ಕೋವಿಡ್ ಹರಡದಂತೆ ಎಚ್ಚರ ವಹಿಸಲು ಸೂಚನೆ

ವೈದ್ಯರೊಂದಿಗೆ ಸಿಮ್ಸ್ ಆಸ್ಪತ್ರೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಭೆ
ಚಾಮರಾಜನಗರ: ನಗರದ ಹೊರವಲಯದ ಸಿಮ್ಸ್ ಆಸ್ಪತ್ರೆಯಲ್ಲಿಕೋವಿಡ್ ಸೋಂಕು ತಡೆಯಲು
ಕೈಗೊಳ್ಳಬೇಕಾದ ಮುನ್ನೇಚ್ಚರಿಕೆ ಕ್ರಮಗಳ ಬಗ್ಗೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರಅಧ್ಯಕ್ಷತೆಯಲ್ಲಿ
ವೈದ್ಯರ ಸಭೆ ನಡೆಯಿತು.

ಜಿಲ್ಲೆಯಲ್ಲಿ ಕೋವಿಡ್ ಹರಡದಂತೆ ಎಲ್ಲ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ನಡೆದಂತಹ ಆಕ್ಸಿಜನ್ ದುರಂತ ಯಾವುದೇ ಕಾರಣಕ್ಕೂ ಮರುಕಳಿಸಬಾರದು ಎಂದು ವೈದ್ಯರಿಗೆ ಸೂಚಿಸಿದರು.

ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ವಾರ್ಡ್, ಹಾಸಿಗೆ ಸಿದ್ದಪಡಿಸಬೇಕು. ಆಕ್ಸಿಜನ್ ಘಟಕ, ಸಿಲಿಂಡರ್‍ಗಳು ಭರ್ತಿಯಾಗಿರಬೇಕು. ಐಸೋಲೇಷನ್ ವಾರ್ಡ್ ಸಜ್ಜಾಗಿರಬೇಕು. ಔಷಧ ಸಂಗ್ರಹಿಸಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.

ಸಿಮ್ಸ್ ಡೀನ್ ಡಾ.ಮಂಜುನಾಥ್ ಮಾತನಾಡಿ, ಸಾಕಷ್ಟು ಆಕ್ಸಿಜನ್, ಹಾಗೂ ಸಿಲಿಂಡರ್‍ಗಳಿವೆ. ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರಿಗೆ ಚಿಕತ್ಸೆ ನೀಡಲು ಎಲ ್ಲತಯಾರಿ ಮಾಡಲಾಗಿದೆ. ಸಿಮ್ಸ್‍ನಲ್ಲಿ ಮತ್ತು ನಗರದ ಜಿಲ್ಲಾಸ್ಪತ್ರೆಯಲ್ಲಿ ತಲಾ ಒಂದೊಂದು ಆಕ್ಸಿಜನ್ ಘಟಕಗಳಿದ್ದು, ಸಾಕಷ್ಟು ಸಂಗ್ರಹವಿದೆ. ಆಕ್ಸಿಜನ್ ಸಿಲಿಂಡರ್‍ಗಳ ಕೊರತೆಯು ಇಲ್ಲ ಎಂದು ಸಭೆಯ ಗಮನಕ್ಕೆ ತಂದರು. ಬಳಿಕ ಶಾಸಕರು ಆಸ್ಪತ್ರೆಯ ಐಸಿಯು ಘಟಕ, ಎಂಆರ್‍ಐ ಸ್ಕ್ಯಾನಿಂಗ್‍ಯಂತ್ರೋಪಕರಣ ಸ್ಥಾಪಿಸಲು ಉದ್ದೇಶಿಸಲು ಸ್ಥಳ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ಜನ್‍ ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರ ಹಾಗೂ ವೈದ್ಯರು ಹಾಜರಿದ್ದರು.

Leave a Reply

Your email address will not be published. Required fields are marked *