ಅವಧಿ ಮೀರಿದ 153 ಲೀಟರ್ ಬಿಯರ್ ನಾಶ

ಚಾಮರಾಜನಗರ: ಅವಧಿ ಮೀರಿದ ಹಾಗೂ ಮಾನವ ಸೇವೆಗೆ ಯೋಗ್ಯವಲ್ಲದ ವಿವಿಧ ಮಾದರಿ 153 ಲೀಟರ್ ಬಿಯರ್ ಅನ್ನು ಅಬಕಾರಿ ಅಧಿಕಾರಿಗಳು ನಾಶ ಪಡಿಸಿದರು.

ತಾಲೂಕಿನ ಹೊರವಲಯದ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಪಾನೀಯ ನಿಗಮದ ಗೋದಾಮಿನಲ್ಲಿ ಚಾ.ನಗರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಡಿ. ಮೋಹನ್‍ಕುಮಾರ್, ಕಸಬಾ ರಾಜಸ್ವ ನಿರೀಕ್ಷಕ ರಾಜಶೇಖರಮೂರ್ತಿ, ಬದನಗುಪ್ಪೆ ಗ್ರಾಮ ಅಡಳಿತಾಧಿಕಾರಿ ಎಸ್. ರಾಜೇಂದ್ರಪ್ರಸಾದ್ , ಅಬಕಾರಿ ನಿರೀಕ್ಷಕರಾದ ಎಂ.ಬಿ. ಉಮಾಶಂಕರ್, ಬಿ.ಪಿ. ನಂದಿನಿ, ಟಿ.ಪಿ. ಗುರುನಾಥಶೆಟ್ಟಿ ಡಿಪೋ ಮ್ಯಾನೇಜರ್ ಆರ್.ಬಿ. ಬಸವರಾಜು ನೇತೃತ್ವದಲ್ಲಿ 32,832 ರೂ. ಮೌಲ್ಯದ 148 ಲೀಟರ್ ಬಿಯರ್, 2386 ರೂ. ಮೌಲ್ಯದ 5.775 ಲೀಟರ್ ಬಿಯರ್‍ನ್ನು ನೆಲಕ್ಕೆ ಸುರಿಯುವ ಮೂಲಕ ನಾಶಪಡಿಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಕೆ.ಎಂ. ಸಿದ್ದರಾಜು, ಎಂ.ಪಿ. ಕುಮಾರ್ ಇದ್ದರು.

Leave a Reply

Your email address will not be published. Required fields are marked *