ಚಾಮರಾಜನಗರ: ಕೇವಲ ೨೨ ವರ್ಷಗಳ ಅವಧಿಯಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುವ ಜೊತೆಗೆ ಬ್ಯಾಂಕ್ ಮಾದರಿಯಲ್ಲಿ ಸದಸ್ಯರಿಗೆ ಎಲ್ಲಾ ರೀತಿಯ ಸಾಲಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂದು ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗ ಪ್ರಕಾಶ್ ತಿಳಿಸಿದರು.
ನಗರದ ಶ್ರೀ ಸಿದ್ದಮಲ್ಲೇಶ್ವರ ಮಠದ ಅವರಣದಲ್ಲಿರುವ ಅನುಭವ ಮಂಟಪದಲ್ಲಿ ನಡೆದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ನಮ್ಮ ಆಡಳಿತ ಮಂಡಲಿಯ ಪದಾಧಿಕಾರಿಗಳು ಗೌರವ ಧನ ಪಡೆದುಕೊಳ್ಳದೇ ಸಂಘದ ಅಭಿವೃದ್ದಿಗೆ ದುಡಿಯುವ ಜೊತೆಗೆ ಸದಸ್ಯರಿಗೆ ಹೆಚ್ಚಿನ ಡಿವೆಂಡೆಟ್ ನೀಡುವ ಮೂಲಕ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಅಲ್ಲದೇ ಕಳೆದ ೨೦ ವರ್ಷಗಳಿಂದ ಸಹ ಆಡಳಿತ ಮಂಡಲಿಯ ಸದಸ್ಯರು ಯಾವುದೇ ಗೌರವ ಧನ ಇಲ್ಲದೇ ದುಡಿಯುತ್ತಿರುವ ಏಕೈಕ ಸಂಘ ನಮ್ಮದಾಗಿದೆ. ಸಹಕಾರಿ ಚಳವಳಿಯನ್ನು ಬೆಳೆಸಿ, ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡಬೇಕೆಂಬ ನಮ್ಮ ಪರಿಕಲ್ಪನೆ ಯಶಸ್ವಿಯಗಿದೆ ಎಂದರು.

ಪ್ರಸಕ್ತ ವರ್ಷದಲ್ಲಿ ಸಂಘವು ೧೩ ಕೋಟಿ ರೂ.ಗಳ ವಹಿವಾಟು ನಡೆಸಿ, ೨೫,೫೪,೨೫೧ ರೂ.ಗಳ ನಿವ್ವಳ ಲಾಭ ಪಡೆದು ಕೊಂಡಿದೆ. ಹೀಗಾಗಿ ಸದಸ್ಯರಿಗೆ ಶೇ. ೧೨ ರಷ್ಟು ಡಿವೆಂಡೆಟ್ ನೀಡಲಾಗುತ್ತದೆ. ಸಂಘದಲ್ಲಿ ೧.೫೬ ಕೋಟಿ ಷೇರು ಪಡೆದು ಕೊಳ್ಳಲಾಗಿದೆ. ಅಲ್ಲದೇ ಶೇ. ಸದಸ್ಯರು ಸಂಘದಲ್ಲಿರುವ ಠೇವಣಿಗೆ ಶೇ. ೮ ರಷ್ಟು ಬಡ್ಡಿ ನೀಡಿ, ಸಾಲ ಪಡೆದುಕೊಳ್ಳುವ ಸದಸ್ಯರಿಗೆ ಕೇವಲ ಶೇ ೯ ರಷ್ಟು ಬಡ್ಡಿಯನ್ನು ನೀಡುವ ಏಕೈಕ ಸಹಕಾರಿ ಸಂಸ್ಥೆಯಾಗಿದೆ. ಸದಸ್ಯರ ಹಿತವನ್ನು ಕಾಯುವ ಜೊತೆಗೆ ಅವರ ಆರ್ಥಿಕ ಅಭಿವೃದ್ದಿಯನ್ನು ಗಮನದಲ್ಲಿಟ್ಟು ಕೋರಿಕೆಯ ಅನುಗುಣವಾಗಿ ಸಾಲ ನೀಡಲಾಗುತ್ತಿದೆ ಎಂದು ಪ್ರಕಾಶ್ ತಿಳಿಸಿದರು.
ಅಲ್ಲದೇ ಬಸವ ಮನೆ ಸ್ವಂತ ಕಟ್ಟಡವನ್ನು ಹೊಂದಿ ಸಹಕಾರ ಸಂಘ ಆಡಳಿತ ಕಚೇರಿಯನ್ನು ನಿರ್ಮಾಣ ಮಾಡಿ, ಸಂಘದ ಎಲ್ಲಾ ವ್ಯವಹಾರವನ್ನು ಗಣೀಕೀಕೃತಗೊಳಿಸಲಾಗಿದೆ. ಈ ಪಾಸ್ ಬುಕ್, ಎಸ್ಎಂಎಸ್ ಸೌಲಭ್ಯ ಸೇರಿದಂತೆ ಸದಸ್ಯರ ಎಲ್ಲಾ ವ್ಯವಹಾರವು ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಸೇರ್ಪಡೆಗೊಳಿಸಲಾಗಿದೆ. ಇ ಸ್ಪಾಂಪ್, ಆರ್ಡಿಜಿಎಸ್, ನೆಪ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಿದ್ದಾಗಂಗಾ ಕುಡಿಯುವ ನೀರಿನ ಘಟಕವನ್ನು ಆರಂಭಿಸಿ, ಕೇವಲ ೫ ರೂ.ನಲ್ಲಿ ಶುದ್ದ ಕುಡಿಯುವ ನೀರು ಹಾಗೂ ಮಾಸ್ಟರ್ ಕಾರ್ಡ್೨೪*೭ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಾರೆ ಸಹಕಾರ ಸಂಘದ ಮೂಲ ಉದ್ದೇಶದೊಂದಿಗೆ ಸಹಕಾರಿ ತತ್ವದಡಿಯಲ್ಲಿ ಮುನ್ನಡೆಸಲಾಗುತ್ತಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ವೈ.ಎಸ್.ನಂಜುಂಡಸ್ವಾಮಿ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು. ೨೦೨೩-೨೦೨೮ನೇ ಸಾಲಿಗೆ ಆಯ್ಕೆಯಾದ ನೂvನ ಸಂಘದ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದ ಅಧಿಕಾರ ಹಸ್ತಾಂತರ ಮಾಡಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಶಿವಣ್ಣ, ನಿರ್ದೇಶಕರಾದ ಎಂ.ಕುಮಾರ್, ಕೆ.ಎಸ್. ಮಹದೇವಸ್ವಾಮಿ, ಎಂ. ಲಿಂಗರಾಜಮೂರ್ತಿ, ಎಂ. ಗೌರಿಶಂಕರ್, ಡಿ.ಎಸ್. ಸ್ವಾಮಿ, ಎಸ್. ಗುರುಸ್ವಾಮಿ, ಎಂ. ನಂಜುಂಡಸ್ವಾಮಿ, ಎನ್. ಪ್ರಕಾಸ್, ಪ್ರಮೀಳಾ ಆರ್. ಉದಗಟ್ಟಿ, ಎಸ್. ನಾಗಮಣಿ, ರಮೇಶ್, ವಿ. ಶೈಲೇಂದ್ರ, ನೌಕರರಾದ ಮಹೇಂದ್ರ, ಆಕಾಶ್ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.