ದೇಶದ ಆಹಾರ ಭದ್ರತೆಯಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳ ಕೊಡುಗೆ ಮಹತ್ವವಾದ್ದು : ಮುನಿಭೈರಪ್ಪ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಗ್ರಾಮ ಸಭೆ ಯಶಸ್ವಿ
ಬೆಂಗಳೂರು: ದೇಶದ ಆಹಾರ ಕೊರತೆ ನೀಗಿಸಲು ಕೃಷಿ ವಿಜ್ಞಾನಿಗಳು ಅವಿರತವಾಗಿ ಶ್ರಮಿಸಿದ್ದಾರೆ. ಅವರಿಂದಾಗಿ ದೇಶದಲ್ಲಿ ಆಹಾರ ಭದ್ರತೆ ಹೆಚ್ಚಾಗಿ ಸ್ವಾವಂಬಲನೆ ಸಾಧಿಸಲು ಸಾಧ್ಯವಾಗಿದೆ ಎಂದು ಕಾರ್ಯಕ್ರಮದಲ್ಲಿ ದಂಡಿಗಾನಹಳ್ಳಿ ಕೋರಂಮಂಗಲ ಗ್ರಾಪಂ ಮಾಜಿ ಅಧ್ಯಕ್ಷ ಮುನಿಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋರಂಮಂಗಳ ಗ್ರಾ.ಪಂ. ದಂಡಿಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತಾಶ್ರಯದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ( ಕೃಷಿ), ಬಿ.ಎಸ್ಸಿ (ಕೃಷಿ ವ್ಯವಹಾರ ನಿರ್ವಹಣೆ ), ಬಿ.ಟೆಕ್(ಕೃಷಿ ಇಂಜಿನಿಯರಿಂಗ್) ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವದ 90 ದಿನಗಳ ಕಾರ್ಯಕ್ರಮದ ಮೊದಲ ದಿನದ ಗ್ರಾಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಕೃಷಿ ಪ್ರಧಾನವಾದ ದೇಶವಾಗಿದೆ. ರೈತರು ಅಭಿವೃದ್ದಿಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮಹಾತ್ಮಾಗಾಂಧೀಜಿ ಅವರು ಸಹ ರೈತ ಈ ದೇಶದ ಬೆನ್ನಲುಬು ಎಂದು ಹೇಳಿದ್ದರು. ಹಸಿರು ಕ್ರಾಂತಿಯ ಪರಿಣಾಮ ಆಹಾರ ಉತ್ಪಾದನೆಯಲ್ಲಿ ದೇಶದ ಪ್ರಗತಿಯತ್ತ ಸಾಗುತ್ತಿದೆ. ರೈತರು ಬೆಳೆದ ಆಹಾರ ಧಾನ್ಯಗಳು ಪೆÇೀಲಾಗದಂತೆ ರಕ್ಷಿಸುವುದು ಈಗ ನಮ್ಮ ಮುಂದಿನ ಸವಾಲಾಗಿದೆ. ಕೃಷಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಬೇಕು ಎಂದರು.
ಬೆಂಗಳೂರು ಡೈರಿ ಮಾಜಿ ನಿರ್ದೆಶಕ ಎನ್. ನಾರಾಯಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ರೈತರ ಸಮಸ್ಯೆಗಳನ್ನು ಅರಿತು ವಿಜ್ಞಾನಿಗಳ ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಒದಗಿಸಲು ಶ್ರಮಿಸಬೇಕು. ಕೃಷಿಯ ಭಾಗವಾಗಿ ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ರೈತ ಸಮುದಾಯದ ಹಾಗು ಯುವ ಜನಾಂಗಕ್ಕೆ ಕೃಷಿ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಬೇಕು. ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ತಮ್ಮೆಲ್ಲರ ಪ್ರಯತ್ನ ಇದೆ ಎಂದರು.

ಕೃಷಿ ವಿಶ್ವ ವಿದ್ಯಾನಿಲಯದ ಸಹ ಪ್ರಾಧ್ಯಾಪಕರುÀ ಮತ್ತು ರಾವೆಯ ಸಹ ಸಂಯೋಜಕರಾದ ಡಾ. ಸಿ.ಎಂ ಸವಿತಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯ ದೇವರಾಜ್ ವಹಿಸಿದ್ದರು. ಗ್ರಾ. ಪಂ. ಸದಸ್ಯರಾದ ಮಂಜುಳಾ, ಕಿರಣ್, ವಿಜಯಪುರ ರೈತ ಸಂಪರ್ಕ ಕೇಂದ್ರದ ಲೆಕ್ಕಿಗರಾದ ವಿಜಯಕುಮಾರ್, ಗ್ರಾಮದ ಮುಖಂಡರಾದ ಚಿಕ್ಕಜಂಗಪ್ಪ, ಪ್ರಭಾಕರರೆಡ್ಡಿ, ನಾರಾಯಣಸ್ವಾಮಿ, ಚನ್ನಕೃಷ್ಣ, ಗಂಗಾಧರ, ಗ್ರಾಮದ ರೈತರು ಹಾಗೂ ಜಿಕೆವಿಕೆಯ 24 ಮಂದಿ ವಿದ್ಯಾರ್ಥಿಗಳ ತಂಡ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *