ಕೃಷಿ ಸಚಿವರಿಂದ ಬರ ಪರಿಶೀಲನೆ

ಕಲಬುರಗಿ,ಅ.3 ಕೃಷಿ‌ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು ಜಿಲ್ಲಾ ಯ ಅಫಜಲಪೂರ ತಾಲೂಕಿನ ಚೌಡಾಪುರ,
ಅನಾವೃಷ್ಠಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತರ ಅಹವಾಲು‌ ಅಲಿಸಿದರು‌.

ಈ ಸಂದರ್ಭದಲ್ಲಿ ಮಾತನಾಡಿದ ಕೃಷಿಕರೊಂದಿಗೆ ಮಾತನಾಡಿದ ಎಲ್ಲರೂ ಬೆಳೆ ವಿಮೆ ಮಾಡಿಸಿಕೊಳ್ಳುವುದು ಸುರಕ್ಷಿತ .ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಟ್ಟು ಶೇ 98% ವಿಮಾಕಂತು ಪಾವತಿಸುತ್ತಿದ್ದು ರೈತರು ಕೇವಲ ಶೇ 2% ಮೊತ್ತ ಪಾವತಿ ಮಾಡಬೇಕಿದೆ ಪರಿಹಾರ ಪೂರ್ತಿ ರೈತರಿಗೆ ತಲುಪಲಿದೆ ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು

ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪರಿಷ್ಕರಣೆಗೆ ಕೇಂದ್ರಕ್ಕೆ ಪತ್ರ: ಬೆಳೆ ಹಾನಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ, ರೈತರಿಗೆ ನ್ಯಾಯಯುತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪರಿಷ್ಕರಣೆ ಮಾಡಬೇಕೆಂದು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಬರಗಾಲ ಘೋಷಣೆ ಮಾಡಿದ್ದರಿಂದ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿದ ನಂತರ ಅದರ ವರದಿಯ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕೇಂದ್ರ ಸರ್ಕಾರದ ಹೊರತಾಗಿ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಿ.ಎಂ., ಕಂದಾಯ ಸಚಿವರೊಂದಿಗೆ ಚರ್ಚಿಸುವೆ ಎಂದು ತಿಳಿಸಿದ ಸಚಿವರು, ಇಲ್ಲಿ ವಾಸ್ತವವಾಗಿ ಬೆಳೆ ಹಾಳಾಗಿದ್ದನ್ನು ಕಣ್ಣಾರೆ ಕಂಡಿರುವೆ. ಹಸಿರು ಕಂಡರು, ಇಳುವರಿ ಕಷ್ಟಸಾಧ್ಯ. ಹಿಂಗಾರು ಬೆಳೆ‌ ಮೇಲೂ ನಂಬಿಕೆ ಇಲ್ಲದಂತಾಗಿದೆ ಎಂದರು.

ನಂತರ ಸಚಿವರು ಕಲಬುರಗಿ ತಾಲೂಕಿನ ಹಡಗಿಲ್ ಹಾರುತಿ ಗ್ರಾಮಕ್ಕೆ ಭೇಟಿ ನೀಡಿ‌ ಹತ್ತಿ, ತೊಗರಿ, ಕಬ್ಬು ಬೆಳೆ ಹಾನಿ‌ ಕ್ಷೇತ್ರ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಕೃಷಿ ಆಯುಕ್ತ ವೈ.ಎಸ್.ಪಾಟೀಲ, ಕೃಷಿ ನಿರ್ದೇಶಕ ಜಿ.ಟಿ.ಪುತ್ರ, ಜಲಾನಯನ ಇಲಾಖೆಯ ನಿರ್ದೇಶಕ ಶ್ರೀನಿವಾಸ, ಅಪರ ಕೃಷಿ ನಿರ್ದೇಶಕ (ಸಾವಯವ ವಿಭಾಗ) ವೆಂಟರಾಮ ರೆಡ್ಡಿ, ಅಪರ ಕೃಷಿ ನಿರ್ದೇಶಕ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು) ಅಂಥೋನಿ ಅಮಿನ್ಯೂಯಲ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಹಾಜರಿದ್ದರು.

Leave a Reply

Your email address will not be published. Required fields are marked *