ಬಿಸಲವಾಡಿ ಪಿಎಸಿಸಿ ಬ್ಯಾಂಕ್‍ನಿಂದ ರೈತರಿಗೆ 3.30 ಕೋಟಿ ಸಾಲ ವಿತರಣೆ : ಮಹದೇವಯ್ಯ

ವಾರ್ಷಿಕ ಮಹಾಸಭೆಯಲ್ಲಿ 9 ಮಂದಿ ಹಿರಿಯ ಸಹಕಾರಿಗಳಿಗೆ ಸನ್ಮಾನ
ಚಾಮರಾಜನಗರ: ತಾಲೂಕಿನ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇದುವರಿಗೆ 3.30 ಕೋಟಿ ರೂ. ಗಳ ಸಾಲವನ್ನು ರೈತರಿಗೆ ನೀಡುವ ಮೂಲಕ 3.65 ಲಕ್ಷ ರೂ. ಗಳ ನಿವ್ವಳ ಲಾಭವನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಮಹದೇವಯ್ಯ ತಿಳಿಸಿದರು.

ಗ್ರಾಮದ ಶ್ರೀ ಲಕ್ಷ್ಮಿದೇವಿ ದೇವಸ್ಥಾನದ ಅವರಣದಲ್ಲಿ ನಡೆದ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ 280 ಮಂದಿಗೆ ರೈತರಿಗೆ 2.80 ಕೋಟಿ ಹಾಗೂ ಇತರೇ ಸಾಲವಾಗಿ 50 ಲಕ್ಷ ರೂ.ಗಳು ಸೇರಿ ಸಂಘದಿಂದ 3.30 ಕೋಟಿ ರೂ. ಸಾಲ ನೀಡಲಾಗಿದ್ದು, ಸಂಘದಿಂದ ಪಡಿತರ ದಾರರಿಗೆ ಸಮರ್ಪಕ ಪಡಿತರ ವಿತರಣೆ ಮಾಡಿ, ಉತ್ತಮ ಸೇವೆಯನ್ನು ಸಲ್ಲಿಸಲಾಗುತ್ತಿದೆ ಎಂದರು.

ಸಂಘದಿಂದ ಈಗಾಗಲೇ ರೈತರಿಗೆ ಕೃಷಿ ಸಾಲದ ಜೊತೆಗೆ ವಾಣಿಜ್ಯ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸ್ವಂತ ಉದ್ಯಮವನ್ನು ಹೊಂದಿ ಅರ್ಥಿಕ ಅಭಿವೃದ್ದಿ ಹೊಂದಲು ಸಾಲ, ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಆಳವಡಿಸಿಕೊಂಡು ವೈಜ್ಞಾನಿಕವಾಗಿ ಬೇಸಾಯ ಮಾಡಲು ಟ್ರಾಕ್ಟರ್ ಸಾಲವನ್ನು ಸಹ ನೀಡಲಾಗುತ್ತಿದೆ ಎಂದರು.

ಹೆಚ್ಚುವರಿ ಸೇರಿ 500 ರೂ. ಕಟ್ಟಿ ಸಂಘದ ಸದಸ್ಯತ್ವವನ್ನು ನವೀಕರಿಸಿಕೊಂಡರೆ ಮಾತ್ರ ಚುನಾವಣೆಯಲ್ಲಿ ಮತ ಹಾಕಲು ಅರ್ಹತೆಯನ್ನು ಪಡೆದುಕೊಳ್ಳಬೇಕು. ತಪ್ಪದೇ ಕನಿಷ್ಟ 2 ಮಹಾಸಭೆಯಲ್ಲಿ ಭಾಗವಹಿಸಿ ಸಹಿ ಹಾಕಿರಬೇಕು. ಸಂಘದ ಸದಸ್ಯರು ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಬಡ್ಡಿ ಮನ್ನಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಶೋಕ್ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು.

ಹಿರಿಯ ಸಹಕಾರಿಗಳಾದ ಚನ್ನಬಸಪ್ಪ, ಬಿ. ಶಾಂತಮಲ್ಲಪ್ಪ, ಬೆಳ್ಳಪ್ಪ, ವೆಂಕಟರಾನು, ಪುಟ್ಟಮಾದನಾಯಕ, ಎಂ. ಮಹದೇವಪ್ಪ, ಮಲ್ಲಿಕಾರ್ಜುನಪ್ಪ, ಬಿ.ಸಿ. ಮಹದೇವ ಆರಾಧ್ಯ, ಎಸ್. ಮಹದೇವಯ್ಯ ಅವರನ್ನು ಶಾಲು ಹೊದಿಸಿ. ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಹಿರಿಯ ಮುಖಂಡರಾದ ಬಿ.ಪಿ. ನಟರಾಜಮೂರ್ತಿ, ಸಂಘದ ಉಪಾಧ್ಯಕ್ಷ ಸಿದ್ದಶೆಟ್ಟಿ, ನಿರ್ದೇಶಕರಾದ ಶಿವಸ್ವಾಮಿ, ಎಸ್. ಶಿವಕುಮಾರ್, ಮಂಜುನಾಥ್, ಎಲ್. ಶಿವಕುಮಾರ್, ಸಿದ್ದೇಗೌಡ, ಎಂ. ಸಿದ್ದನಾಯಕ, ಸಿದ್ದಮಲ್ಲಪ್ಪ, ರಾಜಮ್ಮ, ಗ್ರಾಪಂ. ಮಾಜಿ ಅಧ್ಯಕ್ಷ ಮಹದೇವಪ್ಪ, ಅನಿಲ್, ಸಿಇಓ ಆಶೋಕ್, ಗುಮಾಸ್ತ ಎಂ. ಪ್ರಸನ್ನಕುಮಾರ್, ನಾಗರಾಜು ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *