ಶ್ರೀ ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ನಿಂದ ಮೈಸೂರಿನ Infosys ಹತ್ತೀರವಿರುವ BEML- KRS ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಶ್ರೀ ಸಿದ್ಧಿ ವಿನಾಯಕ ದೇವಾಲಯದ ಉದ್ಘಾಟನೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ಎಲ್.ರವಿ ರವರು ಇಂದು ಉದ್ಘಾಟಿಸಿದರು..
ಈ ಸಂದರ್ಭದಲ್ಲಿ ಮಾತನಾಡಿದ ಎಲ್. ರವಿ ರವರು, ಈಗಾಗಲೇ ಟ್ರಸ್ಟ್ ನಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕರವರನ್ನೂ ಕರೆಸಿ 4 ಎಕರೆ ಜಾಗದಲ್ಲಿ ಪರಿಸರಕ್ಕೆ ಪೂರಕವಾಗಿರುವ ಗಿಡಗಳನ್ನೂ ನೆಡಸಿ, ಉದ್ಯಾನವನ್ನೂ ಸುಸಜ್ಜಿತವಾಗಿ ನಿರ್ವಹಿಸಲಾಗುತ್ತದೆ .. ಇದರಿಂದಾಗಿ ಮನಷ್ಯರ ಜೊತೆ ಪಕ್ಷಿಗಳಿಗೂ ಹಣ್ಣುಗಳೂ ಸಿಗುವುದರಿಂದ ಒಳ್ಳೇಯ ಆಹಾರ ಸಿಗುತ್ತೀದೆ ಎಂದರು.

ವಿಶೇಷಚೇತನರಿಗೆ ಅಗತ್ಯವಿರುವ ಕೃತಕಕಾಲು, ಅಗತ್ಯ ಮೂಲಭೂತ ಸೌಕರ್ಯಗಳನ್ನೂ ನೀಡಲಾಗುತ್ತೀದೆ. ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನೂ ಉಚಿತವಾಗಿ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅರ್ಥಿಕವಾಗಿ ವಿದ್ಯಾಭ್ಯಾಸಕ್ಕೆ ನೆರವೂ ನೀಡಲಾಗುತ್ತೀದೆ.. ಕ್ರೀಡಾ ಚಟುವಟಿಕೆ ಉತ್ತೇಜಿಸುವ ಸಲುವಾಗಿ ಹಲವಾರು ಕ್ರೀಡಾ ಸ್ಪರ್ಧೆಗಳನ್ನೂ ಏರ್ಫಡಿಸಿ ಬಹುಮಾನ ವಿತರಿಸಲಾಗುತ್ತೀದೆ.. ಹೀಗೆ ಕ್ರೀಡೆ, ಸಾಮಾಜಿಕ ಸೇವೆ, ಸಾಂಸ್ಕೃತಿಕ ಟಚವಟಿಕೆಗಳನ್ನೂ ನಡೆಸಿಕೊಂಡು ಬರುತ್ತೀದ್ದ ಕೆ.ಬಿ.ಎಲ್ ಸಿದ್ದಿ ವಿನಾಯಕ ಟ್ರಸ್ಟ್ ಈಗ ಧಾರ್ಮೀಕ ಕ್ಷೇತ್ರಕ್ಕೂ ಕಾಲಿಟ್ಟೀದ್ದು, ಈಗ ಹೊಸದಾಗಿ ಸಿದ್ದಿ ವಿನಾಯಕ ದೇವಸ್ಥಾನವನ್ನೂ ನಿರ್ಮಿಸಿದೆ..
ಇದರ ಸದುಪಯೋಗವನ್ನೂ ಬಸ್ತೀಪುರ, ಕೂರ್ಗಳ್ಳಿ, ಹುಲಿಕೆರೆ, ಬೆಳಗೋಳ ಮತ್ತು ಸುತ್ತಮುತ್ತಲಿರುವ ಎಲ್ಲಾ ಗ್ರಾಮಸ್ಥರು, ಬಡಾವಣೆಗಳ ನಿವಾಸಿಗಳು ಪಡೆದು ಕೊಳ್ಳಬೇಕೆಂದರು.
ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಮತ್ತು ಸಿದ್ದಿ ವಿನಾಯಕ ಟ್ರಸ್ಟ್ ನ ಕಾರ್ಯದರ್ಶಿಯವರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಮಾತನಾಡಿ, ಈ ಟ್ರಸ್ಟ್ ನ ವತಿಯಿಂದ ವಿನಾಯಕ ದೇವಸ್ಥಾನವನ್ನೂ ವರ್ಷಪೂರ್ತಿ ನಿರ್ವಹಣೆ ಮಾಡುವುದರ ಜೊತೆಗೆ, ಉಚಿತ ಯೋಗ ತರಬೇತಿ, ಉಚಿತ ಗಂಥಾಲಯ ಸೌಲಭ್ಯವನ್ನೂ ಪ್ರಾರಂಭಿಸಲಾಗುವುದು.. ಹಲವಾರು ಸೇವಾ ಚಟುವಟಿಕೆಗಳನ್ನೂ ಮಾಡಲೂ ಯೋಜಿಸಲಾಗಿದೆ ಎಂದು ತಿಳಿಸಿದರು..
ಟ್ರಸ್ಟ್ ನ ನಿರ್ದೇಶಕರಾದ ಬಿ.ಎನ್. ಸರೇಶ್ ರವರು ಮಾತನಾಡಿ, ಶ್ರೀ ಕೆ.ಬಿ.ಎಲ್ ಸಿದ್ದಿ ವಿನಾಯಕ ಟ್ರಸ್ಟ್ ಗೆ ಕೆ.ಬಿ.ಎಲ್ ಅಂಡ್ ಸನ್ಸ್ ನ ಎಲ್. ರವಿ ರವರು ಮತ್ತು ಡಾ. ಈ.ಸಿ.ನಿಂಗರಾಜ್ ಗೌಡ ರವರು ಎರಡೂ ಕೋಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯದ ಎರಡೂ ನಿವೇಶನಗಳನ್ನೂ ಟ್ರಸ್ಟ್ ಗೆ ಉಚಿತವಾಗಿ ನೀಡಿರುವುದಕ್ಕೆ ಇಬ್ಬರನ್ನೂ ಶ್ಲಾಘಿಸಿ, ಅವರಿಗೆ ಇನ್ನಷ್ಟೂ ಸಾಮಾಜಿಕ ಸೇವಾ ಕಾರ್ಯಗಳನ್ನೂ ಮಾಡಲೂ ದೇವರು ಶಕ್ತಿ ನೀಡಲೇಂದು ಪ್ರಾರ್ಥಿಸಿದರು..
ಇದೇ ಸಂದರ್ಭದಲ್ಲಿ ದೇವಾಸ್ಥಾನದ ನಿರ್ಮಾಣಕ್ಕೆ ಧನಸಹಾಯ ಮಾಡಿ ಸಹಕರಿಸಿದ ಕೆ.ಬಿ.ಎಲ್ ಸಿಲಿಕಾನ್ ಸಿಟಿ ಓನರ್ಸ್ ವೆಲಫೇರ್ ಅಸೋಸಿಯನ್ ಅಧ್ಯಕ್ಷರಾದ ಕೆ.ಎನ್.ಸಂತೋಷ್, ಎಲ್.ಶ್ರೀಧರ್, ಎನ್.ಕಿರಣ್, ರೋಟರಿಯನ್ ಎಂ.ಮೋಹನ್, ಬಿ.ಬಿ.ಮಧುಕರ್, ಎಂ.ಎಸ್.ಉಮಶಂಕರ್ ಆರಾಧ್ಯ, ದೇವಸ್ಥಾನದ ಉಸ್ತುವಾರಿ ವಹಿಸಿದ್ದ ಶಿವಣ್ಣರವರನ್ನೂ ಗೌರವನೀಡಿ ಸನ್ಮಾನಿಸಲಾಯಿತು..
ಈ ಸಂದರ್ಭದಲ್ಲಿ ದಿಲೀಪ್ ಆರಾಧ್ಯ, ನಿತೀನ್, ಗೋಪಾಲ್, ಸುದೀರ್ ದೇವರಾಜು, ಸಂತೋಷ್, ಕಾರ್ತೀಕ್ ಅಕ್ಕಪಕ್ಕದ ಗ್ರಾಮಸ್ಥರು, ಸಿಲಿಕಾನ್ ಸಿಟಿ ಬಡಾವಣೆಯ ನಿವಾಸಿಗಳು ಉಪಸ್ಥೀತರಿದ್ದರು.