ಅರಕಲವಾಡಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಎಸ್. ಬಸವಣ್ಣ, ಉಪಾಧ್ಯಕ್ಷರಾಗಿ ಲಿಂಗನಾಯಕ ಅವಿರೋಧ ಆಯ್ಕೆ

ಚಾಮರಾಜನಗರ: ತಾಲೂಕಿನ ಅರಕಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ. ಬಸವಣ್ಣ ಉಪಾಧ್ಯಕ್ಷರಾಗಿ ಲಿಂಗನಾಯಕ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎಂ. ಬಸವಣ್ಣ, ಲಿಂಗನಾಯಕ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ವಿ. ಹೇಮಂತಕುಮಾರ್ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಎಂ. ಬಸವಣ್ಣ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ರೈತರಿಗೆ ಸರ್ಕಾರದಿಂದ ದೊರೆಯುವ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಸಂಘವನ್ನು ಅರ್ಥಿಕ ಅಭಿವೃದ್ದಿಪಡಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರು ಸಹ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸೋಣ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಲಿಂಗನಾಯಕ, ನಿರ್ದೇಶಕರಾದ ಮಹದೇವಸ್ವಾಮಿ, ಬಿ. ಗುರುಮಲ್ಲಪ್ಪ, ಎಚ್.ಎಲ್. ರಾಜೇಶ್, ಕುಮಾರ್, ಸರ್ವಮಂಗಳಮ್ಮ, ಪುಟ್ಟದೇವಮ್ಮ, ಚನ್ನೇಗೌಡ, ರೂಪ, ರಾಮಯ್ಯ, ಮೂರ್ತಿ, ಸಂಘದ ಸಿಇಓ ವಿ.ಎಂ. ಸೋಮಶೇಖರ್, ಕಾರ್ಯದರ್ಶಿ ಎನ್. ಅದರ್ಶಸ್ವಾಮಿ ಇತರರು ಇದ್ದರು.

Leave a Reply

Your email address will not be published. Required fields are marked *