
ಚಾಮರಾಜನಗರ: ಧಮ್ಮ ಚಕ್ರ ಪರಿವರ್ತನ ದಿನಾಚರಣೆ ಅಂಗವಾಗಿ ನಾಗಪುರ ಡಾ. ಬಿ. ಆರ್. ಅಂಬೇಡ್ಕರ್ರವರ ದೀಕ್ಷಾಭೂಮಿಗೆ ನಗರದಿಂದ ತೆರಳಿದ ಭಾರತೀಯ ಭೌದ್ದ ಮಹಾಸಭಾದ ಜಿಲ್ಲಾ ಶಾಖೆಯ 26 ಮಂದಿ ತಂಡಕ್ಕೆ ನಗರದ ರೈಲ್ವೆ ನಿಲ್ದಾಣದಲ್ಲಿ ಶಾಖೆಯ ಜಿಲ್ಲಾಧ್ಯಕ್ಷ ಆರ್.ಬಸವರಾಜು ಬೀಳ್ಕೊಟ್ಟು ಶುಭ ಕೋರಿದರು.
ಬಳಿಕ ಮಾತನಾಡಿದ ಅವರು, ಏಷ್ಯಾಖಂಡದ ಬಹದೊಡ್ಡ ಹಬ್ಬವೇ ಅಶೋಕ ವಿಜಯದಶಮಿ. ಸಾಮ್ರಾಟ್ ಅಶೋಕ್ ಕಳಿಂಗ ಯುದ್ದ ಗೆದ್ದು ಸಾವು, ನೋವುಗಳ ದುಷ್ಪರಿಣಾಮದಿಂದ ಬೌದ್ದಭಿಕ್ಕು ಮೊಗ್ಗಲಿಪುತ್ತ ತಿಸ್ಸಾರವರಿಗೆ ಖಡ್ಗವನ್ನು ಒಪ್ಪಿಸಿಬೌದ್ದಧಮ್ಮ ಸ್ವೀಕರಿಸಿದ ದಿನವನ್ನು ಅಶೋಕ ವಿಜಯದಶಮಿ ಎಂದು ಆಚರಿಸಲಾಗುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ರವರು ೫ ಸಾವಿರ ವರ್ಷಗಳ ಇತಿಹಾಸವನ್ನು ಅಧ್ಯಯನ ಮಾಡಿ ಅಶೋಕ ವಿಜಯದಶಮಿ ದಿನದಂದು ನಾಗಪುರದಲ್ಲಿ ಬೌದ್ದಧಮ್ಮ ಸ್ವೀಕರಿಸಿ ಚರಿತ್ರೆ ನಿರ್ಮಿಸಿದರು. ಅಂತಹ ಪವಿತ್ರ ಸ್ಥಳಕ್ಕೆ ತೆರಳುತ್ತಿರುವ ಭಾರತೀಯ ಭೌದ್ದ ಮಹಾಸಭಾದ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಕೋರಿದರು.