ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು, ಮೌಲಾನ್ ಅಬ್ದುಲ್ ಕಲಾಂ ಅಜಾದ್ ಜಯಂತಿ

ಚಾಮರಾಜನಗರ: ಬ್ರಿಟಿಷರ ವಿರುದ್ದ ಮೊದಲ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ವೀರ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಉತ್ತಮ ಆಡಳಿತ ನೀಡಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು, ಕೇಂದ್ರ ಪ್ರಥಮ ಶಿಕ್ಷಣ ಸಚಿವರಾಗಿದ್ದ ಮೌಲನಾನ್ ಅಬ್ದುಲ್ ಕಲಾಂ ಅಜಾಧ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದ ಮಹಾಪುರುಷರು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಬಣ್ಣಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ ಹಾಗೂ ಶಿಕ್ಷಣ ತಜÐ ಮೌಲನ್ ಅಬ್ದುಲ್ ಕಲಾಂ ಅಜಾದ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಬ್ಬರ ಬಾವಚಿತ್ರಕ್ಕೆ ಪುಷ್ರ್ಪಾಚನೆ ಮಾಡಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಆಡಳಿತವನ್ನು ವಿಶ್ವವೇ ಮೆಚ್ಚಿತ್ತು. ತನ್ನ ರಾಜ್ಯದ ಜನರಿಗೆ ಸುಭಿಕ್ಷೆಗಾಗಿ ದುಡಿದ ಮಹಾನ್ ಆಡಳಿತಗಾರ. ರೇಷ್ಮೆ ಕೃಷಿಗೆ ಉತ್ತೇಜನ ನೀಡಿದ್ದರು. ಬ್ರಿಟಿಷರ ಕಾಯ್ದೆಗಳ ವಿರುದ್ದ ಧ್ವನಿ ಎತ್ತಿ, ಪದೇ ಪದೇ ಅವರ ಮೇಲೆ ಯುದ್ದ ಮಾಡಿ ಜಯಗಳಿಸುತ್ತಿದ್ದ ಟಿಪ್ಪುವಿನ ಬಗ್ಗೆ ಭಯ ಇತ್ತು. ಇಂಥ ಮಹಾನ್ ಹೋರಾಟಗಾರ ಜಯಂತಿಯನ್ನು ಅಚರಣೆ ಮಾಡುವುದು ನಮ್ಮೇಲ್ಲರ ಪುಣ್ಯ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಟಿಪ್ಪು ಸುಲ್ತಾನ್ ಮತ್ತು ಆಜಾದ್ ಅವರು ಸೇವೆಯನ್ನು ದೇಶ ಸ್ಮರಿಸಿಕೊಳ್ಳಬೇಕಾಗಿದೆ. ಶುತ್ರಗಳಿಗೆ ಸಿಂಹಸ್ವಪ್ನವಾಗಿ, ಯುದ್ದವನ್ನು ಸಾರಿ ಜಯಿಸುವ ಜೊತೆಗೆ ಉತ್ತಮ ಆಡಳಿತಗಾರರು ಸಹ ಆಗಿದ್ದರು. ಅವರ ಅವಧಿಯಲ್ಲಿ ಜಾರಿಯಾದ ಅನೇಕ ಯೋಜನೆಗಳ ಇದಕ್ಕೆ ಸಾಕ್ಷಿಯಾಗಿದೆ. ಹಿಂದೂ ಮುಸ್ಲಿಂರೊಂದಿಗೆ ಐಕ್ಯತಾ ಭಾವನೆಯನ್ನು ಹೊಂದಿ ಎಲ್ಲರಿಗೂ ಸಹ ನ್ಯಾಯ ಕಲ್ಪಿಸಲು ಮುಂದಾಗಿದ್ದರು. ಅದೇ ರೀತಿ ಸ್ವಾತಂತ್ರ್ಯ ಪ್ರಥಮ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಅಮೌನ್ ಅಬ್ದುಲ್ ಕಲಾಂ ಅಜಾದ್ ಅವರು ಸೇವೆಯು ಅನನ್ಯ. ಇಂಥ ಮಹಾನ್ ಸಾಧಕರ ಜನ್ಮ ದಿನದಂದು ನಾವೆಲ್ಲರು ಭಾಗವಹಿಸಿರುವುದು ನಮ್ಮೇಲ್ಲರ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್. ಮಹದೇವ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಮಹಮದ್ ಆಸ್ಗರ್, ಎ.ಎಸ್. ಗುರುಸ್ವಾಮಿ, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಕೆಪಿಸಿಸಿ ಸದಸ್ಯ ಸೈಯದ್ ರಫಿ, ಎಎಚ್‍ಎನ್ ಖಾನ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಷರೀಪ್, ಬ್ಲಾಕ್ ಅದ್ಯಕ್ಷ ಇಮ್ರಾನ್ ಅಹಮದ್, ಮುನ್ನಾವರ್ ಬೇಗಂ, ಅಯುಬ್ ಖಾನ್, ಯುವ ಕಾಂಗ್ರೆಸ ಅಧ್ಯಕ್ಷ ಅಬ್ದುಲ್ ಅಜೀಜ್, ಇರ್ಷಾದ್, ಮುಖಂಡರಾದ ಶಿವಮೂರ್ತಿ, ರಾಮಸಮುದ್ರ ನಾಗರಾಜು, ಪುಟ್ಟಸ್ವಾಮಿ, ಕರಿನಂಜನಪುರ ಸ್ವಾಮಿ, ಮೊದಲಾದವರು ಇದ್ದರು.

Leave a Reply

Your email address will not be published. Required fields are marked *