ಪಠ್ಯೇತರ ಸ್ಪರ್ದೆಗಳು ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗಾಗಿ ಸಹಕಾರಿ : ಪ್ರೊ. ಪಿ ಮಾದೇಶ್

ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಸುವರ್ಣ ಉತ್ಸವ – ೨೦೨೩ ಹೆಸರಿನಲ್ಲಿ ಮಂಗಳವಾರ (ಜು.೧೧) ಮಾನವಿಕ, ವಾಣಿಜ್ಯ ಹಾಗೂ ವಿಜ್ಞಾನ ವಿ?ಯಗಳಿಗೆ ಸಂಬಂಧಿಸಿದ ಭಿತ್ತಿ ಪತ್ರ ತಯಾರಿ, ಕಿರುಚಿತ್ರ ತಯಾರಿ, ಮಾದರಿ ತಯಾರಿ ಹಾಗೂ ಸುವರ್ಣ ಸಂತೆ ಸ್ಪರ್ಧೆಗಳು ನಡೆದವು.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ದಿನವಿಡಿ ನಡೆದ ಸ್ಪರ್ಧೆಗಳು ವಿಶೇಷ ಗಮನ ಸೆಳೆದವು.

ಸಂಜೆ ನಡೆದ ಸುವರ್ಣ ಉತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಪಿ. ಮಾದೇಶ್ ಅವರು ಶಿಕ್ಷಣವೆಂದರೆ ಕೇವಲ ಪಠ್ಯ ಚಟುವಟಿಕೆಗಳಿಗ? ಸೀಮಿತವಾಗಿರುವುದಲ್ಲ. ಪಠ್ಯ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಮಾಜದಲ್ಲಿ ಗುರುತಿಸಿಕೊಳ್ಳಲು ಪಠ್ಯೇತರ ಚಟುವಟಿಗಳು ಸಹ ಸಹಕಾರಿಯಾಗಲಿವೆ. ಈ ನಿಟ್ಟಿನಲ್ಲಿ ಸುವರ್ಣ ಉತ್ಸವ ಹೆಸರಿನ ಅಂತರ ಕಾಲೇಜುಗಳ ಸ್ಪರ್ಧೆಗಳು ಯಶಸ್ವಿಯಾಗಿ ನೆರವೇರಿವೆ ಎಂದರು.

ಕಿರುಚಿತ್ರ, ಭಿತ್ತಿಪತ್ರ ತಯಾರಿ, ಮಾದರಿ ತಯಾರಿ, ಕಸದಿಂದ ರಸ ಹಾಗೂ ಸುವರ್ಣ ಸಂತೆಯಂತಹ ಸ್ಪರ್ದೆಗಳು ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ಮೂಡಿಸಿವೆ. ಈ ಮೂಲಕ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಬಲ್ಲ ಜ್ಞಾನವಂತಿಕೆಯನ್ನು ಸೃಷ್ಟಿಸಲು ನೆರವಾಗಿವೆ. ಉನ್ನತ ಶಿಕ್ಷಣದ ಜೊತೆಗೆ ಇಂತಹ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಪ್ರೊ. ಪಿ. ಮಾದೇಶ್ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಪ್ರೊ. ಆರ್. ಮಹೇಶ್ ಅವರು ಜಾನಪದ ಕಲೆ ಹಾಗೂ ತನ್ನದೇ ಸಂಸ್ಕೃತಿಯನ್ನು ಹೊಂದಿರುವ ಈ ನೆಲದಲ್ಲಿ ಪ್ರತಿಭೆ ಹಾಗೂ ಬಹುಮುಖ ಕೌಶಲ್ಯಗಳು ಅಂತರ್ಗತವಾಗಿದೆ. ಇಂತಹ ಮಣ್ಣಿನ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಹೊರ ತೆಗೆದು ಪ್ರೋತ್ಸಾಹಿಸಲು ಸುವರ್ಣ ಉತ್ಸವದಂತಹ ಕಾರ್ಯಕ್ರಮಗಳು ಪ್ರತಿವ?ವೂ ನಡೆಯಬೇಕು ಎಂದರು.

ಕನ್ನಡ ಸಿನಿಮಾ, ರಂಗಭೂಮಿ, ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ ಹಾಗೂ ಕೌಶಲಗಳನ್ನು ಅನಾವರಣಗೊಳಿಸಲು, ವಿದ್ಯಾರ್ಥಿಗಳನ್ನು ಮಾನವ ಸಂಪನ್ಮೂಲವನ್ನಾಗಿ ರೂಪಿಸುವ ಕಾರ್ಯವನ್ನು ವಿಶ್ವವಿದ್ಯಾಲಯ ಮಾಡಲಿದೆ ಎಂಬ ಭರವಸೆ ಇದೆ ಎಂದು ಪ್ರೊ. ಮಹೇಶ್ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *