ಚಾಮರಾಜನಗರ: ನಗರದ ದೇವಾಂಗ ೩ನೇ ಬೀದಿಯಲ್ಲಿರುವ ಟೈರ್ ಅಂಗಡಿಯೊಂದಕ್ಕೆ ಆಕಸ್ಮಿಕ ಶಾರ್ಟ್ ಸರ್ಕ್ರ್ಯೂಟ್ನಿಂದಾಗಿ ಅಂಗಡಿ ಭಸ್ಮಗೊಂಡು ನಷ್ಟಕ್ಕೀಡಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಇಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿ ವೈಯಕ್ತಿಕ ಪರಿಹಾರ ವಿತರಿಸಿದರು.
ಈ ಸಂದರ್ಭದಲ್ಲಿ ಆಕಸ್ಮಿಕ ಅವಗಡದ ಕುರಿತು ಅಂಗಡಿ ಮಾಲೀಕ ರಮೇಶ್ ಅವರು ಶಾಸಕರಲ್ಲಿ ಅವಲತ್ತುಕೊಂಡು ಮಾತನಾಡಿ ಇದ್ದಕ್ಕಿದ್ದಂಗೆ ವಿದ್ಯುತ್ ಅವಗಡ ಸಂಭವಿಸಿ ತೀವ್ರ ನಷ್ಟವಾಗಿದ್ದು ಬೆಲೆ ಬಾಳುವ ವಸ್ತುಗಳು, ಟೈಲರಿಂಗ್ ಮೆಷಿನ್, ಹೊಸ ಬಟ್ಟೆಗಳು,ಪೀಠೋಪಕರಣಗಳು ಸೇರಿದಂತೆ ಅಂದಾಜು ೧.೫೦ ಲಕ್ಷರೂ ನಷ್ಟವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡ ಮಹೆಶ್ ಕುದರ್ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಜರಿದ್ದರು.