ಕೆಂಪನಪುರ ಪಿಎಸಿಸಿ ಬ್ಯಾಂಕ್‍ಗೆ 5.37 ಲಕ್ಷ ನಿವ್ವಳ ಲಾಭ : ಕೆ.ಎಂ. ಶಿವಶಂಕರ್

ಚಾಮರಾಜನಗರ: ತಾಲೂಕಿನ ಕೆಂಪನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಉತ್ತಮವಾಗಿ ವಹಿವಾಟು ನಡೆಸಿ, 5.37 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸ0ಘದ ಅಧ್ಯಕ್ಷ ಕೆ.ಎಂ. ಶಿವಶಂಕರ್ ತಿಳಿಸಿದರು.

ಗ್ರಾಮದ ಸಂಘದ ಕಾರ್ಯಾಲಯದಲ್ಲಿ ನಡೆದ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾ ಪ್ರಸಕ್ತ ವರ್ಷದಲ್ಲಿ 398 ಸದಸ್ಯರಿಗೆ 4.60 ಕೋಟಿ ರೂ.ಗಳ ಸಾಲ ನೀಡಲಾಗಿದೆ. ಗೃಹ ಬಳಕೆಯ ಸಾಲಾಗಿ 219 ಮಂದಿ ಸದಸ್ಯರಿಗೆ 57 ಲಕ್ಷ ರೂ. ನೀಡಲಾಗಿದೆ. ಸಂಘದಲ್ಲಿ 1500 ಮಂದಿ ಸದಸ್ಯರನ್ನು ಹೊಂದಿದೆ. ಅಲ್ಲದೇ ಹೆಚ್ಚುವಾಗಿ 500 ಷೇರುಗಳನ್ನು ಪಡೆದು ಸಂಘವು ಇನ್ನು ಹೆಚ್ಚಿನ ಆರ್ಥಿಕ ಲಾಭವನ್ನು ಹೊಂದಿದೆ ಎಂದರು.

ಸಂಘದ ಅಭಿವೃದ್ದಿಗಾಗಿ ಅಪೆಕ್ಸ್ ನಿಂದ 5 ಲಕ್ಷ ರೂ. ಅನುದಾನ ಬಂದಿದೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲ ಸದಸ್ಯರಿಗೆ ಸಾಲ ನೀಡುವ ಉದ್ದೇಶದಿಂದ ಹೆಚ್ಚಿನ ಸಾಲ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. ಸಾಲ ಪಡೆದುಕೊಂಡಿರುವ ಸದಸ್ಯರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ, ಸರ್ಕಾರದ ಶೂನ್ಯ ಬಡ್ಡಿದರ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಇತರೇ ಉದ್ದೇಶಕ್ಕೆ ಸಾಲ ಪಡೆದುಕೊಂಡಿರುವ ಸದಸ್ಯರು ನಿಗಧಿತ ಅವಧಿಯಲ್ಲಿ ಸಾಲವನ್ನು ಮರುಪಾವತಿ ಮಾಡಿ ಹೆಚ್ಚುವರಿ ಬಡ್ಡಿ ಹೊರೆಯಿಂದ ಪಾರಾಗಬೇಕು. ಪಿಗ್ನಿ ಸೌಲಭ್ಯವನ್ನು ನೀಡಿದ್ದು, ನಿಮ್ಮ ಗ್ರಾಮಗಳಿಗೆ ಪಿಗ್ನಿ ಏಜೆಂಟ್ ಬಂದು ಹಣ ಕಟ್ಟಿಸಿಕೊಳ್ಳಲಿದ್ದಾರೆ. ಇದರ ಪ್ರಯೋಜವನ್ನು ಪಡೆದುಕೊಳ್ಳಬೇಕು ಎಂದು ಶಿವಶಂಕರ್ ತಿಳಿಸಿದರು.

ಸಂಘದ ಉಪಾದ್ಯಕ್ಷ ಕೆ.ಎಂ. ನಾಗರಾಜು ಮಾತನಾಡಿ, ಸಂಘವು ಬಹಳ ವ್ಯವಸ್ಥಿತವಾಗಿ ಲಾಭ ದಲ್ಲಿ ನಡೆದುಕೊಂಡುವ ಹೋಗುವ ಜೊತೆಗೆ ರೈತರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ತಾತ್ಕಾಲಿಕ ಪರಿಹಾರವನ್ನು ನೀಡುವ ಬಗ್ಗೆ ಆಡಳಿತ ಮಂಡಲಿ ಸಭೆಯಲ್ಲಿ ತೀರ್ಮಾನಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಮಹದೇವಪ್ಪ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು.

ಸಭೆಯಲ್ಲಿ ಹಿರಿಯ ಸಹಕಾರಿಗಳಾದ ಕಳೆದ 30 ವರ್ಷಗಳ ಕಾಲ ಸಂಘದ ಅಭಿವೃದ್ದಿಗೆ ಸೇವೆ ಸಲ್ಲಿಸಿದ ಕೆ.ಎಂ. ಗುರುಸಿದ್ದಪ್ಪ ಅವರನ್ನು ಆಡಳಿತ ಮಂಡಲಿಯ ಪರವಾಗಿ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಂ. ನಾಗರಾಜು, ನಿರ್ದೇಶಕರಾದ ಕೆ.ಎಂ. ಗುರುಸಿದ್ದ9ಪ, ಕೆ.ಎಂ. ಪ್ರಭುಸ್ವಾಮಿ, ಪಿ. ರಾಮಸ್ವಾಮಿ, ದೊಡ್ಡಮಾರಶೆಟ್ಟಿ, ಪಿ. ಕುಮಾರಸ್ವಾಮಿ, ಕೆ.ಬಿ. ನಾರಾಐನಸ್ವಾಮಿ, ಬಂಗಾರನಾಯಕ, ಚಿನ್ನಸ್ವಾಮಿ, ಪ್ರಭಾಮಣಿ, ಶೋಭಾಮೂರ್ತಿ, ನೌಕರರ ಬಿ. ಮಮತಾ, ಎಚ್.ಎಂ. ಮಹದೇವ್, ಮುಖಂಡರಾದ ಕೆ.ಎಂ. ಮಹದೇವಸ್ವಾಮಿ, ಡೇರಿ ಸಿಇಒ ಮಹದೇವಶೆಟ್ಟಿ, ಹಗು ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *