ಚಾಮಲ್ ನಿಂದ 2024ರ ದಿನದರ್ಶಿಕೆ ಬಿಡುಗಡೆ

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟದಿಂದ 2024ರ ನೂತನ ದಿನದರ್ಶಿಕೆ ಹಾಗೂ ಡೈರಿಯನ್ನು ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ಬಿಡುಗಡೆ ಮಾಡಿದರು.

ಕುದೇರಿನಲ್ಲಿ ಚಾಮುಲ್ ಕಚೇರಿ ಸಭಾಂಗಣದಲ್ಲಿ ನೂತನ ದಿನದರ್ಶಿಕೆ ಹಾಗೂ ಡೇರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ದಿ ಹಾಗೂ ಹೈನುಗಾರರ ಪ್ರಗತಿಗೆ ಜಿಲ್ಲಾ ಹಾಲು ಒಕ್ಕೂಟ ಶ್ರಮಿಸುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹೈನುಗಾರರು ಗುಣಮಟ್ಟದ ಹಾಲು ಪೊರೈಕೆ ಮಾಡುವ ಪ್ರಗತಿಗೆ ಮುಂದಾಗಬೇಕು ಎಂದರು.

ನೂತನ 2024ರ ವರ್ಷವು ರೈತಾಪಿ ವರ್ಗಕ್ಕೆ ಒಳ್ಳೆಯದನ್ನು ಮಾಡಲು. ಮಳೆ, ಬೆಳೆ ಸಮೃದ್ದಿಯಾಗಿ ಒಕ್ಕೂಟಕ್ಕೆ ಇನ್ನು ಹೆಚ್ಚಿನ ಹಾಲು ಶೇಖರಣೆ ಮಾಡಿ, ಗ್ರಾಹಕರಿಗೆ ಗುಣಮಟ್ಟದ ತಾಜಾ ನಂದಿನಿ ಹಾಲು ಉತ್ಪನ್ನಗಳನ್ನು ನೀಡಲಿ ಎಂದು ಶುಬ ಕೊರಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯು ನೂತನ ಕ್ಯಾಲೆಂಡರ್ ಹಾಗೂ ಡೈರಿಯನ್ನು ಪ್ರಕಟಸಿ, ಹೊರ ತರಲಾಗುತ್ತಿದೆ. ನಂದಿನಿ ಮಾರಾಟಗಾರರು ಹಾಗೂ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಡೇರಿ ಹಾಗೂ ಕ್ಯಾಲೆಂಡರ್ ಅವನ್ನು ಪಡೆದುಕೊಂಡು ಒಕ್ಕುಟಕ್ಕೆ ಹೆಚ್ಚಿನ ಬೆಂಬಲ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಚಾಮುಲ್ ನಿರ್ದೇಶಕರಾದ ಎಚ್.ಎಸ್. ಬಸವರಾಜು, ಎಚ್.ಎಸ್. ನಂಜುಂಡಪ್ರಸಾದ್, ಸದಾಶಿವಮೂರ್ತಿ, ಉದ್ದನೂರು ಪ್ರಸಾದ್, ಎಂ.ಪಿ. ಸುನೀಲ್, ಶಾಹುಲ್ ಅಹಮದ್, ಒಕ್ಕೂಟದ ಅಧಿಕಾರಿಗಳಾದ ಶ್ರೀಕಾಂತ್, ಶಿವಪ್ರಸಾದ್, ಪ್ರಸಾದ್, ಸೋಮಶೇಖರ್, ಗೋವಿಂದರಾಜು ಇತರರು ಇದ್ದರು.

Leave a Reply

Your email address will not be published. Required fields are marked *