ಮೈಸೂರು: ಕರ್ನಾಟಕದ ಖ್ಯಾತ ಸಾಹಿತಿ ಹಾಗೂ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರು ಮಾತಾ ಅಮೃತಾನಂದಮಯಿ ದೇವಿಯವರಿಂದ ಅಮೃತಕೀರ್ತಿ ಪುರಸ್ಕಾರವನ್ನು ಕೊಲ್ಲಂನ ಅಮೃತಪುರಿ ಆಶ್ರಮದಲ್ಲಿ ಸ್ವೀಕರಿಸಿದರು.
ಅಕ್ಟೋಬರ್ 3 ರಂದು ಮಾತಾ ಅಮೃತಾನಂದಮಯಿ ದೇವಿಯವರ 70 ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ‘ಅಮೃತವಷರ್ಂ- 70ʼರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಮೃತಕೀರ್ತಿ ಪುರಸ್ಕಾರವು ಮಾತಾ ಅಮೃತಾನಂದಮಯಿ ಮಠದ ಪುರಸ್ಖಾರವಾಗಿದ್ದು ಭಾರತೀಯ ಸಂಸ್ಕøತಿ ಹಾಗೂ ವೇದ ಸಂಪ್ರದಾಯಗಳಿಗೆ ಅಮೋಘ ಕೊಡುಗೆ ನೀಡಿದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮಾನವೀಯ ಮೌಲ್ಯಗಳು, ಪುರಾತನ ಭಾರತೀಯ ಸಂಸ್ಕೃತಿ ಹಾಗೂ ಸನಾತನಧರ್ಮವನ್ನು ಸಂರಕ್ಷಣೆಗೆ ಸಹಕರಿಸುವ ನಿಟ್ಟಿನಲ್ಲಿ ಈ ಸೂಕ್ತ ವ್ಯಕ್ತಿಗಳನ್ನು ಈ ಪ್ರಶಸ್ತಿಯೊಂದಿಗೆ ಪುರಸ್ಕರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಖ್ಯಾತ ವೇದ ಪಂಡಿತ ಪೆÇ್ರ. ಶ್ರೀವರಾಹಂ ಚಂದ್ರಶೇಖರನ್ ನಾಯರ್, ವೇದ ಸಾಹಿತ್ಯ ಪಾರಂಗತರಾದ ಆಚಾರ್ಯ ರಾಜೇಶ್, ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವದ್ಯಾನಿಲಯದ ವಿಶ್ರಾಂತ ಕುಲಪತಿಗಳಾಗಿರುವ ಡಾ.ಕೆ.ಎಸ್.ರಾಧಾಕೃಷ್ಣನ್ ಅವರಿಗೂ ಸಹ 2020, 2021, 2022 ಹಾಗೂ 2023ರ ಸಾಲಿನ ಅಮೃತಕೀರ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕೇರಳ ರಾಜ್ಯದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ವಿಶ್ವಸಂಸ್ಥೆಯ 193 ದೇಶಗಳ ಪ್ರತಿನಿಧಿಗಳು, ಮಾತಾ ಅಮೃತಾನಂದಮಯಿಯವರ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.