- ಡಿಸಿ, ಎಸ್ಪಿ ಸೇರಿದಂತೆ 117 ಮಂದಿಯಿಂದ ರಕ್ತದಾನ
- ಬೃಹತ್ ಆರೋಗ್ಯ ತಪಾಣೆಯಲ್ಲಿ 1468ಕ್ಕೂ ಹೆಚ್ಚು ಮಂದಿ ತಪಾಸಣೆ
- ಗಾಂಧೀಜಿ, ಶಾಸ್ತ್ರಿ ಹಾಗೂ ರಾಜೇಂದ್ರಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ
ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಪರಮಪೂಜ್ಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮೀಗಳ 108 ನೇ ಜಯಂತಿ ಮಹೋತ್ಸವ ಹಾಗೂ ಗಾಂಧೀಜಿ ಹಾಗು ಲಾಲ್ ಬಹುದ್ದೂರ್ ಶಾಸ್ತ್ರಿಗಳ ಜಯಂತಿ ಅಂಗವಾಗಿ ಜೆಎಸ್ಎಸ್ ಕಾಲೇಜಿನ ಅವರಣದಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣೆ ಮತ್ತು ಸ್ವಯ ಪ್ರೇರಿತ ರಕ್ತದಾನ ಶಿಬಿರ ಬಹಳ ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಮೈಸೂರಿನ ಜೆಎಸ್ಎಸ್ ಅಸ್ಪತ್ರೆಯ ತಜ್ಞ ವೈದ್ಯರ ತಂಡ ವಿವಿಧ ವಿಭಾಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯ ಸಲಹೆ ಹಾಗೂ ಔóಷಧೋಪಚಾರಗಳನ್ನು ನೀಡಿದರು. 1468 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಇದಕ್ಕು ಮುನ್ನಾ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಾಜೇಂದ್ರಶ್ರೀಗಳ 108ನೇ ಜಯಂತಿಯ ಹಿನ್ನೆಲೆಯಲ್ಲಿ 108 ಮಂದಿಯಿಂದ ರಕ್ತದಾನ ಮಾಡಿಸುವ ಸಂಕಲ್ಪದೊಂದಿಗೆ ಆರಂಭವಾದ ರಕ್ತದಾನ ಶಿಬಿರಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್, ಎಸ್ಪಿ ಪದ್ಮಿನಿ ಸಾಹು ಅವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಹರವೆ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ, ಕೆಆರ್ಡಿಎಲ್ ಮಾಜಿ ಅಧ್ಯಕ್ಷ ಎಂ. ರುದ್ರೇಶ್ ಸೇರಿದಂತೆ 117 ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಜಿಲ್ಲಾಧಿಕಾರಿ ಶಿಲ್ಪನಾಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗಾಂಧೀಜಿ ಹಾಗು ಲಾಲ್ ಬಹದ್ದೂರ್ಶಾಸ್ತ್ರೀಗಳು ಅವರು ಬಹಳ ಸರಳ ವ್ಯಕ್ತಿತ್ವವುಳ್ಳರಾಗಿ ಸರಳವಾಗಿ ಬದುಕಿ ಜೀವನದ ಮೌಲ್ಯವನ್ನು ತೋರಿಸಿಕೊಟ್ಟರು. ಶ್ರೀ ರಾಜೇಂದ್ರಶ್ರೀಗಳು ಸಹ ಕಾಯಕಯೋಗಿಗಳಾಗಿ ಧಾರ್ಮಿಕ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆಗಳನ್ನು ನೀಡಿ, ಜನ ಮಾನಸದಲ್ಲಿದ್ದಾರೆ. ಮೂವರು ಮಹಾಪುರುಷರ ಜಯಂತಿ ಕಾರ್ಯಕ್ರಮದಲ್ಲಿ ಒಂದು ಸಾರ್ಥಕವಾದ ಸೇವಾ ಕಾರ್ಯಕ್ರಮಗಳ ಮೂಲಕ ನಡೆಸುತ್ತಿರುವುದು ಹೆಮ್ಮೆ ವಿಚಾರವಾಗಿದೆ. ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಆಯೋಜನೆ ಮಾಡಿರುವ ಈ ಕಾರ್ಯಕ್ರಮ ಬಹಳ ಔಚಿತ್ಯಪೂರ್ಣವಾಗಿದೆ ಎಂದು ತಿಳಿಸಿದರು.
ಗಾಂಧೀಜಿ ಅವರ ನುಡಿಗಳು ನಮ್ಮೆಗೆಲ್ಲ ದಾರಿ ದೀಪವಾಗಿದೆ. ಬ್ರೀಟಷರ ವಿರುದ್ದ ಮಾತ್ರ ಅವರು ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದುಕೊಳ್ಳಲಿಲ್ಲ. ದೇಶದಲ್ಲಿರು ಬಡತನ, ದ್ರಾರಿದ್ಯ, ಅಸಮಾನತೆ, ಮೌಢ್ಯ ಹಾಗೂ ಜಾತಿ ವ್ಯವಸ್ಥೆ ವಿರುದ್ದ ಹೋರಾಟ ಮಾಡಿದರು. ಆದೇ ರೀತಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಹಸಿರು ಕ್ರಾಂತಿ, ಆಹಾರ ಭದ್ರತೆ ಹಾಗೂ ದೇಶದ ಭದ್ರತೆ ಹಾಗೂ ಅಭಿವೃದ್ದಿಗಾಗಿ ಶ್ರಮಿಸಿದ ಮಹಾ ಪುರುಷರು ಎಂದು ಬಣ್ಣಿಸಿದರು.
ಜೆಎಸ್ಎಸ್ ಸಂಸ್ಥೆಯು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನಪರ ವಾದ ಯೋಜನೆಗಳನ್ನು ನೀಡಿದೆ. ಬಹಳಷ್ಟು ಮಂದಿಗೆ ಸಹಾಯ ಮಾಡಿದೆ. ಇಂಥ ಸಂಸ್ಥೆಯ ಒಂದೇ ಸೂರಿನಡಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಪದ್ಮನಿ ಸಾಹು, ಜಿ.ಪಂ. ಸಿಇಓ ಆನಂದ್ಪ್ರಕಾಶ್ ಮೀನಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್, ಎಎಸ್ಪಿ ಉದೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರಂ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಮಹೇಶ್, ರಾಜ್ಯ ಸಮಿತಿ ಸದಸ್ಯೆ ಡಾ. ಬಿ.ಎನ್. ರೇಣುಕಾದೇವಿ, ರಕ್ತನಿಧಿ ಅಧಿಕಾರಿ ಡಾ. ದಿವ್ಯ, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಆರ್.ಎಂ. ಸ್ವಾಮಿ, ಮೈಸೂರು ಜೆಎಸ್ಎಸ್ ವೈದ್ಯಾಕಿಯ ಕಾಲೇಜಿನ ಪ್ರಾಂಶುಪಾಲ ಡಾ. ಬಸವಗೌಡಪ್ಪ, ನಿರ್ದೇಶಕ ಡಾ. ಮಧು, ಚಾ.ನಗರ ಜೆಎಸ್ಎಸ್ ಅಧೀಕ್ಷಕ ಗೋವಿಂದಶೆಟ್ಟಿ, ಬಿ.ಕೆ. ರವಿಕುಮಾರ್, ಪ್ರಾಂಶುಪಾಲ ಸಿದ್ದರಾಜು, ಸಿಲ್ಕ್ಸಿಟಿ ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್, ಅಧ್ಯಕ್ಷರಾದ ಆಲೂರು ಪ್ರದೀಪ್, ಎಚ್.ಎಂ. ಅಜಯ್, ಟಿ.ಪಿ. ವಿಶ್ವಾಸ್, ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್, ಡಿ. ನಾಗೇಂದ್ರ, ಪಿ. ಮರಿಸ್ವಾಮಿ, ಸದಾಶಿವಮೂರ್ತಿ, ಮುನ್ನಾ ಮೊದಲಾಧವರು ಇದ್ದರು.