ಸಮರ್ಥನಂ ಬುದ್ಧಿ ವಿಕಲಚೇತನ ಮಕ್ಕಳಿಂದ ಸ್ವಾತಂತ್ರ್ಯ ದಿನಾಚರಣೆ

ಮೈಸೂರು: ಮೈಸೂರಿನ ವಿಜಯನಗರ ೪ನೇ ಹಂತದಲ್ಲಿರುವ ಸಮರ್ಥನಂ ಬುದ್ಧಿ ವಿಕಲಚೇತನ ಶಾಲೆಯ ಆವರಣದಲ್ಲಿಂದು ಬುದ್ಧಿಮಾಂಧ್ಯ ಮಕ್ಕಳಿಂದ ೭೬ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು.

ಮಾಜಿ ಸೈನಿಕರಾದ ರಾಜಕುಮಾರ್, ಯೂನಿಕ್ ಸೆಕ್ಯೂರಿಟಿ ಸೊಲ್ಯೂಷನ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ಗಿರೀಶ್, ಸಂಸ್ಥೆಯ ಹಿತೈಸಿ ಭಾಗ್ಯಲಕ್ಷ್ಮಿ, ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಸಾಮೂಹಿಕವಾಗಿ ರಾಷ್ಟ್ರ ದ್ವಜಾರೋಹಣ ಮಾಡಿದರು.

ಮಾಜಿ ಸೈನಿಕರಾದ ರಾಜಕುಮಾರ್ ಅವರು ಮಾತನಾಡಿ, ಇಂದು ಭಾರತೀಯ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಿಸಲು ನಾವು ಇಲ್ಲಿ ಸೇರುತ್ತಿರುವಾಗ, ನಮ್ಮ ಪ್ರೀತಿಯ ಮಾತೃಭೂಮಿಯನ್ನು ವಿಮೋಚನೆಗೊಳಿಸಲು ಪಟ್ಟುಬಿಡದೆ ಹೋರಾಡಿದ ಅಸಂಖ್ಯಾತ ಕೆಚ್ಚೆದೆಯ ಆತ್ಮಗಳಿಗಾಗಿ ನಮ್ಮ ಹೃದಯಗಳು ಹೆಮ್ಮೆ ಮತ್ತು ಕೃತಜ್ಞತೆಯಿಂದ ಉಬ್ಬುತ್ತವೆ ಎಂದರು. ಸ್ವಾತಂತ್ರ್ಯ ದಿನವು ಭಾರತೀಯ ಜನರ ಶೌರ್ಯ, ಸಾಂಘಿಕ ಕೆಲಸ ಮತ್ತು ದೃಢ ಮನೋಭಾವದ ವಿಜಯವಾಗಿದೆ. ಯುವ ನಾಗರಿಕರಾದ ನಾವು ಏಕತೆಯನ್ನು ಎತ್ತಿ ಹಿಡಿದು ಪ್ರಗತಿಯತ್ತ ಕೆಲಸ ಮಾಡಬೇಕಾಗಿದೆ. ಉಜ್ವಲ ಭವಿ? ರೂಪಿಸಿಕೊಳ್ಳಲು ಶಿಕ್ಷಣವನ್ನು ಸಾಧನವಾಗಿ ಬಳಸಿಕೊಳ್ಳೋಣ ಎಂದು ತಿಳಿಸಿದರು.

ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು ಮಾತನಾಡಿ, ನಾವು ವಿಶ್ವದ ಮುಕ್ತ ಮತ್ತು ಸಂತೋ?ದ ಜನರ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಯುವಕರಾದ ನಾವು ನಾಳೆಯ ನಮ್ಮ ದೇಶದ ಭವಿ?. ಹಾಗೂ ಸಮಸ್ಯೆಗಳನ್ನು ನೋಡಬೇಕು ಮತ್ತು ತಕ್ಷಣ ಪರಿಹಾರವನ್ನು ಕಂಡುಹಿಡಿಯಬೇಕು ಹಾಗೇಯೇ ಒಗ್ಗಟ್ಟಾಗಿರಬೇಕು ಎಂದು ಹೇಳಿದರು.

ಶಾಲೆಯ ಬುದ್ಧಿಮಾಂದ್ಯ ಮಕ್ಕಳಿಂದ ನೃತ್ಯ, ಹಾಡುಗಾರಿಕೆ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸದರಿ ಕಾರ್ಯಕ್ರಮದಲ್ಲಿ ಯೂನಿಕ್ ಸೆಕ್ಯೂರಿಟಿ ಸೊಲ್ಯೂಷನ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ಗಿರೀಶ್, ಸಂಸ್ಥೆಯ ಹಿತೈಸಿ ಭಾಗ್ಯಲಕ್ಷ್ಮಿ, ಕಿಶೋರ್, ಮುಖ್ಯೋಪಾಧ್ಯಾಯರಾದ ಭ್ರಮಾರಂಭ, ಪದ್ಮ, ವಿದ್ಯಾವತಿ, ಪವಿತ್ರ, ರಾಘವೇಂದ್ರ, ಶರೀಫ, ಮಕ್ಕಳ ಪೋಷಕರು ಸೇರಿದಂತೆ ಮತ್ತಿತರು ಭಾಗವಹಿಸಿದರು.

Leave a Reply

Your email address will not be published. Required fields are marked *