ಕೃಷಿ ನೀರಾವರಿ ಪಂಪ್‍ಸೆಟ್‍ಗಳಿಗೆ 3 ಪಾಳಿಗಳಲ್ಲಿ ವಿದ್ಯುತ್ ಸರಬರಾಜು

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಬಸ್ತೀಪುರ
400 ಕೆವಿ ಸ್ವೀಕರಣಾ ಕೇಂದ್ರದ ತಾಂತ್ರಿಕ ಸಮಸ್ಯೆಯಿಂದಾಗಿ ಚಾಮರಾಜನಗರ
ಮತ್ತು ಗುಂಡ್ಲುಪೇಟೆ ತಾಲೂಕಿನಾದ್ಯಂತ ಏಪ್ರಿಲ್ 17 ರಿಂದ ಕೃಷಿ ನೀರಾವರಿ ಪಂಪ್
ಸೆಟ್ ಗಳಿಗೆ ಹಗಲು ವೇಳೆಯಲ್ಲಿಯೇ 7 ಗಂಟೆಗಳ ಕಾಲ 3ಫೇಸ್
ವಿದ್ಯುತ್ತನ್ನು ನೀಡಲು ಕಷ್ಟಸಾಧ್ಯವಾಗಿದ್ದು, ಏಪ್ರಿಲ್ 18 ರಿಂದ ಸಮಸ್ಯೆ
ಸುಧಾರಣೆಯಾಗುವವರೆಗೆ 3 ಪಾಳಿಗಳಲ್ಲಿ ವಿದ್ಯುತ್ ಸರಬರಾಜು ಮಾಡುವ
ವ್ಯವಸ್ಥೆ ಕಲ್ಪಿಸಲಾಗಿದೆ.
ಬ್ಯಾಚ್-1 : ಪಾಳಿ-1 ರಲ್ಲಿ ಬೆಳಿಗ್ಗೆ 6 ರಿಂದ 10ರವರೆಗೆ, ಪಾಳಿ 2ರಲ್ಲಿ ರಾತ್ರಿ 9 ರಿಂದ
12ರವರೆಗೆ ವಿದ್ಯುತ್ ಸರಬರಾಜು ಮಾಡಲಾಗುವುದು. ಬ್ಯಾಚ್-2 : ಪಾಳಿ-1 ರಲ್ಲಿ
ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ, ಪಾಳಿ-2ರಲ್ಲಿ ರಾತ್ರಿ 12ರಿಂದ ಮುಂಜಾನೆ
3ರವರೆಗೆ ಹಾಗೂ ಬ್ಯಾಚ್-3 ಪಾಳಿ-1ರಲ್ಲಿ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ,
ಪಾಳಿ-2ರಲ್ಲಿ ಮುಂಜಾನೆ 3ರಿಂದ ಮುಂಜಾನೆ 6ರವರೆಗೆ (ಪ್ರತೀ
ಸೋಮವಾರದಂದು ಬ್ಯಾಚ್ ಬದಲಾವಣೆ ಮಾಡಲಾಗುತ್ತದೆ) ವಿದ್ಯುತ್ ಸರಬರಾಜು
ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇತರೆ ಯಾವುದೇ ತಾಂತ್ರಿಕ ದೋಷಗಳಿಂದ ವಿದ್ಯುತ್ ಅಡಚಣೆಯಾದಲ್ಲಿ ಅತೀ
ಕಡಿಮೆ ಸಮಯದಲ್ಲಿ ಅಂತಹ ದೋಷಗಳನ್ನು ಸರಿಪಡಿಸುವ ಕಾರ್ಯವನ್ನು
ನಿರ್ವಹಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಅಗತ್ಯ ಸಿಬ್ಬಂದಿ
ಹಾಗೂ ಸಾಮಾಗ್ರಿಗಳೊಂದಿಗೆ ಸದಾ ಸನ್ನದ್ದವಾಗಿರುತ್ತದೆಯೆಂದು
ತಿಳಿಸಲಾಗಿದೆ.
ಅಂತಹ ಸಂದರ್ಭಗಳಲ್ಲಿ ವಿದ್ಯುತ್ ಸಂಪರ್ಕವನ್ನು ಪುನರ್ ಸ್ಥಾಪಿಸಲು
ತೊಡಗಿಸಿಕೊಳ್ಳುವ ಸೆಸ್ಕ್ ಅಧಿಕಾರಿ, ಸಿಬ್ಬಂದಿಗೆ ಗ್ರಾಹಕರು ಎಂದಿನ
ಸಹಕಾರವನ್ನು ನೀಡಲು ಮತ್ತು ವಿದ್ಯುತ್ ಸಂಬಂಧಿತ ಯಾವುದೇ
ಸಮಸ್ಯೆಗಳಿಗೆ ನಿಗಮದ ಕೇಂದ್ರಿಯ ದೂರು ನಿರ್ವಹಣಾ ಘಟಕದ ಉಚಿತ
ದೂರವಾಣಿ ಸಂಖ್ಯೆ: 1912 ಗೆ ಕರೆ ಮಾಡಿ ಅಥವಾ ವ್ಯಾಟ್ಸಾಪ್ ಸಂಖ್ಯೆ: 9448991912
ದೂರು ನೀಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ನಿಗಮದ
ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *