ಉಮ್ಮತ್ತೂರು ಪಿಎಸಿಸಿ ಬ್ಯಾಂಕ್‍ಗೆ 6.86 ಲಕ್ಷ ರೂ. ನಿವ್ವಳ ಲಾಭ : ಶ್ರೀಕಂಠಸ್ವಾಮಿ

ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಪ್ರಸಕ್ತ ವರ್ಷದಲ್ಲಿ 6.86 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ಶ್ರೀಕಂಠಸ್ವಾಮಿ ತಿಳಿಸಿದರು.

ಗ್ರಾಮದ ಸಂಘದ ಅವರಣದಲ್ಲಿ ನಡೆದ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ 5.28 ಕೋಟಿ ರೂ.ಗಳನ್ನು ಕೃಷಿ ಸಾಲವನ್ನು ನೀಡಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ 50.32 ಲಕ್ಷ ರೂ. ಹಾಗೂ ಮಧ್ಯವಾಧಿ ಸಾಲವಗಿ 51.24 ಲಕ್ಷರುಗಳನ್ನು ನೀಡಲಾಗಿದೆ. ಪಡಿತರವನ್ನು ಸಮರ್ಪಕವಾಗಿ ಕಾರ್ಡುದಾರರಿಗೆ ವಿತರಣೆ ಮಾಡುವ ಮೂಲಕ ಸಂಘದ ವ್ಯಾಪ್ತಿಗೆ ಬರುವ ಗ್ರಾಮಗಳ ರೈತರಿಗೆ ವಿತರಣೆ ಮಾಡಲಾಗಿದೆ. ಸಂಘ ಸದಸ್ಯರು ಸರ್ಕಾರ ಸಾಲ ಸೌಲಭ್ಯವನ್ನು ಪಡೆದುಕೊಂಡು ಶೂನ್ಯ ಬಡ್ಡಿ ದರದಲ್ಲಿ ಸಕಾದಲ್ಲಿ ಸಾಲ ಮರು ಪಾವತಿ ಮಾಡಬೇಕು ಅವರು ಮನಿವ ಮಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್. ನಂದೀಶ್ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡರು. ಹೆಚ್ಚುವರಿ ಸೇರಿ 500 ರೂ. ಕಟ್ಟಿ ಸಂಘದ ಸದಸ್ಯತ್ವವನ್ನು ನವೀಕರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕೆÀ್ಷ ಜಯಮ್ಮ, ನಿರ್ದೇಶಕರಾದ ಎಂ. ರೇವಣ್ಣ, ಸೋಮಣ್ಣ, ಪಿ. ನಾಗೇಂದ್ರಸ್ವಾಮಿ, ಎಸ್. ಮಹದೇವಸ್ವಾಮಿ, ಯು.ಎಂ. ನಾಗೇಂದ್ರ, ಮಹದೇವಯ್ಯ, ಮಹದೇವನಾಯಕ, ಕಾಳಶೆಟ್ಟಿ, ರೇವಮ್ಮ, ನೌಕರರಾದ ರವಿ, ಎಂ. ಬಸವಣ್ಣ, ಶಿವಪ್ರಸಾದ್ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *