ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ವಿಭಾಗದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ನಾಗೇಂದ್ರ ಅವರನ್ನು ನಗರದ ರೋಟರಿ ಭವನದಲ್ಲಿ ಇಲಾಖೆಯ ಹಾಗೂ ಅಭಿಮಾನಿ ವೃಂದವರು ಅತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಟ್ಟರು.
ರೋಟರಿ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಬಿ.ಸಿ.ರಾಜೀವ್, ಮೈಸೂರು ವಿಭಾಗದ ನಿರೀಕ್ಷಕ ಮಹಾಂತೇಶ್ ಅವರು ನಿವೃತ್ತ ಹೊಂದಿದ್ದ ನಾಗೇಂದ್ರ ಅವರಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ನೆನಪಿನ ಕಾಣಿಕೆ ಹಾಗೂ ಫಲತಾಂಬುಲ ನೀಡುವ ಮೂಲಕ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಅಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ. ರಾಜೀವ್ ಅವರು, ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಜೆಓಸಿ ರದ್ದದ ಬಳಿಕ ಇಲಾಖೆಯನ್ನು ವಿಲೀನ ಗೊಳಿಸಿದಾದ ನಾಗೇಂದ್ರ ಅವರು ಶಿಕ್ಷಣ ಇಲಾಖೆಯಿಂದ ನಮ್ಮ ಇಲಾಖೆಗೆ ಸೇವೆ ಸೇರ್ಪಡಯಾದರು. ಉಪನ್ಯಸಕರಾಗಿದ್ದ ಅವರು ಇಲಾಖೆಯ ನಿರೀಕ್ಷಕರಾಗಿ ಕೆಲಸ ಮಾಡಿದರು. ಬಹಳ ಶ್ರದ್ದೆ, ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿಲಿ. ಆರೋಗ್ಯ ಕಡೆ ಹೆಚ್ಚು ಗಮನ ನೀಡಿ ಎಂದು ಕಿವಿಮಾತು ಹೇಳಿದರು.
ನಿವೃತ್ತ ಉಪ ನಿರ್ದೇಶಕ ಡಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ನಾಗೇಂದ್ರ ಮತ್ತು ನಾನು ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಕೆಲಸ ಮಾಡಿದವರು. ಆವರು ಜೆಓಸಿ ವಿಭಾಗದಲ್ಲಿ ನಾವು ಪಿಯು ವಿಭಾಗದಲ್ಲಿದ್ದೇವೆ. ಬಹಳ ಸ್ನೇಹ ಜೀವಿ, ಸದಾ ಉತ್ಸಾಹಿ ಮತ್ತು ಮಕ್ಕಳಿಗೆ ಹೆಚ್ಚು ಕಲಿಯಬೇಕು ಎಂದು ಚಟುವಟಿಕೆಯಿಂದ ಇದ್ದರು. ಅವರ ಕಾನೂನು ಮಾಪನ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವುದು ಸಂತಸ ಎಂದಿದೆ. ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.
ಸನ್ಮಾನ ಸ್ವೀಕರಿಸಿದ ನಿರೀಕ್ಷಕ ನಾಗೇಂದ್ರ ಮಾತನಾಡಿ, ನನ್ನ ಕರ್ತವ್ಯದ ಅವಧಿಯಲ್ಲಿ ಎಲ್ಲರು ಸಹಕಾರ ನೀಡಿ, ಇಲ್ಲಿಯವರೆಗೆ ನಡೆಸಿಕೊಂಡು ನಿವೃತ್ತಿಯ ಅಂಚಿಗೆ ತಂದು ನಿಲ್ಲಿಸಿದ್ದೀರಿ. ನಿಮ್ಮೆಲ್ಲರಿಗೂ ನಾನು ಚಿರಋಣಿ. ಎಲ್ಲಾ ಸ್ನೇಹಿತರು ಹಾಗೂ ಇಲಾಖೆಯ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಕೋರಿರುವುದು ಸಂತಸ ತಂದಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಮುಂದುವರಿಯಲಿ. ನನ್ನ ವೃತ್ತಿ ಜೀವನದಲ್ಲಿ ಯಾರಿಗಾದರು ನೋವು ಉಂಟು ಮಾಡಿದ್ದರೆ, ಹಾಗೂ ಬೇಸರವಾಗುವಂತೆ ನಡೆದುಕೊಂಡಿದ್ದರೆ ಕ್ಷಮಿಸಿ ಎಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಮಾಪನ ಇಲಾಖೆಯ ತನಿಖಾ ದಳದ ಎನ್. ಮಂಜುನಾಥ್, ಚಾ.ನಗರ ಸೌರಭ ಸ್ಕೇಲ್ನ ಮುರುಘೇಂದ್ರಸ್ವಾಮಿ, ಗುರುಲಿಂಗಮ್ಮ ನಾಗೇಂದ್ರ, ಮಹದೇವಯ್ಯ, ಸಿದ್ದಪ್ಪ, ಕೆಎಸ್ಎಸ್ಎಫ್ಸಿ ನಿವೃತ್ತ ಅಧಿಕಾರಿ ರಾಜು, ಅಂಗನವಾಡಿ ನೌಕರರ ಸಂಘದ ಸಂಘದ ಅಧ್ಯಕ್ಷೆ ನಾಗಮಣಿ, ಸಿ.ವಿ. ನಾಗರಾಜು, ನಿತ್ಯಾನಂದ, ಮೈಸೂರು ಬಾಬು, ಅನಿಲ್ಕುಮಾರ್ ದುರಸ್ತಿದಾರರು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಿಬ್ಬಂದಿಗಳು, ಸ್ನೇಹಿತರು ಉಪಸ್ಥಿತರಿದ್ದರು.