ಚಾಮರಾಜನಗರ: ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು, ತಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ರವರನ್ನು ಜೈ ಹಿಂದ್ ಕಟ್ಟೆಯ ಋಗ್ವೇದಿ ಕುಟೀರದಲ್ಲಿ ಕೊಳ್ಳೇಗಾಲದ ಚಿತ್ರಕಲಾವಿದ ಮುಡಿಗುಂಡ ಮೂರ್ತಿರವರು ಸ್ವರಚಿತ ಭಾವಚಿತ್ರವನ್ನು ನೀಡಿ ಗೌರವಿಸಿದರು.
ಕಳೆದ ಮೂರು ದಶಕಗಳಿಂದಲೂ ನಿರಂತರವಾಗಿ ಜಿಲ್ಲೆ ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಾ ಸಂಸ್ಕೃತಿ, ಪರಂಪರೆ ,ಸಾಹಿತ್ಯ, ರಾಷ್ಟ್ರೀಯ ಅರಿವು, ಯುವಜನ, ಶಿಕ್ಷಣ ಮುಂತಾದ ಹಲವು ಕ್ಷೇತ್ರಗಳಲ್ಲಿ ಸದಾ ಕಾಲ ಸೇವೆ ಸಲ್ಲಿಸುತ್ತಿರುವ ಋಗ್ವೇದಿ ರವರನ್ನು ಅಭಿನಂದಿಸಿದರು.
ಮುಡಿಗುಂಡ ಮೂರ್ತಿ ರಾಜ್ಯದ ಮಹಾನ್ ವ್ಯಕ್ತಿಗಳ ಚಿತ್ರ ಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ. ಸಾಹಿತಿ ಶ್ರೀಧರ್ ಉಪಸ್ಥಿತರಿದ್ದರು.
