ಕನ್ನಡ ಚಿತ್ರರಂಗ, ರಂಗಭೂಮಿಗೆ ಶಂಕರ್ ನಾಗ್ ರವರ ಕೊಡುಗೆ ಅಮೂಲ್ಯ : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಗೆ ಶಂಕರ್ ನಾಗ್ ರವರ ಕೊಡುಗೆ ಅಮೂಲ್ಯವಾದದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ,ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಂಕರ್ ನಾಗ್ ಜನ್ಮದಿನ ಹಾಗೂ ಶಂಕರ್ ನಾಗ್ ರವರ ಕೊಡುಗೆಗಳು ಕುರಿತು ಮಾತನಾಡುತ್ತಾ ಶಂಕರ್ ನಾಗ್ ಅಪ್ಪಟ ಪ್ರತಿಭಾವಂತ. ರಂಗಭೂಮಿ ಕಲಾವಿದ. ನಿರ್ದೇಶಕರಾಗಿ ನಟರಾಗಿ,ತಮ್ಮ ಅಭಿನಯದ ಮೂಲಕ ಚಲನಚಿತ್ರರಂಗದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಶಂಕರ್ ನಾಗ್ ರವರ ಬುದ್ಧಿವಂತಿಕೆ, ಚಿಂತನಾಶೀಲತೆ, ದೂರದೃಷ್ಟಿ ಕೋನ ಅಪಾರವಾದದ್ದು. ಚಲನಚಿತ್ರರಂಗದಲ್ಲಿ ಮತ್ತು ಸಮಾಜಕ್ಕೆ ಅವರ ಕೊಡುಗೆ ಮರೆಯಲಾಗದು. ಮೆಟ್ರೋ ಪರಿಕಲ್ಪನೆ ಶಂಕರ್ ನಾಗ್ ರವರ ಚಿಂತನೆಯ ಫಲವಾಗಿದೆ ಎಂದರು.

ಕನ್ನಡಿಗರು ಕಲಾವಿದರನ್ನು ಗೌರವಿಸುವುದು ಕರ್ತವ್ಯವಾಗಬೇಕು ನಾಡು ನುಡಿ ಜಲ ಭಾಷೆಗೆ ಹೋರಾಟ ಹಾಗೂ ದುಡಿಯುವ ಮನಸ್ಸುಗಳಿಗೆ ಸ್ಪೂರ್ತಿ ತುಂಬವ ಕಾರ್ಯವನ್ನು ಮಾಡಬೇಕಿದೆ. ಕನ್ನಡದ ಕಟ್ಟುವ ಕೆಲಸವನ್ನು ಮಾಡುವ ಸರ್ವರಿಗೂ ಪ್ರೋತ್ಸಾಹಿಸಬೇಕು. ಆಟೋ ಚಾಲಕರಿಗೆ ಅಪಾರ ಗೌರವ ತಂದದ್ದು ಶಂಕರ್ ನಾಗ್ ಎಂದು ತಿಳಿಸಿದರು.

ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ನಾಗ್ ಹರದನಹಳ್ಳಿ ರವರು ಮಾತನಾಡಿ ಪ್ರತಿ ವರ್ಷ ಚಾಮರಾಜನಗರದಲ್ಲಿ ಶಂಕರ್ ನಾಗ್ ರವರ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಲಕ್ಷಾಂತರ ಶಂಕರ್ ನಾಗ್ ಅಭಿಮಾನಿಗಳಿಗೆ ಸ್ಪೂರ್ತಿಯಾಗಿ ಜೀವನಕ್ಕೊಂದು ಶ್ರೇಷ್ಠತೆಯನ್ನು ತಂದುಕೊಟ್ಟ ಶಂಕರ್ ನಾಗ್ ರವರ ಜನ್ಮದಿನ ಸಾರ್ಥಕ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಮತ್ತು ಕಾರ್ಯಗಳನ್ನು ಮಾಡಬೇಕು . ಅವರ ಸಮಯ ಪ್ರಜ್ಞೆ ,ಕರ್ತವ್ಯ ನಿಷ್ಠೆ, ಸರಳತೆ ,ನಮ್ಮೆಲ್ಲರಿಗೂ ಆದರ್ಶವೆಂದರು.

ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಯಣ್ಣ ಮಾತನಾಡಿ ಬಾಲ್ಯದಿಂದಲೂ ಶಂಕರ್ ನಾಗ್ ರವರ ಅಭಿಮಾನಿಯಾದ ನಮಗೆ ಜೀವನ ಸ್ಪೂರ್ತಿಯನ್ನು ತುಂಬಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುವಲ್ಲಿ ಅವರ ಜೀವನ ಪ್ರಭಾವವು ಕಾರಣವಾಗಿದೆ. ಶಿಸ್ತು ಸಮಯ ಚಿಂತನೆ ಹಾಗೂ ಸಮಾಜಕ್ಕೆ ಅರ್ಪಿಸಿಕೊಳ್ಳುವ ಮಾನಸಿಕತೆಯನ್ನು ಅವರ ಅಭಿಮಾನಿಗಳಾಗಿ ಸರ್ವರು ರೂಪಿಸಿಕೊಂಡಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ರವಿಚಂದ್ರ ಪ್ರಸಾದ್ ಮಾತನಾಡಿ ಮೆಟ್ರೋ ಗೆ ಶಂಕರ್ ನಾಗ್ ರವರ ಹೆಸರನ್ನು ನಾಮಕರಣ ಮಾಡುವ ಮೂಲಕ ಕನ್ನಡದ ಶ್ರೇಷ್ಠ ನಟನಿಗೆ ಗೌರವವನ್ನು ಸಲ್ಲಿಸಬೇಕು ಕನ್ನಡಿಗರಿಗೆ ಹೆಮ್ಮೆಯ ಹಾಗೂ ಸ್ಪೂರ್ತಿಯ ನಟ ಶಂಕರ್ ನಾಗ್ ಎಂದರು.

ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿ ಅವರ ಚಲನಚಿತ್ರಗಳು ಪ್ರತಿಯೊಂದರಲ್ಲೂ ಉತ್ತಮ ಸಾಮಾಜಿಕ ಸಂದೇಶಗಳನ್ನು ನೀಡಿದೆ ಜನರಿಗೆ ಹತ್ತಿರವಾಗುವ ಚಲನಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿ ಅಪಾರ ಖ್ಯಾತಿಯನ್ನು ಪಡೆದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ, ಸರಸ್ವತಿ , ಕಾರ್ಯದರ್ಶಿ ಪದ್ಮಾಕ್ಷಿ, ಸಿಡಿ ಪ್ರಕಾಶ್, ಎಸ್ ಪಿ ಬಾಲಸುಬ್ರಮಣ್ಯಂ ಕಲಾ ವೇದಿಕೆ ಅಧ್ಯಕ್ಷ ಶಿವಣ್ಣ, ಜನಪದ ಗಾಯಕರಾದ ರತ್ನಮ್ಮ,ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *