ಚಾಮರಾಜನಗರ ನಗರಸಭೆಯಲ್ಲಿ ಬಿ. ಖಾತ ಆಂದೋಲನ ಯಶಸ್ವಿ ನಿರ್ವಹಣೆಗೆ ಸಭೆ

ಚಾಮರಾಜನಗರ: ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದಂತೆ ಬಿ ಖಾತ ಆಂದೋಲನವನ್ನು 3 ತಿಂಗಳಲ್ಲಿ ಯಶಸ್ವಿಯಾಗಿ ನಿರ್ವಹಿಸುವ ಸಂಬಂಧ ಇಂದು ಸಭೆ ನಡೆಯಿತು.

ನಗರಸಭೆ ಅಧ್ಯಕ್ಷರಾದ ಎಸ್. ಸುರೇಶ್, ಉಪಾಧ್ಯಕ್ಷರಾದ ಮಮತ ಹಾಗೂ ನಗರಸಭಾ ಸದಸ್ಯರು, ಪೌರಾಯುಕ್ತರಾದ ಎಸ್.ವಿ. ರಾಮ ದಾಸ್ ಸಮ್ಮುಖದಲ್ಲಿ ನಗರಸಭೆ ಕಚೇರಿಯಲ್ಲಿ ಸಭೆ ನಡೆಯಿತು.

ನಗರಸಭಾ ಸದಸ್ಯರಿಗೆ ಬಿ ಖಾತೆ ಆಂದೋಲನದ ಬಗ್ಗೆ ಮಾಹಿತಿ ನೀಡಲಾಯಿತು. ಆಂದೋಲನವನ್ನು ಯಶಸ್ವಿಗೊಳಿಸಲು ಸಹಕರಿಸಲು ಕೋರಲಾಯಿತು. ಬಿ ಖಾತೆ ಮಾಡುವುದರಿಂದ ನಗರಸಭೆಗೆ ಆದಾಯ ಬರುವುದಲ್ಲದೆ ಮುಂದೆ ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ಮಾಡಬಹುದು. ಈಗಾಗಲೇ ಎಲ್ಲಾ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಬಹುತೇಕ ಒದಗಿಸಲಾಗಿದೆ. 

ಸಾರ್ವಜನಿಕರು ಬಿ. ಖಾತೆ ಆಂದೋಲನ ಸದುಪಯೋಗಪಡಿಸಿಕೊಂಡು ಬಿ ಖಾತೆ ಪಡೆಯಲು ಅವಶ್ಯಕತೆ ಇರುವ 10 ದಾಖಲಾತಿಗಳನ್ನು ನೀಡಿ ಪಡೆಯಬಹುದು. ಇದಕ್ಕಾಗಿ ನಗರಸಭೆ ಕಚೇರಿಯಲ್ಲಿ ಮೂರು ಕೌಂಟರ್‍ಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಎಲ್ಲರು ಸಹಕರಿಸಬೇಕೆಂದು ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *