ಕುಂಬಾರರ ಗುಡಿ ಹಾಗು ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಸಂಘದಿಂದ ಸಾಲ ಸೌಲಭ್ಯ : ಪಿ. ಮಹದೇವಸ್ವಾಮಿ

ಚಾಮರಾಜನಗರ: ಜಿಲ್ಲಾ ಕುಂಬಾರರ ಕೈಗಾರಿಕಾ ವಿವಿದೊದ್ದೇಶ ಸಹಕಾರ ಸಂಘವು ಕುಂಬಾರ ಸಮುದಾಯದ ಮೂಲ ವೃತ್ತಿ ಹಾಗೂ ಗುಡಿ ಕೈಗಾರಿಕೆಗಳನ್ನು ಪ್ರೊತ್ಸಾಹಿಸಿ, ಸಮುದಾಯವನ್ನು ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಸಂಘ ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಪ್ರಸಕ್ತ ವರ್ಷದಲ್ಲಿ 5.50 ಲಕ್ಷ ರೂ.ಗಳ ನಿವ್ವಳ ಲಾಭ ಪಡೆದುಕೊಂಡಿದೆ ಎಂದು ಸಂಘ ಅಧ್ಯಕ್ಷ ಪಿ. ಮಹದೇವಸ್ವಾಮಿ ತಿಳಿಸಿದರು.

ನಗರದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಹಿಂಭಾಗದಲ್ಲಿರುವ ಸಂಘದ ಕಚೇರಿ ಅವರಣದಲ್ಲಿ ನಡೆದ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಘವು 2013ರಲ್ಲಿ ಸ್ಥಾಪನೆಗೊಂಡು ಉತ್ತಮವಾಗಿ ವಹಿವಾಟು ನಡೆಸುತ್ತಿದೆ. ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೊರೈಸಿದೆ. ಸಂಘದಲ್ಲಿ 925ಕ್ಕು ಹೆಚ್ಚು ಸದಸ್ಯರಿದ್ದು 1785 ಷೇರು ಹೊಂದಿದೆ. ಸಂಘದ ಅಭಿವೃದ್ದಿಗಾಗಿ ಸದಸ್ಯರು ದೇಣಿಗೆಯಾಗಿ 3.15 ಲಕ್ಷ ರೂ. ಗಳನ್ನು ನೀಡಿದ್ದಾರೆ ಎಂದರು.

ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉತ್ಸಾಹದಿಂದ ಸಂಘದ ಕಾರ್ಯ Zಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಕೊಂಡು ಸಂಘವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಪಡಿಸಲು ಮುಂದಾಗಬೇಕು. ಈಗಾಗಲೇ ಸಂಘದ ಕಚೇರಿಯನ್ನು ಸ್ಥಳಾಂತರ ಮಾಡಿ ಜೋಡಿ ರಸ್ತೆಯ ವ್ಯಾಪ್ತಿಯಲ್ಲಿ ತೆರೆಯಲು ಚಿಂತನೆ ಮಾಡಲಾಗಿದೆ. ಅಲ್ಲದೇ ಸಂಘದ ಸದಸ್ಯರಿಗೆ ಇ ಸ್ಪಾಪಿಂಗ್ ವ್ಯವಸ್ಥೆ, ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡಲು ಕಾರ್ಯ ಯೋಜನೆ ರೂಪಿಸಿದ್ದು, ಸಂಘದ ಸದಸ್ಯರು ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಶಿವಣ್ಣ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ರಾಮಶೆಟ್ಟಿ, ನಿರ್ದೇಶಕರಾದ ಎ.ಎನ್.ರಾಜಣ್ಣ, ಸಿದ್ದಶೆಟ್ಟಿ, ವೈ.ಆರ್. ಉಮೇಶ್, ಎಸ್. ಸೋಮಣ್ಣ, ಎನ್. ನಿಂಗರಾಜು, ಕೆ.ಕೇಶವಮೂರ್ತಿ, ಕೆ. ಹನುಮಂತಶೆಟ್ಟಿ, ಸಾವಿತ್ರಮ್ಮ, ಎಂ. ಲಕ್ಷ್ಮಿ, ಸಾವಿತ್ರಮ್ಮ, ಎಂ.ಲಕ್ಷ್ಮಿ, ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *