ಕೆ.ಪಿ.ವೀಣಾ ನಿಧನ

ಮೈಸೂರು: ಕನ್ನಡಿಗರ ಪ್ರಜಾನುಡಿ ದಿನಪತ್ರಿಕೆ ಸಂಪಾದಕರಾದ ವೀರಭದ್ರಪ್ಪ ಬಿಸ್ಲಳ್ಳಿ ಅವರ ಪತ್ನಿ ಕೆ.ಪಿ.ವೀಣಾ(47) ಅವರು ಅನಾರೋಗ್ಯದಿಂದ ಶುಕ್ರವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಕೀಲರಾಗಿದ್ದ ವೀಣಾ ಅವರಿಗೆ ಪತಿ ವೀರಭದ್ರಪ್ಪ ಬಿಸ್ಲಳ್ಳಿ, ಪುತ್ರ ಆಶಿಕ್‌ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 12ಗಂಟೆಗೆ ಬೆಂಗಳೂರಿನ ಬನಶಂಕರಿಯ ಲಿಂಗಾಯತರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ: ಕೆ.ಪಿ.ವೀಣಾ ಅವರ ನಿಧನಕ್ಕೆ ಕನ್ನಡಿಗರ ಪ್ರಜಾನುಡಿ ಪತ್ರಿಕೆಯ ಮಾಲೀಕರಾದ ವಾಸು ಹಾಗೂ ಪತ್ರಿಕೆಯ ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *