ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ೨೦೨೪ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ
ಚಾಮರಾಜನಗರ: ಕಾಂಗ್ರೆಸ್ನಲ್ಲಿ ಸೇವೆ ಮಾಡಿದರೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ೨೦೨೪ನೇ ಸಾಲಿನ ವಾರ್ಷಿಕ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಭಾರತ ರಾಷ್ಟಿçÃಯ ವಿದ್ಯಾರ್ಥಿ ಒಕ್ಕೂಟವು ಉತ್ತಮ ಕೆಲಸ ಮಾಡುತ್ತಿದ್ದು, ಪಕ್ಷ ನೀಡುವ ಕೆಲಸ, ಕಾರ್ಯಕ್ರಮಗಳನ್ನು ತುಂಬ ಅಚ್ಚುಗಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಪಕ್ಷ ಕೊಟ್ಟ ಎಲ್ಲವನ್ನು ಮಾಡಬೇಕು ಎಂಬ ಭಾವನೆ ಬಂದಾಗ ಮಾತ್ರ ಇವೆಲ್ಲ ಸಾಧ್ಯ ಎಂದರು.
ಕಾಂಗ್ರೆಸ್ ನಲ್ಲಿ ಸೇವೆಯನ್ನು ಮಾಡಿದರೆ ಪಕ್ಷ ಗುರುತಿಸಿ ಜವಾಬ್ದಾರಿಗಳನ್ನು ನೀಡುತ್ತದೆ. ಜಿಲ್ಲೆಯಲ್ಲಿ ಮತ್ತಷ್ಠು ಪಕ್ಷವನ್ನು ಸಂಘಟನೆ ಮಾಡುವ ರಾಜ್ಯದಲ್ಲಿ ಜಿಲ್ಲೆ ಸಂಘಟನೆಯಲ್ಲಿ ಮುಂಚೂಣಿಯಲ್ಲಿರಬೇಕು ಅ ನಿಟ್ಟಿನಲ್ಲಿ ಪಕ್ಷ ಸಂಘಟಿಸಬೇಕು. ನನ್ನ ಗೆಲುವಿಗೆ ನಿವೆಲ್ಲರೂ ಸಹಾಯ ಮಾಡಿದ್ದೀರಿ. ಅದನ್ನು ಎಂದಿಗೂ ಮರೆಯಲ್ಲ ನಿಮಗೆಲ್ಲ ಋಣಿಯಾಗಿರುವೆ. ಎಲ್ಲರಿಗೂ ಹೊಸವರ್ಷ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಮಹಮದ್ ಅಸ್ಗರ್, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಮೋಹನ್ ನಗು, ರಾಜ್ಯ ಕಾರ್ಯದರ್ಶಿ ಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಅಕ್ಷಯ್ಕುಮಾರ್, ತಾಲೂಕು ಅಧ್ಯಕ್ಷ ಮುತ್ತುರಾಜ್, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೈಯದ್ ಮುಸಾಯಿಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್, ಶಶಾಂಕ್, ಉಪಾಧ್ಯಕ್ಷ ಸ್ಟ್ಯಾನಿ ಬಾಲರಾಜ್, ಮುಖಂಡರಾದ ನಾಗಯ್ಯ, ಕೆ.ನಾಗರಾಜು, ದೊರೆ ಮುತ್ತಿಗೆ ಇತರರು ಹಾಜರಿದ್ದರು.