ಯುವ ಸಮುದಾಯ ವೀರಶೈವ-ಲಿಂಗಾಯತ ಧರ್ಮದ ಅಚರಣೆ ಸಂಸ್ಕøತಿ ಉಳಿಸಿ : ಚನ್ನಬಸವಸ್ವಾಮೀಜಿ

ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿಯ 2024ನೇ ನೂತನ ದಿನ ದರ್ಶಿಕೆ ಬಿಡುಗಡೆ
ಚಾಮರಾಜನಗರ, ಡಿ. 26- ಯುವ ಜನಾಂಗ ವೀರಶೈವ ಲಿಂಗಾಯತ ಸಮಾಜದ ಆಚಾರ ವಿಚಾರಗಳು ಹಾಗೂ ಸಂಸ್ಕøತಿ ಪರಂಪರೆಯನ್ನು ಅಳವಡಿಸಿಕೊಂಡು ಸಮಾಜವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕೆಂದು ಚಾ.ನಗರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು.

ನಗರದ ಅನುಭವ ಮಂಟಪದಲ್ಲಿ ಕೊಳ್ಳೇಗಾಲ ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ, ಶ್ರೀ ಬಸವ ಸೇವಾ ಪತ್ತಿನ ಸಹಕಾರ ಸಂಘ ನಿ. ಹಾಗೂ ಬಸವ ಮಹಾಮನೆ ಟ್ರಸ್ಟ್ ವತಿಯಿಂದ 2024ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬಸವ ಧರ್ಮ ಪಾಲನೆ ಮಾಡುವವರು ಹಾಗೂ ವೀರಶೈವ ಲಿಂಗಾಯತ ಧರ್ಮದ ಘನತೆ ಗೌರವವನ್ನು ಕಾಪಾಡುವವರು ಸಂಖ್ಯೆ ಕ್ಷೀಣಿಸುತ್ತಿದೆ. ಯುವಕ, ಯುವತಿಯಲ್ಲಿ ನಮ್ಮ ಧರ್ಮ ಮತ್ತು ಸಮಾಜ ಎಂಬ ಪ್ರೌಢಿಮೆ ಮತ್ತು ಆಸಕ್ತಿ ಕೊರತೆ ಕಡಿಮೆಯಾಗುತ್ತಿದೆ.

ಬಸವಾಧಿ ಶರಣರು 12 ಶತಮಾನದಲ್ಲಿಯೇ ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿ, ನಮ್ಮೆಲ್ಲರಿಗೂ ಸಂಸ್ಕøತಿ, ಅಚಾರ ವಿಚಾರಗಳು ಹಾಗೂ ಲಿಂಗಾಯತ ಧರ್ಮ ಮೂಲ ತತ್ವ ಸಿದ್ದಾಂತವನ್ನು ಸಾರಿ ಹೋಗಿದ್ದಾರೆ. ಇದನ್ನು ಮುನ್ನಡೆಸುವ ಮತ್ತು ಸಂರಕ್ಷಣೆ ಮಾಡುವ ಮನಸ್ಸು ಮತ್ತು ಆಸಕ್ತಿ ನಮ್ಮೆಲ್ಲರಿಗೂ ಬೇಕಾಗಿದೆ. ಒಂದು ಸಮಾಜದ ಚೌಕಟ್ಟಿನಲ್ಲಿ ಸಮಾಜಕ್ಕೆ ಧಕ್ಕೆಯಾಗದಂತೆ ನಮ್ಮವರು, ನಮ್ಮ ಧರ್ಮ, ನಮ್ಮ ಆಚಾರ, ನಮ್ಮ ಹಿರಿಯರು ನಡೆದ ದಾರಿಯಲ್ಲಿ ನಾವೆಲ್ಲರು ಹೋಗಬೇಕು, ಗುರು ಹಿರಿಯರ ಮಾರ್ಗದರ್ಶನದಂತೆ ನಡೆಯಲು ಮುಂದಾಗಬೇಕು ಎಂದು ಶ್ರಿಗಳು ತಿಳಿಸಿದರು.

ಬಿಜೆಪಿ ರೈತ ಮುಖಂಡ ಮಲ್ಲೇಶ್ ಮಾತನಾಡಿ, ನಮ್ಮ ಮಕ್ಕಳಿಗೆ ವಿದ್ಯಾ ಕಲಿಸುವ ಜೊತೆಗೆ ನಮ್ಮ ಧರ್ಮದ ಆಚಾರ ವಿಚಾರಗಳ ಬಗ್ಗೆ ಅರಿವು ಮುಡಿಸಬೇಕು. ಕೊಳ್ಳೇಗಾಲದಲ್ಲಿ ನೌಕರರ ಸಂಘದವರು ನಿರ್ಮಾಣ ಮಾಡುತ್ತಿರುವ ಶ್ರೀ ಶಿವಕುಮಾರಸ್ವಮಿ ಭವನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷನೆ ಮಾಡಿದರು. ವೀರಶೈವ ಲಿಂಗಾಯತ ಸಮಾಜದ ಜಿಪುಣತನ ತೋರಿಸಬಾರದು. ಸಮಾಜದ ಕಾರ್ಯಗಳು ನಡೆಯಲು ಎಲ್ಲರು ಕೈಜೋಡಿಸಬೇಕು ಎಂದರು.

ನೌಕರರ ಸಂಘದ ಅಧ್ಯಕ್ಷ ಅಧ್ಯಕ್ಷ ಮಲ್ಲೇಶ ಮಾತನಾಡಿ, ಕೊಳ್ಳೇಗಾಲ ತಾಲೂಕು ಕೇಂದ್ರದಲ್ಲಿ ಭವನ ನಿರ್ಮಾಣ ಮಾಡಬೇಕೆಂಬ ನಮ್ಮ ಕನಸಿಗೆ ಸಮಾಜದ ಮುಖಂಡರು, ಹಿರಿಯರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಹೆಚ್ಚಿನ ಸಹಕಾರ ನಿಡುತ್ತಿದ್ದಾರೆ. ಇದೊಂದು ಮಾದರಿ ಭವನವಾಗಬೇಕೆಂಬ ಪರಿಕಲ್ಪನೆ ನಮ್ಮದಾಗಿದೆ. ಅಲ್ಲದೇ ಬಡ ಮಕ್ಕಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲು ನಮ್ಮ ಸಂಘ ಬದ್ದವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಪಿಆರ್‍ಓ ಆರ್.ಎಂ.ಸ್ವಾಮಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್‍ರಿಚ್ ಮಹದೇವಸ್ವಾಮಿ, ಚಾ.ನಗರ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್, ಮಹಾಸಭಾದ ಅದ್ಯಕ್ಷ ಮೂಡ್ಲುಪುರ ನಂದೀಶ್, ತಾಲೂಕು ಅಧ್ಯಕ್ಷ ಹೊಸೂರು ನಟೇಶ್, ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಮುಖಂಡರಾದ ಸಂತೇಮರಹಳ್ಳಿ ಮಾದಪ್ಪ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಕೊಳ್ಳೇಗಾಲ ಬಸವ ಸೇವಾ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಬಸವ ಮಹಾಮನೆ ಟ್ರಸ್ಟ್ ಕಾರ್ಯದರ್ಶಿ ವೀರಭದ್ರಸ್ವಾಮಿ, ಸೋಮಶೇಖಪ್ಪ, ಪ್ರಸಾದ್ ಸ್ವಾಇ, ಶಿವಮಾದಪ್ಪ, ಶಿಸ್ವಾಮಿ, ಲೋಕೇಶ್, ನಾಗರಾಜು, ನಂದೀಶ್, ಆರ್. ಪುಟ್ಟಮಲ್ಲಪ್ಪ, ಮಲ್ಲಿಕಾರ್ಜುನ್, ಮೊದಲಾಧವರು ಇದ್ದರು.

Leave a Reply

Your email address will not be published. Required fields are marked *