ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷರಾಗಿ ಮಹದೇವಸ್ವಾಮಿ ಉಪಾಧ್ಯಕ್ಷರಾಗಿ ರಂಜಿನಿ ಆಯ್ಕೆ

ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಮಲ್ಲಯ್ಯನಪುರ ಸರ್ಕಾರಿ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷರಾಗಿ ಮಹದೇವಸ್ವಾಮಿ ಪಿ.ಜಿ ಹಾಗೂ ಉಪಾಧ್ಯಕ್ಷರಾಗಿ ರಂಜಿನಿ ಎಂ.ಡಿ ಆಯ್ಕೆಯಾದರು.

ಶಾಲೆಯಲ್ಲಿ ಇಂದು ನಡೆದ ಶಾಲೆಯ ಪೋಷಕರ ಸಭೆಯಲ್ಲಿ ೧೮ ಮಂದಿಯನ್ನು ವಿವಿಧ ವಿಭಾಗಗಳಿಂದ ಆಯ್ಕೆ ಮಾಡಿಕೊಳ್ಳಲಾಯಿತು. ಇವರಲ್ಲಿ ಅಧ್ಯಕ್ಷ- ಉಪಾದ್ಯಕ್ಷರ ಆಯ್ಕೆ ಚುನಾವಣೆ ನಡೆದು ಅಂತಿಮವಾಗಿ ೧೮ ಮಂದಿ ಸದಸ್ಯರು ಮತದಾನದ ಮೂಲಕ ಅಧ್ಯಕ್ಷರನ್ನಾಗಿ ಪಿ.ಜಿ. ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ಎಂ.ಡಿ. ರಂಜಿನಿ ಅವರನ್ನು ಆಯ್ಕೆ ಮಾಡಿದರು.

ನೂತನ ಅಧ್ಯಕ್ಷ ಪಿ.ಜಿ. ಮಹದೇವಸ್ವಾಮಿ ಮಾತನಾಡಿ, ಸದಸ್ಯರು ಹೆಚ್ಚಿನ ಮತವನ್ನು ನೀಡಿ ನನ್ನನ್ನು ಅಧ್ಯಕ್ಷನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ. ಆದರ್ಶ ವಿದ್ಯಾಲಯವು ಜಿಲ್ಲೆಯಲ್ಲೇ ಮಾದರಿ ಶಾಲೆಯನ್ನಾಗಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಹಾಗೂ ಮುಖ್ಯಶಿಕ್ಷಕರು, ಸಹ ಶಿಕ್ಷಕರ ವೃಂದವರ ಬೆಂಬಲ ಹೆಚ್ಚಿನದ್ದಾಗಿದೆ. ಜಿಲ್ಲಾಕೇಂದ್ರದಿಂದ ೪ ಕಿ.ಮೀ. ದೂರದಲ್ಲಿ ಶಾಲೆ. ತಾಲೂಕು ವ್ಯಾಪ್ತಿಯ ವಿವಿಧ ಹಳ್ಳಿಗಳಿಂದ ಮಕ್ಕಳು ಇಲ್ಲಿಗೆ ವ್ಯಾಸಂಗ ಮಾಡಲು ಬರುತ್ತಿದ್ದಾರೆ. ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ನಮ್ಮ ಮೊದಲ ಅಧ್ಯತೆಯಾಗಬೇಕು. ಮುಖ್ಯ ರಸ್ತೆಯಿಂದ ಶಾಲೆಗೆ ರಸ್ತೆಯಾಗಬೇಕಾಗಿದೆ. ಅಲ್ಲದೇ ಬಸ್ ಸೌಕರ್ಯ ಮತ್ತು ಇತರೇ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ಅಭಿವೃದ್ದಿಪಡಿಸಲು ಎಲ್ಲರು ಶ್ರಮಿಸೋಣ ಎಂದರು.
ಇದಕ್ಕು ಮುನ್ನಾ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ಸದಸ್ಯರ ಆಯ್ಕೆ ಸಭೆ ನಡೆಯಿತು. ೪೩೧ ಮಕ್ಕಳು ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ೨೫೦ಕ್ಕೂ ಹೆಚ್ಚು ಮಕ್ಕಳ ಪೋ?ಕರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಎಸ್‌ಡಿಎಂಸಿ ನಿಯಾವಳಿಗಳನ್ನು ಕೂಲಂಕ?ವಾಗಿ ತಿಳಿಸಲಾಯಿತು. ಎಸ್.ಸಿ ವರ್ಗದಿಂದ ೫ ಮಂದಿ, ಎಸ್.ಟಿ ವರ್ಗದಿಂದ ೧, ಒಬಿಸಿ ವರ್ಗದಿಂದ ೧೧, ಅಲ್ಪಸಂಖ್ಯಾತ ವರ್ಗದಿಂದ ಒಬ್ಬರು ಸೇರಿ ಒಟ್ಟು ೧೮ ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆಗೊಳ್ಳಲಾಯಿತು.

ಸಭೆಯಲ್ಲಿ ಎಸ್‌ಡಿಎಂಸಿ ನೂತನ ಎಸ್‌ಡಿಎಂಸಿ ಸದಸ್ಯರಾದ ದಿವ್ಯಾ ಎಂ, ಶಿಲ್ಪಾ, ಮಂಗಳ ಎಂ, ಸೌಮ್ಯ ಎಸ್, ಜ್ಯೋತಿ ಪಿ, ಚಂದ್ರಕಲಾ, ಎಚ್.ಎಸ್ ರವಿ, ಸತ್ಯಸನತ್‌ಕುಮಾರ್, ಮಹೇಶ್ ಬಿ, ಮಲ್ಲೇಶ್ ಗೌಡ ಎಂ, ನಾಗೇಂದ್ರಸ್ವಾಮಿ, ಮಹೇಂದ್ರ ಬಿ, ರಾಜೇಂದ್ರ, ಕಾವ್ಯ ಸಿ ಎನ್, ಶೀಲಾ ಎ ಪಿ, ಕಲೀಲ್ ಉಲ್ಲಾ ಎನ್. ಸಂಸ್ಥೆಯ ಮುಖ್ಯ ಶಿಕ್ಷಕರಾದ ಆರ್ ಲಿಂಗರಾಜು, ಇಸಿಒ ನಿರಂಜನ್ ಕುಮಾರ್, ಮಾಜಿ ಅಧ್ಯಕ್ಷರಾದ ಶಿವರುದ್ರಪ್ಪ, ಸಹ ಶಿಕ್ಷಕರು ಹಾಗೂ ಪೋ?ಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *