ಅಕ್ಟೋಬರ್ 23 ಮತ್ತು 24 ರಂದು ಏಕಮುಖ ವಾಹನ ಸಂಚಾರ ವ್ಯವಸ್ಥೆ

ಹಳೆ ಮೈಸೂರು-ಬೆಂಗಳೂರು ರಸ್ತೆಯ ಅಂಕ್ ರಸ್ತೆ ಜಂಕ್ಷನ್‌ನಿoದ ರಾಜೇಂದ್ರನಗರ ರಸ್ತೆ, ಶಿವಾಜಿ ರಸ್ತೆ ಮಾರ್ಗವಾಗಿ ಡಾ|| ರಾಜಕುಮಾರ್ ವೃತ್ತ (ಫೌಂಟನ್ ವೃತ್ತ) ದವರೆಗೆ : ಅಂಕ್ ರಸ್ತೆ ಹಳೆ ಬೆಂಗಳೂರು-ಮೈಸೂರು ರಸ್ತೆ ಮಾರ್ಗವಾಗಿ ಬರುವ ವಾಹನಗಳು ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತ ರಾಜೇಂದ್ರನಗರ ಮುಖ್ಯ ರಸ್ತೆ- ಡಾ|| ರಾಜಕುಮಾರ್ ವೃತ್ತದವರೆಗೆ (ಫೌಂಟೆನ್ ವೃತ್ತ) ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಹಾಗೂ ಸದರಿ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುವ ಎಲ್ಲಾ ವಾಹನಗಳ ಸಂಚಾರವನ್ನು ಅಕ್ಟೋಬರ್ 23 ಮತ್ತು ಅಕ್ಟೋಬರ್ 24 ರಂದು ನಿರ್ಬಂಧಿಸಲಾಗಿದೆ.

 ಡಾ|| ರಾಜಕುಮಾರ್ ವೃತ್ತ (ಫೌಂಟನ್ ವೃತ್ತ) ದಿಂದ ಹಳೆ ಮೈಸೂರು-ಬೆಂಗಳೂರು ರಸ್ತೆಯ ಅಂಕ್ ರಸ್ತೆ ಜಂಕ್ಷನ್‌ವರೆಗೆ : ಡಾ|| ರಾಜಕುಮಾರ್ ವೃತ್ತದಿಂದ (ಫೌಂಟೆನ್ ವೃತ್ತ) ಬೆಂಗಳೂರು ರಸ್ತೆ ಕಡೆಗೆ ಸಾಗುವ ವಾಹನಗಳಿಗೆ ಅಷ್ಟು ವೃತ್ತದ ಕಡೆಯಿಂದ ಹಳೆ ಮೈಸೂರು-ಬೆಂಗಳೂರು ರಸ್ತೆಯ ಅಂಕ್ ರಸ್ತೆ ಜಂಕ್ಷನ್‌ವರೆಗೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುವ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. (ಎಲ್.ಐ.ಸಿ ವೃತ್ತದ ಕಡೆಗೆ ಸಂಚರಿಸುವoತಿಲ್ಲ)
ಐ.ಎನ್.ನರಸಿoಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ) ದಿಂದ ಹಳೆ ಮೈಸೂರು-ಬೆಂಗಳೂರು ರಸ್ತೆಯ ಅಂಕ್ ರಸ್ತೆ ಜಂಕ್ಷನ್‌ವರೆಗೆ: ಟಿ.ಎನ್.ನರಸಿಂಹಮೂರ್ತಿ ವೃತ್ತದಿಂದ (ಎಲ್.ಐ.ಸಿ ವೃತ್ತ) ಹಳೆ ಮೈಸೂರು-ಬೆಂಗಳೂರು ರಸ್ತೆಯ ಅಂಕ್ ರಸ್ತೆ ಜಂಕ್ಷನ್ ಕಡೆಗೆ ಪೂರ್ವದಿಂದ ಪಶ್ಚಿಮಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ) ದಿಂದ ಅಂಕ್ ರಸ್ತೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಅ.24 ರಂದು ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವ ರಸ್ತೆಗಳು:
ಅ.24 ರಂದು ಬೆಳಗ್ಗೆ 06-00 ಗಂಟೆಯಿoದ ರಾತ್ರಿ 08-00 ಗಂಟೆವರೆಗೆ ದಸರಾ ಜಂಬೂ ಸವಾರಿ ಮೆರವಣಿಗೆಯು ಸಾಗುವ ಮಾರ್ಗವಾದ ಅರಮನೆಯ ಬಲರಾಮ ದ್ವಾರ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಹೈವೇ ವೃತ್ತ, ನೆಲ್ಸನ್ ಮಂಡೇಲಾ ರಸ್ತೆ, ಬನ್ನಿಮಂಟಪದ ಮುಖ್ಯ ದ್ವಾರದವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಬನ್ನಿ ಮಂಟಪ ಕವಾಯಿತು ಮೈದಾನದ ಉತ್ತರ ಭಾಗದ ರಸ್ತೆಯಲ್ಲಿ ಹನುಮಂತನಗರ 3ನೇ ಮುಖ್ಯ ರಸ್ತೆ ಜಂಕ್ಷನ್‌ನಿoದ ಬೆಂಗಳೂರು ರಸ್ತೆ ಓಲ್ಡ್ ಟೋಲ್ ಗೇಟ್ ಜಂಕ್ಷನ್‌ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ನAಜನಗೂಡು ರಸ್ತೆ, ಟಿ.ನರಸೀಪುರ ರಸ್ತೆ, ಬನ್ನೂರು ರಸ್ತೆ, ಬೆಂಗಳೂರು ರಸ್ತೆ, ಕೆ.ಆರ್.ಎಸ್ ರಸ್ತೆ, ಹುಣಸೂರು ರಸ್ತೆ, ಬೋಗಾದಿ ರಸ್ತೆ ಮತ್ತು ಹೆಚ್.ಡಿ.ಕೋಟೆ ರಸ್ತೆ ಮೂಲಕ ಮೈಸೂರು ನಗರಕ್ಕೆ ಆಗಮಿಸುವ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ನಗರಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *