ಕಾಗಿನೆಲೆ ಮಹಾ ಸಂಸ್ಥಾನದಿಂದ ಸೈಕಲ್ ಜಾಥಾ ಮೂಲಕ ಆರೋಗ್ಯದ ಬಗ್ಗೆ ಜಾಗೃತಿ

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಕಾಗಿನೆಲೆ ಮಹಾ ಸಂಸ್ಥಾನದ ಗುರುಪೀಠದ ವತಿಯಿಂದ ವಿದ್ಯಾರ್ಥಿಗಳು ಶನಿವಾರ ಸೈಕಲ್ ಜಾಥಾ ನಡೆಸಿದರು.
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಸೈಕಲ್ ಬಳಸುವುದು, ವಾಯುಮಾಲಿನ್ಯ ತಡೆಗಟ್ಟುವುವುದರ ಕುರಿತು ಜನಸಾಮಾನ್ಯರಿಗೆ ಸೈಕಲ್ ಜಾಥಾದ ಮೂಲಕ ಅರಿವು ಮೂಡಿಸಲಾಯಿತು.


ಆದಿಚುಂಚನಗಿರಿ ರಸ್ತೆ, ಕಾಂತರಾಜ್ ಅರಸ್ ರಸ್ತೆ, ವಿಜಯಬ್ಯಾಂಕ್ ಸರ್ಕಲ್, ರಾಮಕೃಷ್ಣ ನಗರ, ಆಂದೋಲನ ವೃತ್ತ, ಮಾರ್ಗವಾಗಿ ಕುವೆಂಪುನಗರ ಕಾಂಪ್ಲೆಕ್ಸ್, ಎಂ.ಬ್ಲ್ಯಾಕ್, ಕುಂವೆಂಪುನಗರ ಡಿಪೋ ಸರ್ಕಲ್ ನಿಂದ ಬನಶಂಕರಿ ದೇವಸ್ಥಾನ, ಮಾರ್ಗವಾಗಿ ಜಾಥ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಮೇಯರ್ ಸುನಂದಾ ಪಾಲನೇತ್ರ, ಗೌರವ ಕಾರ್ಯದರ್ಶಿ ಪುಟ್ಟ ಬಸವೇಗೌಡ, ಪ್ರಾಂಶುಪಾಲರಾದ ವಿಶಾಲಾಕ್ಷಿ ಕೆ.ಕೆ., ಸಂಚಾಲಕ ಡಾ.ಶರತ್‌ಕುಮಾರ್ ಎಂ.ಎಸ್., ಡಾ. ಸೆಲ್ವಕುಮಾರ್, ಎ.ಎಲ್.ಕೃಷ್ಣಸ್ವಾಮಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *