ಶ್ರಾವಣ ಶನಿವಾರ: ನೃಪತುಂಗ ವೃತ್ತದಲ್ಲಿ ವಿಜೃಂಭಣೆಯಿಂದ ಶ್ರೀ ಶನೇಶ್ವರಸ್ವಾಮಿ ಪೂಜಾ, ಹರಿಕಥೆ, ಸಹಪಂಕ್ತಿ ಭೋಜನಾ

ಚಾಮರಾಜನಗರ: ನಗರದ ನೃಪತುಂಗ ವೃತ್ತದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಎರಡನೇ ಶ್ರಾವಣ ಶನಿವಾರ ಪ್ರಯುಕ್ತ ಸ್ವಾಮಿಗೆ ವಿಶೇಷ ಹೂವಿನ ಆಲಂಕಾರರೊಂದಿಗೆ ಪೂಜೆ ಸಲ್ಲಿಸಲಾಯಿತು.

ಶ್ರೀ ಶನೇಶ್ವರ ಸ್ವಾಮಿ ಭಕ್ತ ಮಂಡಲಿಯಿಂದ ಬೆಳಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಪೂಜೆ, ಬಿಲ್ವಾರ್ಚನೆ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ ನಡೆಯಿತು. ನಂತರ ಮಂಡ್ಯದ ಹರಿಕಥೆ ವಿದ್ವಾನ್, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಜಾನಪದ ರತ್ನ ಪ್ರಶಸ್ತಿ ಪುರಸ್ಕೃತರಾದ ಶಿವಾರ್ ಉಮೇಶ್ ತಂಡದಿಂದ ಶ್ರೀ ಶನೇಶ್ವರಸ್ವಾಮಿ ಹರಿಕಥೆ ಬಹಳ ಭಕ್ತಿ ಪೂರಕವಾಗಿ ನಡೆಯಿತು.

ಮಧ್ಯಾಹ್ನ ೧೨ ಗಂಟೆಗೆ ಶನೇಶ್ವರಸ್ವಾಮಿ ದರ್ಶನ ಪಡೆದ ಭಕ್ತರು ಹಾಗೂ ಸಾರ್ವಜನಿಕರಿಗೆ ಸಹ ಪಂಕ್ತಿ ಬೋಜನಾ ವ್ಯವಸ್ಥೆಯನ್ನು ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶನೇಶ್ವರ ಭಕ್ತ ಮಂಡಲಿಯ ಮಹೇಶ್ ಕುದರ್, ಪಾಪಣ್ಣ, ನಾರಾಯಣ್, ಶಾ. ಮುರುಳಿ, ಮಂಟೇಸ್ವಾಮಿ, ಕೃಷ್ಣ, ಮಂಜು, ಬಸವರಾಜು, ನಾರಾಯಣಗೌಡ, ಚಂದ್ರಶೇಖರ್, ಪ್ರಸಾದ್, ಶಾಂತ, ರಾಮೇಗೌಡ, ರಾಮಸಮುದ್ರ ನಾಗರಾಜು, ಮೊದಲಾಧವರು ಇದ್ದರು.

Leave a Reply

Your email address will not be published. Required fields are marked *