ಮೈಸೂರು: ಮೈಸೂರಿನ ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದ ಸಭಾಂಗಣದಲ್ಲಿ ಮಂಗಳವಾರ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಹೆಲ್ತ್ ಕಾರ್ಡ್ ನೋಂದಣಿ ಮಾಡಲಾಯಿತು.
ಆರೋಗ್ಯ ಮತ್ತು ಕ್ಷೇಮಕೇಂದ್ರ, ಗಂಗಾಮತಸ್ಥತ ಸಂಘ ಸುಣ್ಣದಕೇರಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹೆಲ್ತ್ಕಾರ್ಡ್ ನೊಂದಣಿಯಲ್ಲಿ ಸ್ಥಳೀಯ ನಿವಾಸಿಗಳು ಹಿರಿಯ ನಾಗರೀಕರು ಯುವಕ ಯುವತಿಯರು ನೊಂದಣಿ ಸೌಲಭ್ಯ ಪಡೆದುಕೊಂಡರು.
ಈ ಸಂದರ್ಭ ಮಾತನಾಡಿದ ಗಂಗಮತಸ್ಥರ ಸಂಘದ ಮುಖ್ಯಸ್ಥರಾದ ಗೋಪಣ್ಣ ಅವರು, ಬಡತನವು ಆರೋಗ್ಯಕ್ಕೆ ಅಡ್ಡಿಯಾಗಬಾರದು. ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡುವ ಸಲುವಾಗಿ ಆರೋಗ್ಯ ಮತ್ತು ಕ್ಷೇಮಕೇಂದ್ರದಿಂದ ಎಲ್ಲಾರಿಗೂ ಈ ಯೋಜನೆ ಸಿಗುವಂತೆ ಆಗಬೇಕು ತಿಳಿಸಿದರು.
ನಂತರ ಮಾತನಾಡಿದ ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷರಾದ ಮಹೇಶ್ರವರು, ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಾಪಾಡಿಕೊಳ್ಳವುದೇ ಒಂದು ದೊಡ್ಡ ಜವಾಬ್ದಾರಿಯಾಗಿದೆ. ಅದರಲ್ಲು ಆಸ್ಪತ್ರೆಗೆ ಒಮ್ಮೆ ದಾಖಲಾದರೆ ಖರ್ಚು ಭರಿಸುವ ಶಕ್ತಿ ಇಲ್ಲದಂತಾಗುವುದು. ಬಡವರು, ಮಧ್ಯಮವರ್ಗದವರಿಗೆ ಇಲ್ಲಿ ನೆಡಯುತ್ತಿರುವ ಹೆಲ್ತ್ಕಾರ್ಡ್ ನೊಂದಣಿ ಉಪಯುಕ್ತವಾಗಲಿದೆ ಎಂದರು.
ನೊಂದಣಿಕಾರ್ಯಕ್ರಮದಲ್ಲಿಗಂಗಮತಸ್ಥರ ಸಮುದಾಯ ಭವನದ ಮುಖ್ಯಸ್ಥರಾದ ಗೋಪಣ್ಣ, ಅಶ್ವಥ್, ದಾಸಪ್ಪ ಹಾಜರಿದ್ದರು.