ಉಜ್ವಲ ಗ್ರಾಹಕರಿಗೆ 400 ರೂ. ಇತರರಿಗೆ 200 ರೂ. ದರ ಇಳಿಕೆ : ಕಮಲಮ್ಮ

ಚಾಮರಾಜನಗರ: ಕೇಂದ್ರ ಸರ್ಕಾರ ದೇಶದ ಜನರಿಗೆ ಓಣಂ ಹಾಗೂ ರಕ್ಷಾ ಬಂಧನ್ ಹಬ್ಬದ ಅಂಗವಾಗಿ ಉಜ್ವಲ ಗ್ರಾಹಕರಿಗೆ ೪೦೦ ರೂ. ಹಾಗೂ ಇತರರಿಗೆ ೨೦೦ ರೂ.ಗಳನ್ನು ಇಳಿಕೆ ಮಾಡಿರುವ ಪ್ರಧಾನಿ ನರೇಂದ್ರ ಹಾಗು ಸಚಿವ ಸಂಪುಟದ ಸದಸ್ಯರ ನಿರ್ಣಯವನ್ನು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ ಸ್ವಾಗತಿಸಿದ್ದಾರೆ.
ದೇಶದ ಸುಭದ್ರ ಆಡಳಿತ ಹಾಗೂ ವಿಶ್ವ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಮೂಲಕ ಜನಪರ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಅರ್ಥಿಕ ಮಟ್ಟವನ್ನು ದ್ವಿಗುಣ ಗೊಳಿಸುವ ಅನೇಕ ಕಾರ್ಯಕ್ರಮಗಳನ್ನು ನೀಡಿ, ಯಶಸ್ವಿಯಾಗಿದ್ದರು. ಆಲ್ಲದೇ ಪ್ರತಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರಬೇಕು. ತಾಯಿಂದರು ಹೊಗೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂಬ ಸದುದ್ದೇಶದಿಂದ ಉಜ್ವಲ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕ ನೀಡಿದ್ದರು ಎಂದರು.
ಈಗ ಆದೇ ಉಜ್ವಲ ಗ್ಯಾಸ್ ಹೊಂದಿರುವ ಬಡ ಕುಟುಂಬಗಳಿಗೆ ಸಿಲಿಂಡರ್ ಪಡೆಯಲು ೨೦೦ ರೂ. ಸಬ್ಸಿಡಿ ಜೊತೆಗೆ ೨೦೦ ರೂ. ರಿಯಾಯಿತಿ ಹಾಗೂ ಇತರೇ ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ೨೦೦ ರೂ.ಗಳ ಕಡಿತ ಮಾಡಿ ಮಹತ್ವ ಆಧೇಶವನ್ನು ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡು ದೇಶದ ಮಹಿಳೆಯರ ಪರವಾಗಿ ಬಿಜೆಪಿ ಸರ್ಕಾರ ಇದೆ ಎಂಬುವುದನ್ನು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಬೀತು ಪಡಿಸಿದ್ದಾರೆ,
ಬಡವರ ಪ್ರತಿ ಅಡುಗೆ ಮನೆಯಲ್ಲಿ ಶುದ್ಧ ಅನಿಲ ಸರಬರಾಜಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಂದನೆಗಳು. ಈಗ ಉಜ್ವಲ ೨.೦ ನಿಂದಾಗಿ ಬಡವರ ಅಡುಗೆ ಮನೆಗೆ ನೂರಕ್ಕೆ ನೂರರ? ಉಚಿತ ಎಲ್ಪಿಜಿ ದೊರೆಯುತ್ತಿದೆ. ಮಹಿಳೆಯರ ಪರಿಶುದ್ಧ ಆರೋಗ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ೨೦೧೪ರಲ್ಲಿ ೧೪.೫ ಕೋಟಿ ಗೃಹೋಪಯೋಗಿ ಗ್ಯಾಸ್ ಸಂಪರ್ಕ ಪಡೆದ ಫಲಾನುಭವಿಗಳಿದ್ದರು. ಈಗ ೩೩ ಕೋಟಿಗೆ ತಲುಪಿದೆ, ಈ ಪೈಕಿ ಸುಮಾರು ೯.೬೦ ಕೋಟಿ ಉಜ್ವಲ ಫಲಾನುಭವಿಗಳಿದ್ದಾರೆ. ಕೇಂದ್ರ ಸರ್ಕಾರ ಇನ್ನು ೭೫ ಲಕ್ಷ ಉಜ್ವಲ ಸಂಪರ್ಕವನ್ನು ನೀಡಲು ಮುಂದಾಗಿದೆ. ಅಡಿಗೆ ಅನಿಲ ದರ ಇಳಿಕೆ ಮಾಡಿರುವುದು ದೇಶದ ಹಾಗೂ ರಾಜ್ಯದ ಜನರಲ್ಲಿ ಹರ್ಷ ಮೂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲಮ್ಮ ತಿಳಿಸಿದ್ದಾರೆ.