಯಲ್ಲಿ ಷೇರುದಾರರಿಗೆ ಯಾವುದೇ ಗೊಂದಲ ಆತಂಕಬೇಡ ಸರ್ಕಾರದ ಸುತ್ತೋಲೆಯಂತೆ ಸೊಸೈಟಿ ಸ್ಥಾಪನೆ ಮಾಡಲಾಗಿದೆ ಇದರ ಉಪಯೋಗವನ್ನು ಜಿಲ್ಲೆಯ ಸಮುದಾಯ ಪ್ರತಿಯೊಬ್ಬರೂ ಸಾಲಸೌಲಭ್ಯವನ್ನು ಪಡೆದು ಆರ್ಥಿಕವಾಗಿ ತಾವು ಸಬಲರಾಗುವ ಮೂಲಕ ಸೊಸೈಟಿ ಪ್ರಗತಿಗೆ ಸಹಕರಿಸಿ ಈ ಸೊಸೈಟಿ ಸಮುದಾಯದ ಮುಂದಿನ ಪೀಳಿಗೆಗೆ ಮಾದರಿ ಆಗಬೇಕು ಎಂದರು. 

ಸಭೆಯಲ್ಲಿ ಸಹಕಾರ ಸಂಘಗಳ ಇಲಾಖೆ ನಿವೃತ್ತ ಉಪನಿರ್ದೇಶಕ ಸಿ.ಮಹದೇವಯ್ಯ, ಕೆ.ಹನುಮಂತರಾಜು ಇಗ್ಗಲೂರು, ನಿವೃತ್ತ ಆಡಿಟರ್ ಅಧಿಕಾರಿ ರೇವಣ್ಣ, ಕಾಗಲವಾಡಿ ಮಹದೇವಸ್ವಾಮಿ, ವಕೀಲ ರಾಜೇಂದ್ರ, ಪ್ರೊ. ಲಿಂಗಣ್ಣ ಹರವೆ, ಶಿವಕುಮಾರ್ ರಾಮಸಮುದ್ರ, ಹಸಗೂಲಿ ಸಿದ್ದಯ್ಯ, ವಕೀಲರಾದ ಸಿದ್ದೇಶ ಹಂಗಳ,  ಸಿದ್ದಯ್ಯ ಅಂಕಹಳ್ಳಿ, ಮೂಡಳ್ಳಿ ಮೂರ್ತಿ, ಸಿ.ಚನ್ನಬಸವಯ್ಯ,  ಹೆಚ್.ಲಿಂಗರಾಜು, ಎಂ.ಶಿವಕುಮಾರ್, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ ಗುರುಲಿಂಗಯ್ಯ,  ಮಾದೇಶ್, ಹೆಚ್.ಹೆಚ್. ನಾಗರಾಜು, ಶಿವಮಲ್ಲು, ಸಿದ್ದಪ್ಪಾಜಿ, ಚಿಕ್ಕಮಾದಯ್ಯ,  ರಾಚಯ್ಯಮಲ್ಲಯ್ಯನಹುಂಡಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *