ಚಾಮರಾಜನಗರ: ತಾಲೂಕು ಕೈಗಾರಿಕಾ ಸಹಕಾರ ಸಂಘದಿಂದ ಗುಡಿ ಕೈಗಾರಿಕೆ ಹಾಗು ಇನ್ನಿತರ ಸಣ್ಣ ಪುಟ್ಟ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಆರ್ಥಿಕ ಅಭಿವೃದ್ದಿ ಹೊಂದಲು ಸಹಕಾರ ಸಂಘದಿಂದ ಪಡೆದಿರುವ ಸಾಲವನ್ನು ಮರು ಪಾವತಿ ಮಾಡಿ ಸರ್ಕಾರದ ರಿಯಾಯಿತಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಎಂದು ತಾಲೂಕು ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಮಲೆಯೂರು ಎಂ.ಎಂ. ನಾಗರಾಜು ತಿಳಿಸಿದರು.
ನಗರದ ಟಿಎಪಿಎಂಎಸ್ ಅವರಣದಲ್ಲಿ ಭಾನುವಾರ ನಡೆದ ಚಾಮರಾಜನಗರ ತಾಲೂಕು ಕೈಗಾರಿಕಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ತಮ್ಮೆಲ್ಲರ ಸಹಕಾರದಿಂದ ಉತ್ತಮವಾಗಿ ನಿರ್ವಹಣೆ ಯಾಗುತ್ತಿದೆ. ಇನ್ನು ಹೆಚ್ಚಿನ ಸದಸ್ಯರು ?ರು ಪಡೆದು, ಸಂಘದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಯನ್ನು ಜಾರಿ ಮಾಡಿದ್ದು, ಸಹಕಾರ ಸಂಘದ ಮೂಲಕ ನಿರುದ್ಯೋಗಿ ಯುವಕರಿಗೆ ಕೈಗಾರಿಕಾ ಸ್ಥಾಪನೆ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದರು.
ಈಗಾಗಲೇ ಕೈಗಾರಿಕೆ ಸೊಸೈಟಿಯಿಂದ ಆಲೆಮನೆ ಮತ್ತು ಇಟ್ಟಿಗೆ ಫ್ಯಾಕ್ಟರಿ ಘಟಕ ಸ್ಥಾಪನೆಗೆ ಸಾಲ ನೀಡಿದ್ದು, ಪಡೆದುಕೊಂಡಿರುವ ರೈತರು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಬೆಳೆವಣಿಗೆಗೆ ಮುಂದಾಗಬೇಕು. ಸುಸ್ತಿದಾರರಿಂದಲೇ ೩೦ ಲಕ್ಷ ರೂ. ಸಾಲ ಬಾಕಿz ಇದೆ. ಇದು ವಸೂಲಾತಿಯಾದರೆ ನಮ್ಮ ಸಂಘವು ಲಾಭದಲ್ಲಿ ನಡೆಯಲಿದೆ ಎಂದರು.
ಸಂಘದ ಕಾರ್ಯದರ್ಶಿ ಎಸ್. ಚಂದನ್ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು. ಸಂಘದ ಉಪಾಧ್ಯಕ್ಷ ಎಚ್.ಬಿ. ಕೃ?ಸ್ವಾಮಿ ನಾಯಕ, ನಿರ್ದೇಶಕರಾದ ಕೋಟಂಬಳ್ಳಿ ವೀರಭದ್ರಸ್ವಾಮಿ, ಕೇತಹಳ್ಳಿ ಶಿವಪಾದಪ್ಪ, ಗುರುಪಾದಸ್ವಾಮಿ, ಮಹದೇವಸ್ವಾಮಿ, ಎ.ಎಂ.ಪ್ರಭುಸ್ವಾಮಿ, ವೈ.ಪಿ. ರಾಜೇಂದ್ರಪ್ರಸಾದ್, ರಾಜಶೇಖರ್, ನಾಗರತ್ನಮ್ಮ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಕುಮಚಹಳ್ಳಿ ಸ್ವಾಮಿ, ಹೊಮ್ಮ ರವಿಶಂಕರ್, ಕೃಷ್ಣ, ಬಸವಣ್ಣ, ಪ್ರಭುಸ್ವಾಮಿ, ನಾಗೇಶ್, ಮೇಲ್ವಿಚಾರಕ ಎಂ. ಲಿಂಗರಾಜು, ಎಸ್. ನಂದೀಶ್, ಎನ್.ಸತ್ಯಪ್ರೇಮ್ ಕುಮಾರ್ ಹಾಗೂ ಸದಸ್ಯರು ಇದ್ದರು.