ರೈತ ಉತ್ಪಾದಕ ಕಂಪನಿಯ ಮೂಲಕ ಅಭಿವೃದ್ದಿ ಸಾಧ್ಯ : ವೈ.ಪಿ.ಮಂಜುನಾಥ್

ಚಾಮರಾಜನಗರ: ಭಾರತೀಯ ಕಂಪನಿಗಳ ಕಾಯಿದೆ ೨೦೧೩ರ ಆಡಿಯಲ್ಲಿ ನೋಂದಾಯಿಸಲಾದ ರೈತ ಉತ್ಪಾದಕ ಕಂಪನಿಗಳು ಪ್ರಜಾಸತ್ತಾತ್ಮಕ ಆಡಳಿತವನ್ನು ಹೊಂದಿದ್ದು, ಇದರ ಮೂಲಕ ರೈತರ ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಹರದನಹಳ್ಳಿ ಹೋಬಳಿ ರೈತ ಉತ್ಪಾದಕ ಕಂಪನಿಯ ವೈ. ಪಿ. ಮಂಜುನಾಥ್ ಹೇಳಿದರು.

ತಾಲೂಕಿನ ಅರಕಲವಾಡಿಯಲ್ಲಿ ಹರದನಹಳ್ಳಿ ಹೋಬಳಿ ರೈತ ಉತ್ಪಾದಕ ಕಂಪನಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೊಂದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು, ಕಂಪನಿಯ ಮುಖ್ಯ ಗುರಿ ನಿರ್ಮಾಪಕರಿಗೆ ತಮ್ಮದೇ ಆದ ಸಂಸ್ಥೆಯ ಮೂಲಕ ಉತ್ತಮ ಆದಾಯವನ್ನು ಖಚಿತಪಡಿಸುವುದ, ಒಟ್ಟುಗೂಡಿಸುವಿಕೆಯ ಮೂಲಕ ಪ್ರಾಥಮಿಕ ಉತ್ಪಾದಕರು ಪ್ರಮಾಣದ ಆರ್ಥಿಕತೆಯ ಲಾಭವನ್ನು ಪಡೆಯಬಹುದಾಗಿದೆ ಎಂದರು.

ನೇಗಿಲಿಗೆ ಪೂಜೆ ಮಾಡುವ ಮೂಲಕ ಸಭೆಯನ್ನು ಉದ್ಘಾಟಿಸಿದ ಕೃಷಿ ಅಧಿಕಾರಿ ಸಂತೋಷ್‌ಕುಮಾರ್ ಮಾತನಾಡಿ, ಆಹಾರ ಸಂಸ್ಕರಣಾ ಚಟುವಟಿಕೆಗಳಲ್ಲಿ ತೊಡಗಿರುವ ಸ್ವ ಸಹಾಯ ಸಂಗಗಳ ಸದಸ್ಯರಿಗೆ ಬಂಡವಾಳ  ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಗರಿಷ್ಠ ೪೦ ಸಾವಿರ  ಮತ್ತು ಪ್ರತಿ ಸ್ವ ಸಹಾಯ ಸಂಘಕ್ಕೆ ಗರಿಷ್ಠ ೪ ಲಕ್ಷ ರೂ .ಸಾಲ ಸೌಲಭ್ಯವನ್ನು ಪಡೆಯಲು ಅವಕಾಶವಿದೆ  ಆದರಿಂದ ಸ್ವ ಸಹಾಯ ಗುಂಪುಗಳ ಸದಸ್ಯರು ಇದರ ಸದುಪಯೋಗವನ್ನು  ಪಡೆದುಕೊಳ್ಳುವ ಮೂಲಕ ಅಭಿವೃದ್ದಿ ಹೊಂದುವ ಜೊತೆ ತಾವೂ ಕಂಪನಿಯನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.

ವಿಜ್ಞಾನಿ ಗಿರೀಶ್‌ಕುಮಾರ್ ಮಾತನಾಡಿ, ಆಹಾರ ಸಂಸ್ಕÀರಣ, ಮೌಲ್ಯವರ್ಧನೆ ಮಾಡಿ ಲಾಭಗಳಿಸುವ ಕುರಿತು ಮಾಹಿತಿ ನೀಡಿದರು. ಕಂಪನಿಯ ಸಿಇಓ ಮೇಘ ಬಜೆಟ್ ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಸಂಯೋಜಕ ರಾಜೇಂದ್ರಪ್ರಸಾದ್, ಹರದನಹೋಬಳಿ ರೈತ ಉತ್ಪಾದಕ ಕಂಪನಿ ಉಪಾಧ್ಯಕ್ಷ ಮಲ್ಲೇಶ್, ನಿರ್ದೇಶಕರಾದ ಚೆನ್ನೇಗೌಡ, ಪಿ. ಮಹೇಶ್, ಬೆಳ್ಳೇಗೌಡ, ರವಿ, ಗುರುಶಾಂತಪ್ಪ, ಶಂಕರಪ್ಪ, ಎಚ್.ಎಲ್,ರಾಜೇಶ್, ಶಿವಕುಮಾರ್, ಜಯಕುಮಾರ್, ಮಧುಕುಮಾರ್, ಮಹೇಶ್‌ರಾವ್ ಹಾಜರಿದ್ದರು.

Leave a Reply

Your email address will not be published. Required fields are marked *