ಕೋಡಿಮೋಳೆ ಗ್ರಾಮದಲ್ಲಿ ಭಗತ್‍ಸಿಂಗ್ ಜನ್ಮದಿನಾಚರಣೆ

ಚಾಮರಾಜನಗರ: ಬುಧವಾರ ತಾಲೂಕಿನ ಕೋಡಿಮೋಳೆ ಗ್ರಾಮದ ಭಗತ್ ಸಿಂಗ್ ವೃತ್ತದಲ್ಲಿ ಭಗತ್ ಯುವ ಯುವಸೇನೆ ಹಾಗೂ ಎಐಡಿ ವೈಓ ಘಟಕದ ವತಿಯಿಂದ ಭಗತ್ ಸಿಂಗ್ ರವರ 116ನೇ ಜನ್ಮ ವಾರ್ಷಿ ಕೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಭಗತ್ ಯುವ ಯುವಸೇನೆ ಅಧ್ಯಕ್ಷ ಕಾಂತರಾಜು ಮಾತನಾಡಿ, ಭಗತ್ ಸಿಂಗ್ ರವರು ಸ್ವಾತಂತ್ರ ಚಳುವಳಿ ಸಂದರ್ಭದಲ್ಲಿ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ದಬ್ಬಾಳಿಕೆ ಶೋಷಣೆ ಮಾಡುವಂತಹ ವ್ಯವಸ್ಥೆ ಇರಬಾರದು. ಬಡವ ಶ್ರೀಮಂತ ಅನ್ನುವ ಭೇದಭಾವ ಇಲ್ಲದೆ ಇರುವ ಶೋಷಣೆ ಇಲ್ಲದೆ ಇರುವ ಸಮಾಜವಾದಿ ಸಮಾಜ ನಮ್ಮ ದೇಶ ಭಾರತ ಆಗಬೇಕು ಎನ್ನುವ ಕನಸು ಕಂಡಿದ್ದರು, ಆದರೆ ಇಂದಿನ ಸಂದರ್ಭದಲ್ಲಿ ಅದು ಕನಸು ನನಸಾಗಿಲ್ಲ. ಅದನ್ನು ನನಸು ಮಾಡುವ ನಿಟ್ಟಿನಲ್ಲಿ ದೇಶದ ಯುವಕರು, ವಿದ್ಯಾರ್ಥಿಗಳು ಪಣ ತೊಡಬೇಕು. ನಾವೆಲ್ಲರೂ ಶ್ರಮಿಸಬೇಕು .ಅನ್ಯಾಯದ ವಿರುದ್ಧ ಹೋರಾಟಗಳನ್ನು ಬೆಳೆಸಬೇಕಾಗುತ್ತದೆ. ಇದು ನಿಜವಾಗಿಯೂ ಭಗತ್ ಸಿಂಗ್ ರವರಿಗೆ ಕೊಡುವ ಗೌರವ ಎಂದರು.

ಸಂದರ್ಭದಲ್ಲಿ ಕುಮಾರ್, ದೇವರಾಜು, ಶಿವು, ಮಹೇಶ್ ,ರವಿಕುಮಾರ್ , ಶೋಹನ್, ಮನು, ಚಂದ್ರಶೇಖರ್, ರಾಜೇಂದ್ರ ಮಾರಪ್ಪ ಗುರುಮೂರ್ತಿ ನಿಂಗರಾಜು ಆನಂದ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *