ಚಾಮರಾಜನಗರ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗ ಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸಲಹೆ ನೀಡಿದರು.
ಅವರು ನಗರದಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ೨೦೨೩-೨೪ ನೇ ಸಾಲಿನ ಚಾಮ ರಾಜನಗರಜಿಲ್ಲೆಯ ೧೪-೧೭ ವರ್ಷದ ವಯೋ ಮಿತಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಶೇಷಚೇತನ ಮಕ್ಕಳ ಕ್ರೀಡಾಕೂಟವನ್ನುಗುಂಡುಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಿಶೇಷಚೇತನರಿಗೆದೇವರು ವಿಶೇಷವಾದಂತಹ ಸಾಮರ್ಥ್ಯ, ಪ್ರತಿಭೆಯನ್ನು ನೀಡಿದ್ದು ಇದನ್ನು ಸಕ ರಾತ್ಮಕವಾಗಿ ತೆಗೆದುಕೊಂಡುಕ್ರೀಡೆಯಲ್ಲೂ ಸಹ ಸಾಧನೆ ಮಾಡಬೇಕು. ಹೀಗಾಗಿ ಸರ್ಕಾರಗಳು ವಿಶೇಷ ಚೇತನರಿಗೆ ಕ್ರೀಡಾಕೂಟ ಆಯೋಜಿಸಿ ಅವರ ಕ್ರೀಡಾ ಸಾಧನೆಗೆ ಅವಕಾಶ ಮಾಡಿಕೊಟ್ಟಿದೆ.ಕ್ರೀಡೆಗೆ ಯಾವುದೇ ದೈಹಿಕ ವಿಕಲತೆ ಅಡ್ಡ ಬರುವು ದಿಲ್ಲ ಇದಕ್ಕೆ ವಿಶೇಷಚೇತನ ವ್ಯಕ್ತಿಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಅನೇಕರು ನಮಗೆ ಮಾದರಿಯಾಗಿದ್ದಾರೆ. ಹೀಗಾಗಿ ವಿಶೇಷ ಚೇತನರುತಮ್ಮ ವಿಶೇಷ ಸಾಧನೆ ಮೂಲಕ ಪ್ರತಿಭೆಅನಾವರಣಕ್ಕೆಇದು ಸೂಕ್ತ ವೇದಿಕೆಯಾಗಿದೆಎಂದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು ಭಾಗವಹಿಸುವ ಕ್ರೀಡಾಸ್ಪೂರ್ತಿಯನ್ನು ವಿದ್ಯಾರ್ಥಿಗಳು ತೋರಬೇಕು ಈ ಮೂಲಕ ಕ್ರೀಡಾಪ್ರೇಮವನ್ನು ಮೆರೆಯಬೇಕೆಂದು ಸಲಹೆ ನೀಡಿದರು.
ಸರ್ಕಾರದಿಂದ ವಿಶೇಷಚೇತನರಿಗೆ ಹತ್ತು-ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು ಅದನ್ನು ಸದ್ಭsಳಕೆ ಮಾಡಿ ಕೊಂಡು ಶೈಕ್ಷಣಿಕವಾಗಿ ಹಾಗೂ ಸರ್ವತೋ ಮುಖವಾಗಿ ಪ್ರಗತಿ ಹೊಂದುವಂತೆ ತಿಳಿಸಿದರು.
ಅಪರಜಿಲ್ಲಾಧಿಕಾರಿಗೀತಾ ಹುಡೇದ ಮಾತನಾಡಿ ವಿಶೇಷಚೇತನರು ವಿಕಲತೆ ಇದ್ದರೂ ಹೃದಯ ಶ್ರೀಮಂತಿಕೆಯಿಂದ ವಿಶೇಷ ಸಾಧನೆ ಮಾಡುವ ಅಸಾಧಾರಣ ಪ್ರತಿಭೆಯುಳ್ಳವರಾಗಿದ್ದು ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿ ಎಂದು ವಿಶೇಷಚೇತನ ಮಕ್ಕಳನ್ನು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕ ರಾಮ ಚಂದ್ರರಾಜೇ ಅರಸ್, ಪ್ರಾಂಶುಪಾಲರಾದ ಲಿಂಗರಾಜೇ ಅರಸ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶಂಕರ್, ಡಿವೈಪಿಸಿ ಲಕ್ಷ್ಮೀಪತಿ, ಹಿರಿಯ ನಾಗರೀಕ ಮತ್ತು ವಿಕಲಚೇತನರ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ವಿಕಲಚೇತನರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಮೇಶ್ ಸೇರಿದಂತೆ ಜಿಲ್ಲೆಯ ೫ ತಾಲ್ಲೂಕುಗಳ ವಿಶೇಷ ಚೇತನ ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ದೈಹಿಕ ಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು.