
ಬಿಳಿಗೆರೆ : ಗ್ರಾಮೀಣ ಭಾಗದ ಪ್ರತಿಭೆ ಅನ್ವೇಷಣಾ ಕಾಲೇಜಿನ ವಿದ್ಯಾರ್ಥಿನಿ ಸಿಎ ಫೌಂಡೇಷನ್ ಪರೀಕ್ಷೆ ಪಾಸು ಮಾಡುವ ಮೂಲಕ ತಂದೆ ತಾಯಿಗಳಿಗೆ ಹಾಗೂ ತಾನು ಓದಿದ, ಓದುತ್ತಿರುವ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
ಹುಣಸೂರಿನ ಸೋಮಶೆಟ್ಟಿ ಮತ್ತು ಪದ್ಮ ದಂಪತಿ ಪುತ್ರಿ ಮೋನಿಕಾ ಎಸ್ ಅನ್ವೇಷಣಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡಿ, ಕಾಲೇಜಿನಲ್ಲಿ ಸಿಎ ಪರೀಕ್ಷೆಯ ಬಗ್ಗೆ ದೊರೆತ ತರಬೇತಿಯಿಂದ ಪ್ರೇರಣೆಗೊಂಡು ಮಂಗಳೂರಿನ ಕಾಲೇಜೊಂದರಲ್ಲಿ ತನ್ನ ಮುಂದಿನ ತರಬೇತಿ ಪಡೆದು ಇದೀಗ ಸಿಎ ಫೌಂಡೇಷನ್ ಪರೀಕ್ಷೆ ಪಾಸು ಮಾಡಿದ್ದು, ತನ್ನ ಗುರಿಯನ್ನು ಸಾಕಾರಗೊಳಿಸಿಕೊಳ್ಳುವ ಧೈರ್ಯವನ್ನು ಹೊಂದಿದ್ದಾಳೆ.
ಈಕೆಯ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅನ್ವೇಷಣಾ ಸಂಸ್ಥೆಯ ಸಂಸ್ಥಾಪಕರಾದ ಹೆಚ್.ಕೆ.ಚಂದ್ರಮೋಹನ್ ಅವರು ಇಂತಹ ಅನೇಕ ಪ್ರತಿಭೆಗಳಿಗೆ ನಮ್ಮ ಸಂಸ್ಥೆ ದಾರಿದೀಪವಾಗಿದ್ದು, ಮುಂದೆಯು ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸುವ ಕೆಲಸದಲ್ಲಿ ನಿರಂತರ ಪ್ರಯತ್ನ ಮಾಡುತ್ತಿರುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.