*ಹಲವು ಸಂಘಟನೆಗಳ ಉತ್ತಮ ಬೆಂಬಲ
*ಸ್ವಯಂ ಪ್ರೇರಿತವಾಗಿ ಮುಚ್ಚಿದ್ದ ಅಂಗಡಿ ಮುಗ್ಗಟ್ಟುಗಳ ಮಾಲೀಕರು
ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕರೆ ನೀಡಿರುವ ಬಂದ್ಗೆ ಜಿಲ್ಲೆಯಲ್ಲಿ ರೈತ ಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘಟನೆಗಳಿಂದಲೂ ಉತ್ತಮ ಬೆಂಬಲ ದೊರೆತಿದ್ದು, ಬಂದ್ ಯಶಸ್ವಿಯಾಗಿದೆ.

ಜಿಲ್ಲೆಯ ಹನೂರು, ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ತಾಲೂಕಿನ ಜನತೆ ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಬಂದ್ಗೆ ಸಹಕಾರ ನೀಡಿದ್ದಾರೆ. ಇದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆಟೋ, ಕಾರು, ಬಸ್ಗಳು ಕೂಡಾ ರಸ್ತೆಗಿಳಿಯದೇ ಉತ್ತಮ ಬೆಂಬಲ ನೀಡಿವೆ.

ಆಸ್ಪತ್ರೆ, ಮೆಡಿಕಲ್ ಶಾಪ್ಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಅಂಗಡಿ, ಹೋಟೆಲ್, ಚಿತ್ರಮಂದಿರಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಬಾಗಿಲು ಮುಚ್ಚುವ ಮೂಲಕ ಬೆಂಬಲಿಸಿವೆ.
ಆ್ಯಂಬುಲೆನ್ಸ್ನಲ್ಲಿ ಕಾಲೇಜಿಗೆ ತೆರಳಿದ ನರ್ಸಿಂಗ್ ವಿದ್ಯಾರ್ಥಿಗಳು: ಬಂದ್ ಹಿನ್ನೆಲೆ ಸಾರಿಗೆ ಸಂಸ್ಥೆ ಬಸ್ಗಳು ರಸ್ತೆಗಿಳಿಯದ ಕಾರಣ ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಪರದಾಡಿದರು. ಬಂದ್ ಇದ್ದರೂ ಕೂಡ ರಜೆ ನೀಡದ ಕಾರಣ ಎರಡು ತಾಸಿಗೂ ಅಧಿಕ ಕಾಲ ಬಸ್ಗಳಿಗಾಗಿ ಕಾದು ಸುಸ್ತಾದರು. ಎರಡು ತಾಸಿನ ಬಳಿಕ ಸಿಮ್ಸ್ ಬಸ್ ಕಳಿಸಿದ್ದು, ಅದರಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ತೆರಳಿದರು.

ಚಿತ್ರದ ಪೆÇೀಸ್ಟರ್ ಹರಿದು ಆಕ್ರೋಶ: ಸತ್ಯಮಂಗಲಂ ರಸ್ತೆಯಲ್ಲಿರುವ ಸಿದ್ಧಾರ್ಥ ಚಿತ್ರಮಂದಿರಕ್ಕೆ ನುಗ್ಗಿದ ಕಬ್ಬು ಬೆಳೆಗಾರರು, ರಾಘವ ಲಾರೆನ್ಸ್ ಅಭಿನಯದ “ಚಂದ್ರಮುಖಿ-2” ಚಿತ್ರದ ಪೆÇೀಸ್ಟರ್ ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಕಾವೇರಿ ಕ್ಯಾತೆ ನಿಲ್ಲಿಸದಿದ್ದರೇ ತಮಿಳು ಚಿತ್ರಗಳು ಪ್ರದರ್ಶನ ಮಾಡುವಂತಿಲ್ಲ ಎಂದು ಆಕ್ರೋಶಗೊಂಡು ತಮಿಳು ಚಿತ್ರದ ಪೆÇೀಸ್ಟರ್ಗಳನ್ನು ಹರಿದು ಹಾಕಿ ತಮಿಳುನಾಡು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಭಾಗ್ಯರಾಜು, ರೈತ ಸಂಘದ ವಿವಿಧ ಮುಖಂಡರು, ಕದಂಬ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕದಂಬ ನಾ.ಅಂಬರೀಶ್, ಜಿ.ಬಂಗಾರು, ವೀರಭದ್ರಸ್ವಾಮಿ, ಸುರೇಶ್, ನಮ್ಮನೆ ಪ್ರಶಾಂತ್, ನಿಜಧ್ವನಿ ಗೋವಿಂದರಾಜು, ಕಾವಲುಪಡೆ ಪರಶಿವಮೂರ್ತಿ, ಲಕ್ಷ್ಮಣ್, ಕೃಷ್ಣಮೂರ್ತಿ, ಸಿ.ಎಂ.ನರಸಿಂಹಮೂರ್ತಿ, ಸಿ.ಕೆ.ಮಂಜುನಾಥ್, ಬ್ಯಾಡಮೂಡ್ಲು ಬಸವಣ್ಣ, ರೈತ ಸಂಘದ ಬಸವಣ್ಣ, ಮೂಡ್ನಾಕೂಡು ಪ್ರಕಾಶ್, ರೈತ ಸಂಘದ ಮಹೇಶ್, ಚಾ.ರಂ.ಶ್ರೀನಿವಾಸಗೌಡ, ಶಾ.ಮುರುಳಿ, ಪಣ್ಯದಹುಂಡಿ ರಾಜು, ಪುರುಷೋತ್ತಮ್, ರಾಜ್ಗೋಪಾಲ್, ರಾಮಸಮದ್ರ ಸುರೇಶ್, ಪರ್ವತರಾಜ್, ನಾಗಯ್ಯ, ಅಬ್ರಾರ್, ನಗರಸಭಾ ಸದಸ್ಯ ಮಹೇಶ್, ಕೆ.ಎಂ.ನಾಗರಾಜ್ ಸೇರಿದಂತೆ ಮತ್ತಿತರ ಸಂಘಟನೆಗಳ ಕಾರ್ಯಕರ್ತರು, ಅಂಗಡಿಗಳ ಮಾಲೀಕರು, ಆಟೋಚಾಲಕರು, ಸೇರಿದಂತೆ ಇನ್ನಿತರರು ಬಂದ್ನಲ್ಲಿ ಪಾಲ್ಗೊಂಡಿದ್ದರು.


