ಮೈಸೂರು: ದೇಶದ ಭೂ ಸುಧಾರಣಾ ಚಳುವಳಿಯ ನಿರ್ಮಾತೃ ಶ್ರೀ “ಡಿ.ದೇವರಾಜ ಅರಸು” ಹಾಗೂ ಭಾರತದ ಸಂಪರ್ಕ ಕ್ರಾಂತಿಯ ನಿರ್ಮಾತೃ “ಶ್ರೀ ರಾಜೀವ್ಗಾಂಧಿ” ಅವರ ಜನ್ಮ ದಿನವನ್ನು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಶಾಲಾ ಮಕ್ಕಳಿಗೆ ಪಠ್ಯ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.

ಮೈಸೂರಿನ ಸ್ಯೂಯಜ್ ಪಾರಂ ಕನಕಗಿರಿ ಸರ್ಕಾರಿ ಶಾರದಾ ವಿಲಾಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಡಿ.ದೇವರಾಜು ಅರಸು ಅವರ ಮರಿ ಮೊಮ್ಮಗ “ಸಮೃದ್ಧ ಹೆಗಡೆಯವರು”ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಿಸಿದರು.
ಶಾಲೆಗೆ ನೆನಪಿನ ಅಂಗವಾಗಿ ಹೂವಿನ ಗಿಡಗಳನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಮೈಸೂರು ನಗರದ NS.U.I ಘಟಕ ಅಧ್ಯಕ್ಷರಾದ ಮನೋಜ್, ಎನ್ ರಜತ್, ರಪೀಕ್, ಉiನಾಶ್ರೀ, ಅಭಯ್, ಯೋಗಿಶ್, ಸಮೀರ್, ರವಿ, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.