ಡಾ.ವಿಷ್ಣುವರ್ಧನ್ ರವರ 14ನೇ ವರ್ಷದ ಪುಣ್ಯಸ್ಮರಣೆ

ವಿಷ್ಣುವರ್ಧನ್ ಅವರ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿದ ಅಭಿಮಾನಿಗಳು

ಚಾಮರಾಜನಗರ: ನಗರದ 15ನೇ ವಾರ್ಡ್ನ ಬಾಬುಜಗಜೀವನರಾಂ ಬಡಾವಣೆಯಲ್ಲಿ ಸಾಹಸಿ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿ ಸಂಘದ ವತಿಯಿಂದ  ಡಾ.ವಿಷ್ಣುವರ್ಧನ್ ಅವರ ಕಟೌಟ್‌ಗೆ ಕ್ಷೀರಾಭಿಷೇಕ ಮಾಡುವ ಮೂಲ ಅವರ  14ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.

ವಾರ್ಡ್ ನ  ಸದಸ್ಯ ಆರ್.ಪಿ.ನಂಜುಂಡಸ್ವಾಮಿ ವಿಷ್ಣುವರ್ಧನ್ ಅವರ ಕಟೌಟ್‌ಗೆ ಪುಷ್ಷಾರ್ಚನೆ ಮಾಡಿ ಮಾತನಾಡಿ, ವಿಷ್ಣುವರ್ಧನ್‌ರವರು ಅಗಲಿ ೧೩ ವರ್ಷಗಳಾದರೂ ಇಂದಿಗೂ ಅವರನ್ನು ಸ್ಮರಿಸುತ್ತಲೇ ಇರುತ್ತಾರೆ. ಅವರ ಸಿನಿಮಾಗಳು ಅವರ ವ್ಯಕ್ತಿತ್ವವನ್ನು ಸದಾ ಜೀವಂತವಾಗಿಟ್ಟಿವೆ. ಅಭಿಮಾನಿಗಳು ತಮ್ಮ ಮೆಚ್ಚಿನ  ನಟನ ಹೆಸರು ಸದಾ ಹಸಿರಾಗಿರುವಂತೆ ನಾನಾ ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದ್ದಾರೆ. ಅದೇ ರೀತಿ ವಾರ್ಡ್ನ ಸಾಹಸಿ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿ ಸಂಘ ಪದಾಧಿಕಾರಿಗಳು  ವಿಷ್ಣುವರ್ಧನ್ ರವರ ಅಭಿಮಾನಗಳು ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣ ಆಚರಣೆ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ  ಮುಖಂಡರಾದ ಎಚ್. ಎಚ್. ನಾಗರಾಜು, ಚಾ. ಗು. ನಾಗರಾಜು, ಸಿದ್ದಪ್ಪ, ರೇವಣ್ಣ, ಲಿಂಗಣ್ಣ, ರಾಮಣ್ಣ, ಚಿನ್ನಸ್ವಾಮಿ, ಸಾಹಸಿ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿ ಸಂಘ ಅಧ್ಯಕ್ಷ ಪ್ರಭು, ಕಾರ್ಯದರ್ಶಿಗಳಾದ ಲಿಂಗರಾಜು, ಗಿರಿ, ಸೋಮು, ನಾಗರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *