ಚಾಮರಾಜನಗರ: ಗಾಳೀಪುರ ಬಳಿ ವರ್ತುಲ ರಸ್ತೆಯಲ್ಲಿ 1 ಕೋಟಿ ವೆಚ್ಚದ ಜಿಲ್ಲಾ ಪಾಲಿಕ್ಲಿನಿಕ್ ಮತ್ತು ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, 1 ಕೋಟಿ ರು. ವೆಚ್ಚದಲ್ಲಿ ಸಸುಜ್ಜಿತ ಪಶುವೈದ್ಯಕೀಯ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ, ಬಳಕೆ ಮುಕ್ತಗೊಳಿಸಲಾ ಗುವುದು ಎಂದು ತಿಳಿಸಿದರು.
ಗುಣಮಟ್ಟ ಕಾಮಗಾರಿಯನ್ನು ಕಾಯ್ದುಕೊಳ್ಳಬೇಕು. ಪಶುಪಾಲನಾ ಇಲಾಖೆ ಅಧಿಕಾರಿ ಕಾಮಗಾರಿಯನ್ನು ಆಗಿಂದ್ದಾಗಿ ಪರಿಶೀಲಿಸಿ. ಈ ನಿಟ್ಟಿನಲ್ಲಿ ಎಲ್ಲಾರು ಒಟ್ಟಾಗಿ ಕೆಲಸ ಮಾಡುವ ಮೂಲಕ ಪಶುವೈದ್ಯಕೀಯ ಆಸ್ಪತ್ರೆಯ ನಿರ್ಮಾಣಕ್ಕೆ ಸಹಕರಿಸಿ ಎಂದು ಸಲಹೆ ನೀಡಿದರು.
ಚಾಮರಾಜನಗರ ಜಿಲ್ಲೆಯ ಹೆಚಿನ ಪ್ರದೇಶ ಗ್ರಾಮೀಣ ಭಾಗವಾಗಿದ್ದು, ಹೈನುಗಾರಿಕೆಯೇ ಪ್ರಮುಖ ವೃತ್ತಿಯಾಗಿದ್ದು ಹಲವಾರು ಕುಟುಂಬಗಳು ಹೈನುಗಾರಿಕೆಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ರಾಸುಗಳಿಗೆ ತೊಂದರೆಯಾದಲ್ಲಿ ಕುಟುಂಬದ ಆಧಾರವೇ ಕಳಚಿ ಬಿದ್ದಾಂತಾಗುತ್ತದೆ. ಹಾಗಾಗಿ ಗ್ರಾಮಸ್ಥರು ಸತತ ಪ್ರಯತ್ನ ಮಾಡಿದ್ದರ ಫಲವಾಗಿ ನೂತನ ಪಶುವೈದ್ಯಕೀಯ ಆಸ್ಪತ್ರೆ ಮತ್ತು ಕಟ್ಟಡ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿಆಸ್ಪತ್ರೆ ನಿರ್ಮಾಣವಾಗಿರುವುದರಿಂದ ಸುತ್ತಮುಲಿನ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ. ವೈದ್ಯಕೀಯ ಸೇವೆ ರಾಸುಗಳಿಗೆ ತ್ವರಿತವಾಗಿ ದೊರೆಯುವಂತಾಗಲು ಉಪಯುಕ್ತವಾಗಿದೆ ಎಂದರು.
ಚಾಮರಾಜನಗರ ಜಿಲ್ಲಾ ಚಾಮರಾಜನಗರ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಕೆಸಿಪಿಎಫ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್, ಉಪ ನಿರ್ದೇಶಕ ಡಾ. ಹನುಮೇಗೌಡ, ಜಿಲ್ಲಾ ಪಾಲಿಕ್ಲಿನಿಕ್ಉ
ಪನಿರ್ದೇಶಕ ಡಾ. ರಾಜಣ್ಣ, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ಶಿವಣ್ಣ , ಡಾ. ಮೂರ್ತಿ ಪಿ. ಎಂ ಡಾ. ಸಿಂಧು, ಪಶುವೈದ್ಯಾಧಿಕಾರಿ ಡಾ. ಲಕ್ಷ್ಮಿಸಾಗರ್ ಪಶುವೈದ್ಯಾಧಿಕಾರಿ ಮತ್ತು ಇಲಾಖೆಯ ಅಧಿಕಾರಿ ಸಿಬ್ಬಂದಿಯವರು ಹಾಜರಿದ್ದರು.
