ಚಾಮರಾಜನಗರ: ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀಚನ್ನಬಸವಸ್ವಾಮೀಜಿಗಳವರ ೨೯ ನೇ ವ?ದ ಹುಟ್ಟಹಬ್ಬದ ಪ್ರಯುಕ್ತ ಶ್ರೀಗಳನ್ನು ಡಾ. ಎಂ.ಎಸ್. ಮೋಹನ್ ಸ್ನೇಹ ಬಳಗದಿಂದ ಗೌರವ ಸನ್ಮಾನ ಮಾಡಿ, ಆರ್ಶೀವಾದ ಪಡೆದುಕೊಂಡರು.
ಶ್ರೀ ಮಠದಕ್ಕೆ ಭೇಟಿ ನೀಡಿದ್ದ ಡಾ. ಮೋಹನ್ ಹಾಗೂ ಸ್ನೇಹ ಬಳಗದ ಅಧ್ಯಕ್ಷ ಕೆ.ಆರ್. ಲೋಕೇಶ್ ಮತ್ತು ತಂಡದವರು ಶ್ರೀಗಳಿಗೆ ಹೂವಿನ ಹಾಕಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಡಾ. ಎಂ.ಎಸ್. ಮೋಹನ್, ಪೂಜ್ಯ ಶ್ರೀಗಳು ಅತ್ಯಂತ ಕಿರಿಯ ವಯಸ್ಸಿನಲ್ಲಿ ಪೀಠಾಧಿಪತಿಗಳಾಗಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಸರ್ವ ಧರ್ಮಗಳ ಜೊತೆ ಸಮ್ಮೀಳನಗೊಂಡು ಬಸವವಾಧಿ ಶರಣರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಶ್ರೀಮಠದ ಅಭಿವೃದ್ದಿ ಹಾಗೂ ಭಕ್ತರ ಅಭುದ್ಯಯಕ್ಕೆ ದುಡಿಯುತ್ತಿದ್ದಾರೆ. ಅವರಿಗೆ ಭಗವಂತ ಹೆಚ್ಚಿನ ಆಯುಷ್ಯ, ಆರೋಗ್ಯವನ್ನು ಕೊಟ್ಟು ಶ್ರೀಮಠವು ಜಿಲ್ಲಾ ಕೇಂದ್ರದಲ್ಲಿ ಬಹಳ ಎತ್ತರಕ್ಕೆ ಬೆಳೆಸುವ ಶಕ್ತಿಯನ್ನು ನೀಡಲು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಕುರುಬಹುಂಡಿ ಕೆ.ಆರ್. ಲೋಕೇಶ್, ಪದಾಧಿಕಾರಿಗಳಾದ ಮಾಜಿ ನಗರ ಸಭಾ ಸದಸ್ಯ ಬಸವರಾಜು, ಮುಖಂಡರಾದ ರಾಜು ಪಣ್ಯದ ಹುಂಡಿ, ರಂಗಪ್ಪ, ಹೀರೆಬೇಗೂರು ಸೋಮಶೇಖರ್ , ಕಾಡಳ್ಳಿ ಕುಮಾರ್ ಇತರರು ಇದ್ದರು.