ಸುವರ್ಣಬೆಳಕು ಫೌಂಡೇಷನ್ ವತಿಯಿಂದ ಸಾಹಿತ್ಯ ಹಾಗೂ ಪರಿಸರ ಪೇಮಿ ಅಕ್ಬರ್ ಗೆ ಸುವರ್ಣ ಬೆಳಕು ಪ್ರಶಸ್ತಿ

ಮೈಸೂರು: ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಇಂದು ಕನ್ನಡ ರಾಜ್ಯೋತ್ಸವ ಅಚರಿಸಲಾಯಿತು.

ಮೈಸೂರಿನ ಕಲ್ಯಾಣಗಿರಿ ನಗರದ ನಿವಾಸಿ ಅಕ್ಬರ್ ಸಾಧನೆ ಗುರುತಿಸಿ ಇವರಿಗೆ ಸುವರ್ಣ ಬೆಳುಕು ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್ ಅವರು ಸುಣ್ಣದಕೇರಿಯ ತಮ್ಮ ಕಚೇರಿ ಬಳಿ ಗೌರವಿಸಿದರು.

ಇವರು ಹಲವಾರು ವರ್ಷಗಳಿಂದ ಕಲ್ಯಾಣಗಿರಿ ನಗರದಲ್ಲಿ ಸ್ವಚ್ಚತೆಗೆ ದಿನ ನಿತ್ಯ ಒಂದು ತಾಸು ಮೀಸಲಿಟ್ಟಿದ್ದು ಇವರ ಸಾಧನೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವದಂದು ಸುವರ್ಣಬೆಳಕು ಪ್ರಶಸ್ತಿಯನ್ನು ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಕ್ಬರ್ ಅವರು, ಕಸ ಮುಕ್ತ ಕಲ್ಯಾಣಗಿರಿ ನಗರ ಮಾಡಬೇಕು ಎಂಬ ಛಲಹೊಂದಿದ್ದು, ಇದಕ್ಕಾಗಿಯೇ ನಾನು ದಿನ ನಿತ್ಯ ಒಂದು ತಾಸು ಚಳಿ, ಮಳೆ ಎನ್ನದೆ ತಾನು ವಾಸ ಮಾಡುತ್ತಿರುವ ನಗರದ ರಸ್ತೆ ಬದಿಗಳಲ್ಲಿ ಸ್ವಚ್ಛತೆಗೆ ಮೀಸಲಿಡುತ್ತಿದ್ದೇನೆ ಎಂದರು.
ಯಾರು ಏನೇ ಹೇಳಿದರೂ ಇವರು ಮುಜುಗರವಿಲ್ಲದೆ ಮೋರಿಯ ಸ್ವಚ್ಚತೆಯಾಗಿರಬಹುದು, ಕಸದ ಸಮಸ್ಯೆಯಾಗಿರಲಿ ನಾನು ಕೆಲಸ ಮುಗಿಸಿ ಹೊರಟು ಹೋಗುತ್ತೇನೆ. ಸಾರ್ವಜನಿಕರಿಗೆ ಸ್ವಚ್ಛತೆ ಪಾಠ ಹಾಗೂ ಪರಿಸರದ ಜಾಗೃತಿ ಬಗ್ಗೆ ಮಕ್ಕಳಿಗೆ ಅಲ್ಲಿನ ನಿವಾಸಿಗಳಿಗೆ ಜಾಗೃತಿ ಮೂಡಿಸವ ಕೆಲಸ ಮಾಡುತ್ತಿದ್ದೇನೆ. ಆದರಿಂದ್ದ ನನ್ನನ್ನು ಗುರುತಿಸಿ ಸನ್ಮಾನ ಮಾಡಿದ ಸುವರ್ಣ ಬೆಳಕು ಫೌಂಡೇಷನ್‍ರವರಿಗೆ ಅಬಾರಿಯಾಗಿರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಹೇಶ್‍ನಾಯಕ್, ಬಾಲು, ಬಸವರಾಜು, ಶಫೀ, ಆದಿಲ್, ಮುಂತಾದವರು ಉಪಸ್ಥಿತÀರಿದ್ದರು.

Leave a Reply

Your email address will not be published. Required fields are marked *