ಚಾಮರಾಜನಗರ: ಭಾರತ್ ಜೋಡೋ ವ?ಚರಣೆ ಅಂಗವಾಗಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾರತ್ ಜೋಡೋ ನಡಿಗೆ ಯಶ್ವಸಿಯಾಗಿ ನಡೆಯಿತು.
ನಗರದ ಸತ್ತಿರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಭಾರತ್ಜೋಡೋ ನಡಿಗೆ ಸತ್ತಿರಸ್ತೆ, ಅನ್ವರ್ಪಾ? ವೃತ್ತ, ದೊಡ್ಡಂಗಡಿ ಬೀದಿ, ಭುವನೇಶ್ವರಿ ವೃತ್ತ, ಬಿ.ರಾಚಯ್ಯಜೋಡಿ ರಸ್ತೆಯ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತಲುಪಿತು. ನಂತರ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಭಾರತ್ ಜೋಡ್ ನಡಿಗೆಯನ್ನು ಅಂತ್ಯಗೊಳಿಸಲಾಯಿತು.
ಜೋಡೋ ಯಾತ್ರೆಯ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಪಿ. ಮರಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಯುವ ನೇತಾರ ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರ ೮ ವರ್ಷಗಳ ದುರಾಡಳಿತ, ಕೋಮವಾದ, ಹಾಗೂ ದ್ವೇಷದ ರಾಜಕಾರಣದ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಿ, ಹೊಡೆದ ಮನಸ್ಸುಗಳನ್ನು ಒಗ್ಗೂಡಿಸುವ ಭಾರತ್ ಜೋಡೋ ಯಾತ್ರೆ ಸೆ. ೭ ರ ೨೦೨೨ ರಂದು ಕನ್ಯಾಕುಮಾರಿಯಿಂದ ಚಾಲನೆ ನೀಡಿದ್ದರು. ಇದು ಸುಮಾರು ೧೨ ರಾಜ್ಯಗಳನ್ನು ಸಂದಿಸಿ, ೧೩೭ ಜಿಲ್ಲೆಗಳನ್ನು ದಾಡಿ ಜಮ್ಮಕಾಶ್ಮೀರದಲ್ಲಿ ಅಂತ್ಯಗೊಂಡಿತು. ರಾಹುಲ್ ಗಾಂಧಿ ಅವರು ಕೈಗೊಂಡಿದ್ದ ಈ ಯಾತ್ರೆಗೆ ದೇಶಧ್ಯಂತ ಉತ್ತಮ ಜನ ಬೆಂಬಲ ವ್ಯಕ್ತವಾಗಿತ್ತು. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಪತನವಾಗಿ, ೧೩೬ಕ್ಕು ಹೆಚ್ಚು ಸ್ಥಾನಗಳೊಂದಿಗೆ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರಲು ಸಹಕಾರಿಯಾಗಿದೆ ಎಂದು ಮರಿಸ್ವಾಮಿ ತಿಳಿಸಿದರು.
ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ. ಜನರನ್ನುಕೋಮು ದಳ್ಳಾರಿಗೆ ತಳ್ಳಿತ್ತು. ಧರ್ಮ ಧರ್ಮಗಳು, ಜಾತಿ ಜಾತಿಗಳ ನಡುಗೆ ಕಂದಕಗಳನ್ನು ಸಷ್ಠಿ ಮಾಡಿ, ದೇಶದಲ್ಲಿ ಒಂದೇ ರೀತಿಯ ಹರಾಜುಕತೆಯನ್ನು ಉಂಟು ಮಾಡಿತ್ತು. ಹೀಗಾಗಿ ರಾಹುಲ್ ಗಾಂಧಿಕೈಗೊಂಡಿ ದೇಶದ ಜನರ ಭಾವನೆಗಳನ್ನು ಬೆಸೆಯುವ ಭಾರತ್ ಜೋಡೊ ಅಭೂತಪೂರ್ವ ಬೆಂಬಲ ದೊರೆಯಿತು ಎಂದರು.
ಮಾಜಿ ಶಾಸಕ ಸಿ.ಎನ್. ನಂಜುಂಡಸ್ವಾಮಿ ಮಾತನಾಡಿ, ಯುವ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ. ಇಡೀ ದೇಶವನ್ನು ಜೋಡಿಸುವ ಕೆಲಸವನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ದುರಾಡಳಿತ ಕೊನೆಯಾಗುವ ಸೂಚನೆ ಇದಾಗಿದೆ. ಇನ್ನಾದರು ವಿಪಕ್ಷಗಳು ರಾಹುಲ್ ಗಾಂಧಿ ವಿರುದ್ದ ಮಾತನಾಡುವುದನ್ನು ನಿಲ್ಲಿಸಲಿ ಎಂದರು.
ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಪುಷ್ಪ ಅಮರನಾಥ್ ಮಾತನಾಡಿ, ಭಾರತ ಜೋಡೋ ನಡಿಗೆ ದೇಶದ ಇತಿಹಾಸವನ್ನು ನಿರ್ಮಾಣ ಮಾಡಿದೆ. ಭಾರತ ಜೋಡೋ, ರಾಹಲ್ ಗಾಂದಿ ಕನಸಿನ ಯಾತ್ರೆ ಯಾಗಿದೆ. ಅವರು ಕನ್ಯಾಕುಮಾರಿಯಲ್ಲಿ ಯಾತ್ರೆಯ ಸಂದರ್ಭದಲ್ಲಿ ಭಾರತ ಜೋಡೋ ಯಾತ್ರೆ ಆರಂಭಿಸಿದ ಬಗ್ಗೆ ಮಾತನಾಡಿ, ದ್ವೇಷ, ವಿಷದ ಮಾರುಕಟ್ಟೆ ಯಲ್ಲಿ ಪ್ರೀತಿ ಅಂಗಡಿಯನ್ನು ತೆರೆದು ಪ್ರೀತಿಯನ್ನು ಹಂಚುವ ಕೆಲಸವನ್ನು ಮಾಡುತ್ತಿದ್ದೇನೆ ಎಂದಿದ್ದರು. ಆದರಂತೆ ಕರ್ನಾಟಕ ಸೇರಿದಂತೆ ರಾಹುಲ್ಗಾಂಧಿ ಕೈಗೊಂಡಿದ್ದ ನಡಿಗೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ತಂದು ಕೊಟ್ಟಿತು. ಪ್ರಧಾನಿ ನರೇಂದ್ರ ಮೋದಿ ಹೋದ ಕ್ಷೇತ್ರಗಳಲ್ಲಿ ಸೋಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ಹೊಂಗನೂರು ಚಂದ್ರು, ತೋಟೇಶ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ ಜತ್ತಿ, ಕನಿ? ವೇತನಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ಎಸ್ ಪಿಕೆ, ಜಿ.ಪಂ. ಮಾಜಿ ಸದಸ್ಯರಾದ ಕೊಪ್ಪಾಳಿ ಮಹದೇವನಾಯಕ, ಯೋಗೇಶ್, ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಡಿ. ನಾಗೇಂದ್ರ, ನಿರ್ದೇಶಕ ಆಲೂರು ಪ್ರವೀಣ್, ಕಾಗಲವಾಡಿ ಚಂದ್ರು, ಶಿವಸ್ವಾಮಿ, ಸಿ.ಕೆ.ರವಿಕುಮಾರ್, ಚನ್ನಪ್ಪ, ರಾಮಸಮುದ್ರ ನಾಗರಾಜು, ಎನ್ಎಸ್ಯುಐನ ಮೋಹನ್ ನಗು, ಶಿವಮೂರ್ತಿ ಎಂ. ಸುಹೇಲ್ ಆಲಿ ಖಾನ್, ನಗರಸಭಾ ಸದಸ್ಯರಾದ ಚಿನ್ನಮ್ಮ, ವೈದ್ಯ ಘಟಕದ ಅಧ್ಯಕ್ಷೆ ಡಾ. ಅತೀಯ ಪೈರೋಜ್, ಅಯೂಬ್ ಖಾನ್, ಎಎಚ್ಎನ್ ಖಾನ್, ನಯಾಜ್ ಪಾಷಾ, ತಾರೀಕ್ ಮೊದಲಾದವರು ಇದ್ದರು.