ಚಾಮರಾಜನಗರ: ತಾಲೂಕಿನ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ. ಮಹೇಶ್, ಉಪಾಧ್ಯಕ್ಷರಾಗಿ ಪುಟ್ಟಬುದ್ದಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ –ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ. ಮಹೇಶ್ ಹಾಗೂ ಕ್ಯಾತಶೆಟ್ಟಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟಬುದ್ದಿ ಮತ್ತು ಎಸ್. ಮಲ್ಲೇಶ್ ನಾಮ ಪತ್ರ ಸಲ್ಲಿಸಿದ್ದರು. ನಂತರ ಮತದಾನ ನಡೆದು, 13 ನಿರ್ದೇಶಕರ ಬಲದ ಸಂಘದಲ್ಲಿ ತಲಾ 9 ಮತಗಳನ್ನು ಪಡೆದು ಎಂ. ಮಹೇಶ್ ಅಧ್ಯಕ್ಷರಾಗಿ, ಪುಟ್ಟಬುದ್ದಿ ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಪ್ರತಿಸ್ಪರ್ಧಿಗಳಾದ ಕ್ಯಾತಶೆಟ್ಟಿ ಮತ್ತು ಎಸ್. ಮಲ್ಲೇಶ್ ತಲಾ 4 ಮತಗಳನ್ನು ಪಡೆದುಕೊಂಡರು. ಚುನಾವಣಾಧಿಕಾರಿ ವಿ. ಹೇಮಂತಕುಮಾರ್ ಅಂತಿಮವಾಗಿ ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಿಇಓ ಗುರುಸ್ವಾಮಿ ಇದ್ದರು.
ಸಭೆಯಲ್ಲಿ ನೂತನ ನಿರ್ದೇಶಕರಾದ ಮಹದೇವಶೆಟ್ಟಿ, ಎಂ.ಕೆ. ಮಹದೇವಶೆಟ್ಟಿ, ಎಂ. ಕೃಷ್ಣ, ಪುಷ್ಪಾವತಿ, ಶಿವಮ್ಮ, ಕುಮಾರ್, ಎಸ್. ನಾಗೇಶ್, ಎಂ.ಸಿ. ಶಿವಶಂಕರ್ ಇದ್ದರು.
ನೂತನ ಅಧ್ಯಕ್ಷ ಎಂ. ಮಹೇಶ್ ಮಾತನಾಡಿ, ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ನಿರ್ದೇಶಕರು ವಿಶ್ವಾಸ ಇಟ್ಟು ಆಯ್ಕೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಸಂಘದ ಅಭಿವೃದ್ದಿ ಜೊತೆಗೆ ರೈತರಿಗೆ ಸರ್ಕಾರ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಿಕೊಡುವ ಮೂಲಕ ಮಾದರಿ ಸಂಘವನ್ನಾಗಿ ಮಾಡಲು ಎಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮಂಗಲ ಡೇರಿ ಕಾರ್ಯದರ್ಶಿ ಕುಮಾರಸ್ವಾಮಿ, ಕೆಂಪನಪುರ ಡೇರಿ ಕಾರ್ಯದರ್ಶಿ ಮಹದೇವಶೆಟ್ಟಿ, ದೇವರಾಜು ಅನೇಕರು ಅಭಿನಂದಿಸಿದರು.