ಚಾಮರಾಜನಗರ: ನಗರದ ಮಹಾಮನೆಯಲ್ಲಿ ಚಾಮರಾಜನಗರ ಜಿಲ್ಲಾ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ 2024ನೇ ನೂತನ ದಿನದರ್ಶಿಕೆಯನ್ನು ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ ಅನಾವರಣ ಮಾಡಿದರು.
ನಗರದ ಮಹಾಮನೆಯಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ 2024ನೇ ನೂತನ ವರ್ಷದ ದಿನದರ್ಶಿಕೆಯನ್ನು ಅನಾವಣ ಮಾಡಿ ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ದಿನ ದರ್ಶಿಕೆಯು ನಮ್ಮ ಜೀವನ ಉತ್ಸಾಹವವನ್ನು ಹೆಚ್ಚಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನೋಡುವುದು ದಿನ ದರ್ಶಿಕೆಯಲ್ಲಿರುವ ಮಾಹಿತಿಯನ್ನು ಅಲ್ಲಿಂದ ಆರಂಭವಾಗುವ ನಮ್ಮ ದೈನಂದಿನ ಚಟುವಟಿಕೆಗಳು ಶಿಸ್ತು ಬದ್ದವಾಗಿ ಯಾವುದೇ ಅಡೆತಡೆಗಳು ಇಲ್ಲದಂತೆ ನಡೆಸಲು ಶರಣರ ಭಾವಚಿತ್ರವಿರುವ ಹಾಗು ಸಮಾಜದ ಸಂದೇಶವನ್ನು ಸಾರುವ ದಿನದರ್ಶಿಕೆಗಳು ನಮ್ಮ ಮನೆ ಗೋಡೆ ಹಾಗು ಮನದಲ್ಲಿದ್ದರೆ, ನಮ್ಮೇಲ್ಲರ ಬಾಳು ಬಂಗಾರ ವಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ನೌಕರರ ಸಂಘದವರು ಬಹಳ ಅಚ್ಚುಕಟ್ಟಾಗಿ ಸಂಘದ ಸದಸ್ಯರಿಗೆ ಪೂರ್ಣ ಮಾಹಿತಿ ಇರುವ ಬಸವಾಧಿ ಶರಣ ಭಾವಚಿತ್ರವಿರುವ ಕ್ಯಾಲೆಂಡರ್ ಅನ್ನು ಅಂದವಾಗಿ ಮುದ್ರಿಸಿ ಬಿಡುಗಡೆಗೊಳಿಸಿದ್ದಾರೆ. ಜಿಲ್ಲೆಯ ಸಂಘ ಸಕ್ರಿಯವಾಗಿ ಸಮಾಜದ ಅಭ್ಯದಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಇನ್ನು ಹೆಚ್ಚು ಸಾರ್ಥಕವಾದ ಕೆಲಸ ಕಾರ್ಯಗಳನ್ನು ಮಹಾಮನೆಯ ಬಳಗ ಮಾಡುವ ಶಕ್ತಿ ಮತ್ತು ಜ್ಞಾನವÀನ್ನು ಬಸವಾಧಿ ಶರಣರು ತಮ್ಮೆಲ್ಲರಿಗೂ ದಯಾ ಪಾಲಿಸಿ ಎಂದು ಶುಭ ಕೋರಿದರು.
ಮತ್ತೋರ್ವರಾದ ಶ್ರೀ ನಗರಮಠದ ಶ್ರೀ ಚನ್ನಬಸವಸ್ವಾಮೀಜಿ ಮಾತನಾಡಿ, ದಿನದರ್ಶಿಕೆಯನ್ನು ಬಿಡುಗಡೆ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ಈ ಹೆಸರಿನಲ್ಲಿ ನಾವೆಲ್ಲರು ಸೇರಿದ್ದೇವೆ ಎಂಬುವುದು ಪ್ರಮುಖವಾಗಿದೆ. ದೈನಂದಿನ ವ್ಯವಹಾರ ಆರಂಭವಾಗುವುದು ದಿನದರ್ಶಿಕೆಯನ್ನು ನೋಡಿ. ಇಂಥ ದಿನದರ್ಶಿಕೆ ನಮ್ಮ ಮನೆ ಗೋಡೆಯಲ್ಲಿ ಯಾವ ರೀತಿ ಇರಬೇಕೆಂಬ ಕಲ್ಪನೆಯೊಂದಿಗೆ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಪೂಜ್ಯರ ಜನ್ಮ ದಿನಗಳು. ಸ್ಥಳಿಯವಾಗಿರುವ ಮಾಹಿತಿಗಳು ಲಭ್ಯವಿದ್ದು, ಸಂಘದಿಂದ ಹೊರತಂದಿರುವ ಕ್ಯಾಲೆಂಡರ್ ಬಹಳ ಅರ್ಥಪೂರ್ಣವಾಗಿದೆ ಎಂದರು.
ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ 2 ದಶಕಗಳಿಂದ ಸಂಘ ಸಕ್ರಿಯವಾಗಿ ಸಮಾಜದಲ್ಲಿರುವ ನೊಂದವರು ಹಾಗೂ ಅಶಕ್ತರಿಗೆ ಆಸರೆಯಾಗಿದೆ. ಶರಣರ ವಿಚಾರ ಧಾರೆಗಳನ್ನು ಪ್ರಚುರುಪಡಿಸುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದೆ. ಇಂಥ ಕಾರ್ಯಕ್ರಮ ಇನ್ನು ಹೆಚ್ಚು ಹೆಚ್ಚು ನಡೆಯಲಿ. ನಮ್ಮ ಸಮಾಜ ಮತ್ತು ಸಮುದಾಯ ಎಂಬ ಹೆಮ್ಮೆ ಎಲ್ಲರಲ್ಲಿ ಮೂಡಬೇಕು ಎಂದರು.
ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅಲೂರು ಬಸಪ್ಪ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮುದ್ದಬಸವಣ್ಣ, ಹೊನ್ನಮೇಟಿ ಸುಂದರ್, ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಸಂಘದ ಉಪಾಧ್ಯಕ್ಷರಾದ ದುಂಡ ಮಾದಪ್ಪ, ನಾಗಭೂಷನ್, ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಶಿವಕುಮಾರಸ್ವಾಮಿ, ಮಹದೇವಸ್ವಾಮಿ ಐಟಿಐ, ಗಂಗಾಧರ್, ಮಹೇಶ್, ಮಾದಲಾಂಬಿಕೆ, ಪತ್ತಿನ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ಕೆಂಪನಪುರ ಮಹದೇವಸ್ವಾಮಿ, ದೊಡ್ಡರಾಯಪೇಟೆಗಿರೀಶ್, ಹೊನ್ನಪ್ಪ, ಆರ್.ಎಸ್. ಲಿಂಗರಾಜು, ಯುವ ಘಟಕದ ಅಧ್ಯಕ್ಷ ಗುರುಪ್ರಸಾದ್, ಜಯಶಂಕರಮೂರ್ತಿ, ನಂಜುಂಡಸ್ವಾಮಿ, ಗುರುಸ್ವಾಮಿ, ನಿರ್ಮಲ, ನಾಗಮಣಿ, ಶಶಿಕಲಾ, ಉಮಾಮಹೇಶ್ವರಿ, ಮಲ್ಲಪ್ಪ ಕಾರ್ಯದರ್ಶಿ ನಂಜುಂಡಸ್ವಾಮಿ, ಮಹೇಂದ್ರ, ಆಕಾಶ್, ಮಲ್ಲಿಕಾರ್ಜುನಸ್ವಾಮಿ ಮೊದಲಾದವರು ಇದ್ದರು.